“ಭಾಷೆಯ ಬೆಳವಣಿಗೆಗೆ ಸಾಹಿತ್ಯದ ಸೃಷ್ಟಿ, ಪುಸ್ತಕ ಪ್ರಕಟನೆ ಅಗತ್ಯ’
ತುಳು ಅಕಾಡೆಮಿ ಪ್ರಕಟಿಸಿದ ಎರಡು ಪುಸ್ತಕ ಬಿಡುಗಡೆ
Team Udayavani, Apr 28, 2019, 6:00 AM IST
ಮಹಾನಗರ: ತುಳು ಭಾಷೆಯ ಬೆಳವಣಿಗೆಗೆ ಸಾಹಿತ್ಯದ ಸೃಷ್ಠಿ ಹಾಗೂ ಪುಸ್ತಕ ಪ್ರಕಟನೆಯೂ ಅಗತ್ಯ. ಈ ದಿಶೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಪುಸ್ತಕ ಪ್ರಕಟನೆಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಹೇಳಿದರು.
ಅವರು ಶನಿವಾರ ನಗರದ ಉರ್ವ ಸ್ಟೋರ್ನಲ್ಲಿರುವ ತುಳು ಭವನದಲ್ಲಿ ತುಳು ಅಕಾಡೆಮಿ ಪ್ರಕಟಿಸಿದ ಅನುವಾದಿತ ಕೃತಿ “ಶಿಕಾರಿ’ (ಅನು: ಡಾ| ಪ್ರಮಿಳಾ ಮಾಧವ್, ಮೂಲ ಲೇ: ಲಲಿತಾ ರೈ) ಹಾಗೂ ಮುದ್ದು ಮೂಡುಬೆಳ್ಳೆ ಅವರ “ತುಳು ನಾಟಕ ಪರಂಪರೆ’ ಎಂಬ ಎರಡು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದರು.
ತುಳು ಅಕಾಡೆಮಿ ಸ್ಥಾಪನೆಯಾದ ಬಳಿಕ 25 ವರ್ಷಗಳಲ್ಲಿ ಅಕಾಡೆಮಿ ವತಿಯಿಂದ ಇದುವರೆಗೆ 197 ಪುಸ್ತಕಗಳನ್ನು ಪ್ರಕಟಿಸಿದೆ. 1 ವರ್ಷದಲ್ಲಿ 20 ಪುಸ್ತಕಗಳನ್ನು ಹೊರ ತಂದಿದೆ. 9 ಕೃತಿಗಳಿಗೆ ಧನ ಸಹಾಯ ಒದಗಿಸಲಾಗಿದೆ ಎಂದವರು ವಿವರಿಸಿದರು.
ವಸ್ತು ಸಂಗ್ರಹಾಲಯ ಸ್ಥಾಪನೆ ಗುರಿ
ಮುಂದಿನ ತಲೆಮಾರಿಗೆ ತುಳು ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ 36 ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ತುಳು ಸಂಸ್ಕೃತಿ ಮತ್ತು ಪರಂಪರೆಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದ್ದು, ಈ ದಿಶೆಯಲ್ಲಿ ತಾನು ಇತ್ತೀಚೆಗೆ ಧರ್ಮಸ್ಥಳಕ್ಕೆ ತೆರಳಿ ಅಲ್ಲಿನ “ಮಂಜೂಷ’ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಯೋಗ್ಯ ಸಲಹೆಗಳನ್ನು ಪಡೆದುಕೊಂಡು ಬಂದಿದ್ದೇನೆ ಎಂದರು.
“ತುಳು ನಾಟಕ ಪರಂಪರೆ’ ಕೃತಿಯನ್ನು ಉಡುಪಿಯ ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಪ್ರೊ| ಮುರಳೀಧರ ಉಪಾಧ್ಯ ಹಿರಿಯಡ್ಕ ಅವರು ಮತ್ತು “ಶಿಕಾರಿ’ ಕೃತಿಯನ್ನು ಎರ್ಮಾಳು ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಡಾ| ಜ್ಯೋತಿ ಚೇಳಾçರು ಬಿಡುಗಡೆ ಮಾಡಿ ಕೃತಿಗಳನ್ನು ಪರಿಚಯಿಸಿದರು.
ಮುದ್ದು ಮೂಡುಬೆಳ್ಳೆ ಮತ್ತು ಡಾ| ಪ್ರಮಿಳಾ ಮಾಧವ್ ಅವರು ತಮ್ಮ ಕೃತಿ ಪ್ರಕಟನೆಗೆ ಮುಂದೆ ಬಂದ ತುಳು ಅಕಾಡೆಮಿಗೆ ಕೃತಜ್ಞತೆ ಸಲ್ಲಿಸಿದರು.
ಸಂಸ್ಕೃತಿ ಮೂಲ ರೂಪ ಉಳಿಯಲಿ
“ಶಿಕಾರಿ’ ಕೃತಿಯ ಮೂಲ ಲೇಖಕಿ ಲಲಿತಾ ರೈ ಮಾತನಾಡಿ, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ಮೂಲ ರೂಪದಲ್ಲಿ ಉಳಿದುಕೊಂಡು ಬರಬೇಕು. ಅವುಗಳು ಪುಸ್ತಕ ರೂಪದಲ್ಲಿ ಬಂದರೆ ಮಾತ್ರ ಎಲ್ಲರಿಗೂ ತಿಳಿಯುವಂತಾಗುತ್ತದೆ. ಹಾಗಾಗಿ ತಾನು ಬರೆಯುತ್ತಿದ್ದೇನೆ ಎಂದರು.
ಅಕಾಡೆಮಿಯ ಸದಸ್ಯ ಸಂಚಾಲಕ ಪ್ರಭಾಕರ ನೀರುಮಾರ್ಗ ಸ್ವಾಗತಿಸಿ ಬೆನೆಟ್ ಜಿ. ಅಮ್ಮನ್ನ ವಂದಿಸಿದರು. ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಮೊದಲಾದವರು ಉಪಸ್ಥಿತರಿದ್ದರು. ಸುಧಾ ನಾಗೇಶ್ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ