ಸದ್ಯಕ್ಕಿಲ್ಲ ನೀರಿನ ಅಭಾವದ ಆತಂಕ
ತುಂಬೆ ಡ್ಯಾಂನಲ್ಲಿ 6 ಮೀ. ನೀರು ಸಂಗ್ರಹ
Team Udayavani, Jan 18, 2021, 2:00 AM IST
ಬಂಟ್ವಾಳ: ಎರಡು ವರ್ಷಗಳ ಹಿಂದೆ ತುಂಬೆ ಡ್ಯಾಂನಲ್ಲಿ ಬೇಸಗೆಯಲ್ಲಿ ನೀರು ಕಡಿಮೆಯಾದ ಪರಿಣಾಮ ಮಂಗಳೂರು ನಗರಕ್ಕೆ ನೀರಿನ ಅಭಾವ ತಲೆದೋರಿತ್ತು. ಆದರೆ ಈ ಬಾರಿ ಸದ್ಯಕ್ಕೆ ಅಂತಹ ಯಾವುದೇ ಆತಂಕವಿಲ್ಲ. ಪ್ರಸ್ತುತ ಡ್ಯಾಂನಲ್ಲಿ 6 ಮೀ. ನೀರು ಭರ್ತಿ ಇದ್ದು, ನೀರು ಹೆಚ್ಚುವರಿಯಾದಲ್ಲಿ ಅದನ್ನು ಹೊರಗೆ ಬಿಡಲಾಗುತ್ತಿದೆ.
ಡ್ಯಾಂನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿದ್ದ ಕಾರಣದಿಂದ ಕಳೆದ ವರ್ಷವೂ ನೀರಿನ ತೊಂದರೆ ಎದುರಾಗಿರಲಿಲ್ಲ. ಜತೆಗೆ ಬೇಸಗೆಯಲ್ಲಿ ಬೇಗ ಮಳೆಯೂ ಆಗಮಿಸಿತ್ತು. ಹೀಗಾಗಿ ಆತಂಕ ದೂರ ವಾಗಿತ್ತು. ಈಗಿನ ಸ್ಥಿತಿಯಲ್ಲಿ ಮಂಗಳೂರು ನಗರಕ್ಕೆ ರೇಷನಿಂಗ್ ಮಾಡಿ ನೀರು ಪೂರೈಕೆಯ ಅನಿವಾರ್ಯ ಸದ್ಯಕ್ಕಿಲ್ಲ.
ಒಳಹರಿವು ಹೆಚ್ಚಳ :
ಕಳೆದ ಕೆಲವು ದಿನಗಳ ಹಿಂದೆ ಮಳೆಯಾದ ಪರಿಣಾಮ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾಗಿದ್ದು, ಹೀಗಾಗಿ ಹೆಚ್ಚುವರಿ ನೀರನ್ನು ಹೊರಗೆ ಹರಿಸಲಾಯಿತು. ಶಂಭೂರು ಎಎಂಆರ್ ಡ್ಯಾಂನಲ್ಲಿ ವಿದ್ಯುತ್ ಉತ್ಪಾದನೆಯ ಬಳಿಕ ನೀರನ್ನು ಹೊರಗೆ ಬಿಡಲಾಗುತ್ತಿದ್ದು,ಅದರ ನೀರು ಕೂಡ ತುಂಬೆ ಡ್ಯಾಂನತ್ತ ಹರಿಯುತ್ತಿದೆ.
ಆತಂಕ ಬಹುತೇಕ ದೂರ :
ಮಂಗಳೂರು ನಗರಕ್ಕೆ ನೀರು ಪೂರೈಕೆಯ ದೃಷ್ಟಿಯಿಂದ 7 ಮೀ. ನೀರು ಸಂಗ್ರಹ ಸಾಮರ್ಥ್ಯದ ಹೊಸ ಡ್ಯಾಂ ಉದ್ಘಾಟನೆಯ ಬಳಿಕ ನೀರಿನ ಅಭಾವದ ಆತಂಕ ಬಹುತೇಕ ದೂರವಾಗಿದೆ.
ಪ್ರಸ್ತುತ ಡ್ಯಾಂ ಭರ್ತಿಯಾಗಿದ್ದು, ಮುಂದಿನ ಒಂದಷ್ಟು ಸಮಯಗಳ ಕಾಲ ಡ್ಯಾಂನಲ್ಲಿ 6 ಮೀ. ನಷ್ಟು ನೀರಿನ ಸಂಗ್ರಹ ಮುಂದುವರಿಯುವ ಸಾಧ್ಯತೆ ಇದೆ. ಈ ನಡುವೆ ಮಳೆ ಬಂದರೆ ಮತ್ತೆ ನೀರಿನ ಸಂಗ್ರಹ ಕಡಿಮೆಯಾಗುವ ಸಾಧ್ಯತೆ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ