![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
Mangaluru ತಣ್ಣೀರುಬಾವಿಯಲ್ಲಿ ಕಡಲಜೀವಿಗಳಿಗೊಂದು ಸಂರಕ್ಷಣ ಕೇಂದ್ರ
Team Udayavani, Oct 9, 2023, 7:30 AM IST
![Mangaluru ತಣ್ಣೀರುಬಾವಿಯಲ್ಲಿ ಕಡಲಜೀವಿಗಳಿಗೊಂದು ಸಂರಕ್ಷಣ ಕೇಂದ್ರ](https://www.udayavani.com/wp-content/uploads/2023/10/Tannirbhavi-620x349.jpg)
ಮಂಗಳೂರು: ರಾಜ್ಯದಲ್ಲೇ ಮೊದಲ ಬಾರಿಗೆ ಕಡಲಜೀವಿಗಳ ಸಂರಕ್ಷಣ ಕೇಂದ್ರವನ್ನು ಮಂಗಳೂರಿನಲ್ಲಿ ಸ್ಥಾಪಿಸಲಾಗುತ್ತಿದೆ.
ಕಾಂಪಾ ಫಂಡ್(ಭಾರತದ ಪರಿಹಾರಾತ್ಮಕ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ)ನಡಿಯಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ಈಗಾಗಲೇ ಕೇಂದ್ರವನ್ನು ತಣ್ಣೀರುಬಾವಿ ಕಡಲ ಬಳಿ ನಿರ್ಮಿಸಲಾಗುತ್ತಿದ್ದು ಬಹುತೇಕ ಪೂರ್ಣವಾಗಿದೆ.
ಮಂಗಳೂರಿನ ಸುತ್ತಮುತ್ತ ಸಮುದ್ರದಲ್ಲಿ ಗಾಯಗೊಳ್ಳುವ ಕಡಲ ಜೀವಿಗಳನ್ನು ಇಲ್ಲಿಗೆ ತಂದು ಚಿಕಿತ್ಸೆ ನೀಡಿ ಮತ್ತೆ ಕಡಲಿಗೆ ಬಿಡುವುದು ಉದ್ದೇಶ. ಮೀನುಗಾರರ ಬಲೆಗಳಿಗೆ ಸಿಲುಕಿಯೋ, ಬೋಟ್ನ ಪ್ರಾಪೆಲ್ಲರ್ ಚಕ್ರಗಳಿಗೆ ಬಡಿದೋ ಡಾಲ್ಫಿನ್, ಶಾರ್ಕ್, ಕಡಲಾಮೆಗಳಂತಹ ಜೀವಿಗಳು ಗಾಯಗೊಳ್ಳುವ, ಸರಿಯಾದ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಳ್ಳುವ ಪ್ರಮೇಯಗಳು ಆಗಾಗ ಬರುತ್ತವೆ.
ಇಂತಹ ಸನ್ನಿವೇಶಗಳಲ್ಲಿ ಚಿಕಿತ್ಸೆ ನೀಡುವಂತಹ ಮೂಲಸೌಕರ್ಯ ಗಳಾಗಲೀ, ತಜ್ಞರಾಗಲೀ ನಮ್ಮಲ್ಲಿಲ್ಲ. ಇದನ್ನು ಗಮನದಲ್ಲಿರಿಸಿಕೊಂಡು ತಣ್ಣೀರುಬಾವಿಯಲ್ಲಿ ಈ ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.
ರಾಜ್ಯಕ್ಕೆ ಮೊದಲ ಕೇಂದ್ರ
ಪ್ರಸ್ತುತ ರಾಜ್ಯದಲ್ಲೆಲ್ಲೂ ಇಂತಹ ಕಡಲ ಜೀವಿಗಳ ಸಂರಕ್ಷಣ ಕೇಂದ್ರವಿಲ್ಲ. ಒಡಿಶಾ, ತಮಿಳುನಾಡು, ಗುಜರಾತ್ಗಳಲ್ಲಿ ಇವೆ. ನಮ್ಮಲ್ಲಿ 370 ಕಿ.ಮೀ. ಉದ್ದದ ಕಡಲ ತೀರ ಇರುವ ಕಾರಣ ಅಂತಹ ಕೇಂದ್ರ ಸ್ಥಾಪನೆಗೆ ಅರಣ್ಯ ಇಲಾಖೆ ಮುಂದಾಗಿದೆ. ಯೋಜನೆಗೆ ಅನುಮೋದನೆ ಸಿಕ್ಕಿ ಅನುದಾನ ಬಿಡುಗಡೆಯಾದ ಬಳಿಕ ತಜ್ಞರನ್ನು ನಿಯೋಜಿಸಿ ಕೇಂದ್ರವನ್ನು ಕಾರ್ಯಾ ರಂಭಿಸುವುದು ಇಲಾಖೆಯ ಸದ್ಯದ ಗುರಿ.ಮೆರೈನ್ ಸೆಲ್ಗೆ ಮರು ಜೀವ: 2 ವರ್ಷ ಹಿಂದೆ ಕಾರವಾರದಲ್ಲಿ ಅರಣ್ಯ ಇಲಾಖೆಯ ಅಧೀನದಲ್ಲಿ ಮೆರೈನ್ ಸೆಲ್ ತೆರೆಯಲಾಗಿತ್ತು. ಕಡಲ ಜೀವಿಗಳು ಗಾಯಗೊಂಡು ಬಂದು ದಡಕ್ಕೆ ಬೀಳುವಾಗ ಅವುಗಳ ಗುರುತಿಸುವಿಕೆ, ಕಡಲಿನಲ್ಲಿ ಬೇಟೆ ತಡೆ ಇತ್ಯಾದಿ ನಿಯಂತ್ರಣದ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ. ಇದು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದರೆ ಸೂಕ್ತ ತರಬೇತಾದ ಸಿಬಂದಿ ಅಗತ್ಯ.
ಕಡಲ ಬದಿಯಲ್ಲಿದ್ದರೆ ಸೂಕ್ತ
ಸಂರಕ್ಷಣ ಕೇಂದ್ರವು ತಣ್ಣೀರುಬಾವಿಯ ಟ್ರೀಪಾರ್ಕ್ನ ಮುಂಭಾಗದಲ್ಲಿದೆ. ಕಡಲಿನಿಂದ ತುಸು ದೂರದಲ್ಲಿರುವುದರಿಂದ ಅಲ್ಲಿಗೆ ಗಾಯಗೊಂಡ ದೊಡ್ಡಗಾತ್ರದ ಜೀವಿಗಳನ್ನು ಸಾಗಿಸುವುದು ಕಷ್ಟವಾಗಬಹುದು. ಕಡಲ ಪಕ್ಕದಲ್ಲೇ ಮಾಡಿದ್ದರೆ ಸುಲಭವವಾಗುತ್ತಿತ್ತು. ಇನ್ನುಳಿದ ದಾರಿಯೆಂದರೆ ಅಲ್ಲಿರುವ ಕೆರೆಯೊಂದನ್ನು ಬಳಸಿಕೊಂಡು ದೊಡ್ಡ ಜೀವಿಗಳಿಗೆ ಚಿಕಿತ್ಸೆ ನೀಡುವುದು ಹಾಗೂ ಸಣ್ಣ ಕಡಲಪ್ರಾಣಿಗಳನ್ನು ಕೇಂದ್ರಕ್ಕೆ ಸಾಗಿಸುವುದು.
ಈಗ ಬರುವ ಕಡಲ ಜೀವಿಗಳನ್ನು ತೀರದಿಂದ ಒಳಗೆ ಕರೆತಂದು ಚಿಕಿತ್ಸೆ ನೀಡುವ ವ್ಯವಸ್ಥೆ ಇನ್ನೂ ಇಲ್ಲ, ಏನಿದ್ದರೂ ತಜ್ಞರನ್ನು ಕರೆಸಿ, ಕಡಲ ಬದಿಯಲ್ಲೇ ತಾತ್ಕಾಲಿಕ ಚಿಕಿತ್ಸೆ ನೀಡುವುದಷ್ಟೇ ನಡೆಯುತ್ತಿದೆ. ಕೇಂದ್ರ ಸ್ಥಾಪನೆಯಾದರೆ ಕೆಲಕಾಲ ಆರೈಕೆ ಮಾಡಿ ಅವುಗಳನ್ನು ರಕ್ಷಿಸಬಹುದಾದ ಸಾಧ್ಯತೆ ಹೆಚ್ಚಾಗಲಿದೆ.
-ಆ್ಯಂಟನಿ ಮರಿಯಪ್ಪ, ಡಿಸಿಎಫ್,
ಮಂಗಳೂರು ಅರಣ್ಯ ಇಲಾಖೆ
ಡಾಲ್ಫಿನ್ಗಳಿಗೆ ಗಾಯವಾಗುವುದು ಕಡಿಮೆ, ಕಡಲಾಮೆಗಳಿಗೆ ರಕ್ಷಣೆ ಅಗತ್ಯವಿದೆ, ಕೇಂದ್ರ ಸ್ಥಾಪನೆ ಮಾಡಿದರೆ ಸಾಲದು, ಸಮುದಾಯದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ
ಕೆಲಸವೂ ಆಗಬೇಕಿದೆ.
– ಯತೀಶ್ ಬೈಕಂಪಾಡಿ, ಬೀಚ್ ಪ್ರವಾಸೋದ್ಯಮ ತಜ್ಞ
-ವೇಣುವಿನೋದ್ ಕೆ.ಎಸ್.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-150x79.jpg)
New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’
![Taranga Ugadi Dhamaka2024; ಓದಿನಿಂದ ಜ್ಞಾನದ ವ್ಯಾಪ್ತಿ ವಿಸ್ತರಣೆ: ಡಾ| ಸಂಧ್ಯಾ ಎಸ್.ಪೈ](https://www.udayavani.com/wp-content/uploads/2024/07/Taranga-Ugadi-150x82.jpg)
Taranga Ugadi Dhamaka2024; ಓದಿನಿಂದ ಜ್ಞಾನದ ವ್ಯಾಪ್ತಿ ವಿಸ್ತರಣೆ: ಡಾ| ಸಂಧ್ಯಾ ಎಸ್.ಪೈ
![Mangaluru ನದಿ ದಡದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ](https://www.udayavani.com/wp-content/uploads/2024/07/man-a-4-150x86.jpg)
Mangaluru ನದಿ ದಡದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
![Mobile, ಗಾಂಜಾ ಪತ್ತೆ ಹಿನ್ನೆಲೆ: ಜಿಲ್ಲಾ ಕಾರಾಗೃಹಕ್ಕೆ ಬಂಧಿಖಾನೆ ಡಿಐಜಿ ಭೇಟಿ](https://www.udayavani.com/wp-content/uploads/2024/07/dg-150x83.jpg)
Mobile, ಗಾಂಜಾ ಪತ್ತೆ ಹಿನ್ನೆಲೆ: ಜಿಲ್ಲಾ ಕಾರಾಗೃಹಕ್ಕೆ ಬಂಧಿಖಾನೆ ಡಿಐಜಿ ಭೇಟಿ
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.