ಕುವೈಟ್ ಕನ್ನಡಿಗರಿಗೆ ಸ್ಪಂದನೆ: ಜೂ. 16ಕ್ಕೆ ಕುವೈಟ್-ಬೆಂಗಳೂರು ವಿಮಾನ ಆಗಮನ ಸಾಧ್ಯತೆ
Team Udayavani, Jun 4, 2020, 11:56 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಕುವೈಟ್ನಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆತರುವ ಪ್ರಯತ್ನ ಕೊನೆಗೂ ಸಫಲಗೊಂಡಿದ್ದು, “ವಂದೇ ಭಾರತ್ ಮಿಷನ್’ನಡಿ ಜೂ. 16ರಂದು ಕುವೈಟ್ನಿಂದ ಬೆಂಗಳೂರಿಗೆ ಮೊದಲ ವಿಮಾನ ಆಗಮಿಸುವ ಸಾಧ್ಯತೆಯಿದೆ. ಕುವೈಟ್ನಲ್ಲಿರುವ ಅನಿವಾಸಿ ಕನ್ನಡಿಗರಿಗೆ ನೆರವಾಗುವ ನಿಟ್ಟಿನಲ್ಲಿ ಬೆಂಗಳೂರು ಅಥವಾ ಮಂಗಳೂರಿಗೆ ವಿಮಾನ ವ್ಯವಸ್ಥೆ ಮಾಡಿಕೊಡುವ ಬಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಕುವೈಟ್ ಕನ್ನಡಿಗರಿಗೆ ಈ ಹಿಂದೆ ಭರವಸೆ ನೀಡಿದ್ದರು. ಮೇ 17ರಿಂದ ಜೂ. 13ರ ವರೆಗಿನ ಏರ್ ಇಂಡಿಯಾದ ವಿಮಾನಗಳ ವೇಳಾಪಟ್ಟಿಯಲ್ಲಿ ಕುವೈಟ್ನಿಂದ ಮಂಗಳೂರು ಅಥವಾ ಬೆಂಗಳೂರಿಗೆ ವಿಮಾನ ಸಂಚಾರದ ಬಗ್ಗೆ ಉಲ್ಲೇಖವಾಗಿರಲಿಲ್ಲ. ಆದರೆ, ಇದೀಗ ಕೇರಳ ಕುವೈಟ್ ಮುಸ್ಲಿಂ ಅಸೋಸಿಯೇಶನ್ ಕರ್ನಾಟಕ ಶಾಖೆಯವರು, ಕುವೈಟ್ನಲ್ಲಿರುವ ಅನಿವಾಸಿ ಕನ್ನಡಿಗ ಮಂಜೇಶ್ವರ ಮೋಹನ್ದಾಸ್ ಕಾಮತ್ ಹಾಗೂ ಅಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಹಕಾರದೊಂದಿಗೆ ಜೂ. 16ರಂದು ಯೋಜನೆಯಡಿ ಕುವೈಟ್ನಿಂದ ವಿಮಾನ ಬೆಂಗಳೂರಿಗೆ ಹೊರಡುವುದು ಬಹುತೇಕ ಖಚಿತಗೊಂಡಿದೆ.
ಕುವೈಟ್ನಲ್ಲಿ ರಾಜ್ಯದ ಸುಮಾರು 50,000 ಜನರು, ಕರಾವಳಿ ಭಾಗದ 35,000 ಜನರು ಇದ್ದಾರೆ. ಈ ಪೈಕಿ ಗರ್ಭಿಣಿಯರು, ಕೆಲಸ ಕಳೆದುಕೊಂಡವರು, ಆರೋಗ್ಯ ತಪಾಸಣೆಗೆ ಬಯಸುವವರು ಸಹಿತ ಸುಮಾರು 3,000ಕ್ಕೂ ಹೆಚ್ಚು ಮಂದಿ ಕರ್ನಾಟಕಕ್ಕೆ ತುರ್ತಾಗಿ ಆಗಮಿಸುವ ನಿರೀಕ್ಷೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ