ಜಾಗ ಮಾರಾಟ ಮಾಡುವುದಾಗಿ ಹೇಳಿ 11 ಲ.ರೂ. ವಂಚನೆ
Team Udayavani, Oct 12, 2022, 12:54 AM IST
ಮಂಗಳೂರು: ಜಾಗ ಮಾರಾಟ ಮಾಡುವುದಾಗಿ ಹೇಳಿ 11 ಲ.ರೂ. ಪಡೆದು ವಂಚಿಸಿರುವ ಬಗ್ಗೆ ನೋಯೆಲ್ ಡಿ’ಕುನ್ಹಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ದುಬಾೖಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದ ನೋಯೆಲ್ ಅವರಿಗೆ ನೆಲ್ಸನ್ ಡಿ’ಕುನ್ಹಾ ಅವರ ಮೂಲಕ ಆಗ್ನೆಲೊ ಪಿರೇರಾ ಎಂಬಾತನ ಪರಿಚಯವಾಗಿತ್ತು.
ಎಕ್ಸ್ಪಾಟ್ ಪ್ರಾಜೆಕ್ಟ್ ಆ್ಯಂಡ್ ಡೆವಲಪ್ಮೆಂಟ್ ಪ್ರೈ.ಲಿ. ಸಂಸ್ಥೆಯ ಮೂಲಕ ನೋಯೆಲ್ ಅವರಿಗೆ ಜಾಗ ಮಾರಾಟ ಮಾಡುವುದಾಗಿ ಆಗ್ನೆಲೊ ಪಿರೇರಾ ಹೇಳಿದ್ದ. ನೋಯೆಲ್ ಅವರು ಕತಾರ್ನಿಂದ ಭಾರತಕ್ಕೆ ಬಂದಾಗ ಜಾಗದ ನೋಂದಣಿ ಮಾಡಿಕೊಡುವುದಾಗಿಯೂ ಭರವಸೆ ನೀಡಿದ್ದ. ಅದರಂತೆ ನೋಯೆಲ್ ಅವರು ಆಗ್ನೆಲೊ ಪಿರೇರಾ ಅವರಿಗೆ 11 ಲ.ರೂ. ಹಣ ನೀಡಿದ್ದರು.
2019ರಲ್ಲಿ ಲಾಕ್ಡೌನ್ಗಿಂತ ಮೊದಲು ನೋಯೆಲ್ ಭಾರತಕ್ಕೆ ಬಂದಿದ್ದು ಜಾಗ ತೋರಿಸಿಕೊಡುವಂತೆ ಕೇಳಿಕೊಂಡಾಗ ಆರೋಪಿಗಳು ಜಾಗ ತೋರಿಸಲು ನಿರಾಕರಿಸಿ ವಂಚಿಸಿದ್ದಾರೆ. ಕಾನೂನು ಬಾಹಿರವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿ ವಂಚಿಸಿದ್ದಾರೆ. ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ ಎಂಬುದಾಗಿ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ