ಅಡ್ಡೂರು ಸೇತುವೆ ತಳದಲ್ಲೇ ಮರಳುಗಾರಿಕೆ: ಸಕ್ರಮವಾಗಿದ್ದರೂ ಸೇತುವೆಗೆ ಅಪಾಯದ ಭೀತಿ


Team Udayavani, Jan 31, 2023, 6:35 AM IST

ಅಡ್ಡೂರು ಸೇತುವೆ ತಳದಲ್ಲೇ ಮರಳುಗಾರಿಕೆ: ಸಕ್ರಮವಾಗಿದ್ದರೂ ಸೇತುವೆಗೆ ಅಪಾಯದ ಭೀತಿ

ಬಂಟ್ವಾಳ: ಸೇತುವೆಗಳು ದುರ್ಬಲವಾಗಿ ಕುಸಿಯುವ ಭೀತಿಯ ಹಿನ್ನೆಲೆಯಲ್ಲಿ ಸರಕಾರವು ಸೇತುವೆಗಳ ತಳಭಾಗದಲ್ಲಿ ಮರಳುಗಾರಿಕೆಗೆ ನಿಷೇಧ ಹೇರಿದೆ.ಆದರೆ ಮಂಗಳೂರು ಹಾಗೂ ಬಂಟ್ವಾಳ ತಾಲೂಕನ್ನು ಸಂಪರ್ಕಿಸುವ ಪೊಳಲಿ ಸಮೀಪದ ಅಡ್ಡೂರು ಸೇತುವೆಯ ತಳ ಭಾಗದಲ್ಲೇ ಅವ್ಯಾಹತವಾಗಿ ಮರಳುಗಾರಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಫಲ್ಗುಣಿ ನದಿಯಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಗೆ ಸೇರಿದ ಪ್ರದೇಶ ದಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, ಇದು ಸಕ್ರಮವೇ ಆದರೂ ಸೇತುವೆಯ ತಳ ಭಾಗದ ಜತೆಗೆ ನಿರ್ದಿಷ್ಟವಾಗಿ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಅವಕಾಶವಿಲ್ಲ ಎಂದು ಈ ಹಿಂದೆಯೇ ಸರಕಾರ ಸ್ಪಷ್ಟವಾಗಿ ಹೇಳಿತ್ತು.

ಸೇತುವೆಯ ತಳದಲ್ಲಿ ಮರಳು ಗಾರಿಕೆ ನಡೆಸಿದರೆ ಬೃಹತ್‌ ಹೊಂಡ ಗಳು ಸೃಷ್ಟಿಯಾಗಿ ಸ್ತಂಭಗಳು ದುರ್ಬಲಗೊಂಡು ಕುಸಿಯುವ ಅಥವಾ ಬಿರುಕು ಬಿಡುವ ಸಾಧ್ಯತೆ ಹೆಚ್ಚಿರುತ್ತದೆ.

ಜಿಲ್ಲಾಡಳಿತದ ಗಮನ ಅಗತ್ಯ
ಅಡ್ಡೂರು ಸೇತುವೆಯ ಪಕ್ಕದಲ್ಲಿ ಉತ್ತರ ಭಾರತ‌ದ ಕಾರ್ಮಿಕರನ್ನು ಒಳಗೊಂಡ ತಂಡಗಳು ಮರಳುಗಾರಿಕೆ ನಿರತವಾಗಿದ್ದು, ಕಾರ್ಮಿಕರು ನದಿಯ ಮಧ್ಯಕ್ಕೆ ತೆರಳಿ ಸಾಂಪ್ರದಾಯಿಕ ಶೈಲಿಯಲ್ಲಿ ಮುಳುಗಿ ಮರಳನ್ನು ದೋಣಿಯಲ್ಲಿ ತುಂಬಿಕೊಂಡು ಬರುತ್ತಿದ್ದಾರೆ. ಒಂದಷ್ಟು ದೋಣಿಗಳು ಸೇತುವೆಯಿಂದ ಕೊಂಚ ದೂರದಲ್ಲಿ ಮರಳುಗಾರಿಕೆ ನಡೆಸಿದರೆ ಕೆಲವು ಸೇತುವೆಯ ತಳಭಾಗದಲ್ಲೇ ನಿಂತಿರುತ್ತವೆ. ಇದು ಸಕ್ರಮ ಮರಳುಗಾರಿಕೆಯೇ ಆಗಿದ್ದರೂ ಸೇತುವೆಯ ತಳಭಾಗ ಹಾಗೂ ಒಂದಷ್ಟು ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ.

ಅಕ್ರಮ ಆರೋಪ
ಈ ಹಿಂದೆ ದ.ಕ.ದಲ್ಲಿ 2 ಸೇತುವೆಗಳು ಅಪಾಯಕ್ಕೆ ಸಿಲುಕಿದ ಸಂದರ್ಭದಲ್ಲೂ ಅಕ್ರಮ ಮರಳುಗಾರಿಕೆಯ ಆರೋಪ ಕೇಳಿಬಂದಿತ್ತು. 2018ರ ಜೂನ್‌ನಲ್ಲಿ ಮೂಲರಪಟ್ಣ ಸೇತುವೆ ಕುಸಿದಾಗ ಮರುಗಾರಿಕೆಯೇ ಕಾರಣ ಎಂದು ಕೆಲವರು ಆರೋಪಿಸಿದ್ದರು. 2021ರ ಜೂನ್‌ನಲ್ಲಿ ಮರವೂರು ಸೇತುವೆ ಬಿರುಕು ಬಿಟ್ಟಾಗಲೂ ಮರಳು ಗಾರಿಕೆಯ ಆರೋಪ ಕೇಳಿಬಂದಿತ್ತು.
ಆದರೆ ಈ ಎರಡು ಸೇತುವೆಗಳು ಅದೇ ಕಾರಣಕ್ಕೆ ಅಪಾಯಕ್ಕೆ ಸಿಲುಕಿವೆ ಎಂದು ಸ್ಪಷ್ಟವಾಗಿ ಹೇಳುವುದು ಅಸಾಧ್ಯವಾದರೂ ಆ ಕಾರಣವನ್ನೂ ಅಳಗಳೆಯುವಂತಿಲ್ಲ ಎನ್ನಲಾಗುತ್ತಿದೆ.

ಅಡ್ಡೂರು ಸೇತುವೆಯ ತಳಭಾಗದಲ್ಲೇ ಮರಳು ಗಾರಿಕೆ ನಡೆಯುತ್ತಿದೆಯೇ ಎಂಬ ಕುರಿತು ಪರಿಶೀಲಿೆಸಿ ಕ್ರಮ ಕೈಗೊಳ್ಳಲಾಗುವುದು.
– ರವಿಕುಮಾರ್‌ ಎಂ.ಆರ್‌. ದ.ಕ. ಜಿಲ್ಲಾಧಿಕಾರಿ

ಟಾಪ್ ನ್ಯೂಸ್

BIHULLU

ಬೈ ಹುಲ್ಲು ತುಂಬಿದ್ದ ಲಾರಿ ಬೆಂಕಿಗಾಹುತಿ: ಲಕ್ಷಾಂತರ ರೂಪಾಯಿ ನಷ್ಟ

horatti

ಗೆದ್ದಮೇಲೆ ಬೆಂಗಳೂರಿನಲ್ಲಿ ಕುಳಿತು ದುಡ್ಡು ಮಾಡುವ ವ್ಯಕ್ತಿಗೆ ಮತಹಾಕಬೇಡಿ: ಹೊರಟ್ಟಿ

arrest 3

ಹೆತ್ತವರನ್ನೇ ಹತ್ಯೆಗೈದಿದ್ದ 15ರ ಬಾಲಕಿ ಖಾಕಿ ಬಲೆಗೆ

1-asdssa-dsa

ತೆನೆ ಹೊತ್ತ ಹೆಚ್.ಆರ್.ಚನ್ನಕೇಶವ ; ಗಂಗಾವತಿಯಿಂದ ಕಣಕ್ಕೆ

1-fsadsdsd

ಉಪನಾಮ ವಿವಾದ:ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ಹೊರ ಹಾಕಿದ ಲಲಿತ್ ಮೋದಿ

tdy-19

ಉಳ್ಳಾಲ: ಹೆಜ್ಜೇನು ದಾಳಿಗೆ ಬಾವಿಯಲ್ಲಿ ಅಡಗಿ ಕುಳಿತ 79 ರ ವೃದ್ಧ

TDY-18

ಬುಡಕಟ್ಟು ಕುಟುಂಬಕ್ಕೆ ಥಿಯೇಟರ್ ಪ್ರವೇಶ ನಿರಾಕರಣೆ: ಥಿಯೇಟರ್‌ ವಿರುದ್ದ ನೆಟ್ಟಿಗರು ಗರಂ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳ್ತಂಗಡಿ: ಸವಣಾಲು ಬಳಿ ಎರಡು ಬೈಕ್‌ಗಳ ಮಧ್ಯೆ ಅಪಘಾತ; ಓರ್ವ ಸಾವು

ಬೆಳ್ತಂಗಡಿ: ಸವಣಾಲು ಬಳಿ ಎರಡು ಬೈಕ್‌ಗಳ ಮಧ್ಯೆ ಅಪಘಾತ; ಓರ್ವ ಸಾವು

ಟ್ಯೂಷನ್ ಗೆ ತೆರಳಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಕುಮಾರಧಾರ ನದಿಯಲ್ಲಿ ಪತ್ತೆ

ಟ್ಯೂಷನ್ ಗೆ ತೆರಳಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಕುಮಾರಧಾರ ನದಿಯಲ್ಲಿ ಪತ್ತೆ

3–sulya

ಕಾಣಿಯೂರು: ದೈವ ನರ್ತನದ ವೇಳೆ ಕುಸಿದು ಬಿದ್ದು ಇಹಲೋಕ ತ್ಯಜಿಸಿದ ದೈವ ನರ್ತಕ

ಬೆಳಕು ಯೋಜನೆಯಡಿ ಎಳನೀರಿನ 33 ಮನೆಗಳಿಗೆ ವಿದ್ಯುತ್‌ ಬೆಳಕು

ಬೆಳಕು ಯೋಜನೆಯಡಿ ಎಳನೀರಿನ 33 ಮನೆಗಳಿಗೆ ವಿದ್ಯುತ್‌ ಬೆಳಕು

ಧರ್ಮಸ್ಥಳ: ನೇತ್ರಾವತಿ ಸ್ನಾನಘಟ್ಟದಲ್ಲಿ ಶಾಂಪೂ, ಸಾಬೂನು ನಿಷೇಧ

ಧರ್ಮಸ್ಥಳ: ನೇತ್ರಾವತಿ ಸ್ನಾನಘಟ್ಟದಲ್ಲಿ ಶಾಂಪೂ, ಸಾಬೂನು ನಿಷೇಧ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

BIHULLU

ಬೈ ಹುಲ್ಲು ತುಂಬಿದ್ದ ಲಾರಿ ಬೆಂಕಿಗಾಹುತಿ: ಲಕ್ಷಾಂತರ ರೂಪಾಯಿ ನಷ್ಟ

likith shetty’s full meals cinema

ಲಿಖಿತ್ ಶೆಟ್ಟಿ ಅಭಿನಯದ ‘ಫುಲ್ ಮೀಲ್ಸ್’ ಪೋಸ್ಟರ್ ಬಂತು

horatti

ಗೆದ್ದಮೇಲೆ ಬೆಂಗಳೂರಿನಲ್ಲಿ ಕುಳಿತು ದುಡ್ಡು ಮಾಡುವ ವ್ಯಕ್ತಿಗೆ ಮತಹಾಕಬೇಡಿ: ಹೊರಟ್ಟಿ

1-csa-dsasad

ಮಿಸ್ಟರ್ ಹಾಲಪ್ಪ… ಅಭಿವೃದ್ಧಿ ಸಂಬಂಧ ಬಹಿರಂಗ ಚರ್ಚೆ; ಬೇಳೂರು ಸವಾಲು

arrest 3

ಹೆತ್ತವರನ್ನೇ ಹತ್ಯೆಗೈದಿದ್ದ 15ರ ಬಾಲಕಿ ಖಾಕಿ ಬಲೆಗೆ