
ಹುಟ್ಟುಹಬ್ಬದಂದು ಗಿಡ ನೆಟ್ಟು ಬೆಳೆಸಿ: ಕೃಷ್ಣಪ್ಪ
Team Udayavani, Jun 11, 2019, 5:00 AM IST

ಮಹಾನಗರ: ಸುಭದ್ರ ಭವಿಷ್ಯಕ್ಕಾಗಿ ಪರಿಸರ ಉಳಿಸಬೇಕು. ಪ್ರತಿಯೊಬ್ಬರೂ ಹುಟ್ಟುಹಬ್ಬಕ್ಕೆ ಗಿಡವನ್ನು ನೆಟ್ಟು ಬೆಳೆಸುವುದಕ್ಕೆ ಬದ್ಧರಾಗಬೇಕು ಎಂದು ನ್ಯಾಶನಲ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಶನ್ ನಿವೃತ್ತ ಉದ್ಯೋಗಿ, ವೃಕ್ಷಪ್ರೇಮಿ ಹಸಿರು ಕೃಷ್ಣಪ್ಪ ಹೇಳಿದರು.
ಶನಿವಾರ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಆಡಳಿತದಲ್ಲಿರುವ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಶ್ರೀ ಭಾರತೀ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಪರಿಸರ ದಿನಾಚರಣೆಯಲ್ಲಿ ಗಿಡವನ್ನು ನೆಟ್ಟು ಅವರು ಮಾತನಾಡಿದರು. ಕಾಡು ಉಳಿಸಿದಾಗ ನಾಡು ಉಳಿಯುತ್ತದೆ. ಗಿಡ ಮರ ಬೆಳೆಸಿ, ಮಂಗಳೂರನ್ನು ಉಳಿಸುವ ಪಣ ತೊಡಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಉಸಿರಾಗಬೇಕು ಎಂದರು.
ನೀರಿನ ದುರ್ಬಳಕೆ ನಿಲ್ಲಿಸಿ
ಆಡಳಿತಾಧಿಕಾರಿ ಪ್ರೊ| ಶಂಕರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರಿನ ದುರ್ಬಳಕೆಯನ್ನು ನಿಲ್ಲಿಸಬೇಕು. ದೇಶದಲ್ಲಿ ಶೇ.20ಕ್ಕಿಂತ ಕಡಿಮೆ ಇರುವ ಕಾಡನ್ನು ಶೇ.40ಕ್ಕೆ ಏರಿಸಬೇಕು. ಯುವಕರು ಕರ್ತವ್ಯಬದ್ಧರಾದಾಗ ಇದು ಸಾಧ್ಯವಾಗುತ್ತದೆ. ಸ್ವತ್ಛ ಮತ್ತು ಹಸುರು ದೇಶವನ್ನಾಗಿಸಲು ವಿದ್ಯಾರ್ಥಿ ಜೀವನದಲ್ಲೇ ಪಣತೊಡಬೇಕು ಎಂದು ಹೇಳಿದರು.
ಮರಗಳನ್ನು ನಾಶ ಮಾಡದಿರಿ
ಪದವಿ ಕಾಲೇಜು ಪ್ರಾಂಶುಪಾಲ ಜೀವನ್ದಾಸ್ ಎ. ಅವರು ಮಾತನಾಡಿ, ಪರಿಸರ ಸ್ವತ್ಛವಾದಾಗ ಗಿಡ ಮರಗಳಲ್ಲಿ ಪ್ರೀತಿ ಹೆಚ್ಚಾದಾಗ ಸಮಾಜಕ್ಕೆ ಪ್ರಯೋಜನವಾಗುತ್ತದೆ. ಆದುದರಿಂದ ಮರಗಳನ್ನು ನಾಶ ಮಾಡದೇ ಉಳಿಸಿ, ಬೆಳೆಸುವ ಪ್ರಯತ್ನವಾಗಬೇಕು ಎಂದರು.
ಪ.ಪೂ. ಪ್ರಾಂಶುಪಾಲೆ ವಿದ್ಯಾ ಭಟ್ ಉಪಸ್ಥಿತರಿದ್ದರು. ಪಲ್ಲವಿ ಸ್ವಾಗತಿಸಿದರು. ಧನುಷ್ ನಿರೂಪಿಸಿದರು. ಮೋಹಿತ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸಿಂಚನಾ ವಂದಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dr. TMA Pai Convention Centre; 3 ದಿನಗಳ “ಬಿಗ್ ಬ್ರ್ಯಾಂಡ್ಸ್ ಎಕ್ಸ್ಪೋಗೆ’ ಚಾಲನೆ

Mulki: ವಿಜಾಪುರದ ರಸ್ತೆ ಸಮಸ್ಯೆಗೆ ಮೂಲ್ಕಿಯಲ್ಲಿ ಟವರ್ ಏರಿ ಪ್ರತಿಭಟನೆ!

Surathkal: ಭೀಕರ ರಸ್ತೆ ಅಪಘಾತ; ಓರ್ವ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ

Mangaluru ಪಿಡಿಒಗಳ ಅಕಾಲಿಕ ವರ್ಗಾವಣೆ, ನಾಗರಿಕ ಸೇವೆಗಳಲ್ಲಿ ವ್ಯತ್ಯಯ

Cauvery water dispute ತಟ್ಟದ ಬಂದ್ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ
MUST WATCH
ಹೊಸ ಸೇರ್ಪಡೆ

Panaji ಮತ್ತೆ ಗೋವಾದಲ್ಲಿ ಮಳೆಯ ಆರ್ಭಟ; ಹಲವೆಡೆ ರಸ್ತೆಗಳು ಜಲಾವೃತ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

Madhya Pradesh: ಭೋಪಾಲ್ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ