ವಾಹನ ಮನೆಯಲ್ಲೇ ಇದ್ದರೂ ಹೆದ್ದಾರಿ ಟೋಲ್ ಮೊತ್ತ ಕಡಿತ !
Team Udayavani, Jan 11, 2023, 6:05 AM IST
ಮಂಗಳೂರು : ಟೋಲ್ ಪ್ಲಾಜಾದ ಮೂಲಕ ಹಾದು ಹೋಗುವಾಗ ಟೋಲ್ ಪಾವತಿಸಿದ್ದರೂ 7 ತಿಂಗಳ ಅನಂತರ ಮತ್ತೂಮ್ಮೆ ಟೋಲ್ ಮೊತ್ತ ಕಡಿತವಾಗಿರುವ ಬಗ್ಗೆ ಕದ್ರಿ ನಿವಾಸಿ ಬಿ. ಚಂದ್ರಮೋಹನ್ ಭಂಡಾರಿ ದೂರಿದ್ದಾರೆ.
ಮೇ ತಿಂಗಳಿನಲ್ಲಿ ಕಾರಿನಲ್ಲಿ ಕುಂದಾಪುರಕ್ಕೆ ಹೋಗಿ ಬಂದಿದ್ದು ಆ ವೇಳೆ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ 40 ರೂ. ಫಾಸ್ಟ್ಟ್ಯಾಗ್ ಮೂಲಕ ಪೇಟಿಎಂನಿಂದ ಕಡಿತವಾಗಿದೆ. ಈ ಬಗ್ಗೆ ಮೊಬೈಲ್ಗೆ ಸಂದೇಶ ಬಂದಿತ್ತು. ಆದರೆ ಕಳೆದ ನವೆಂಬರ್ 15ರಂದು ಬೆಳಗ್ಗೆ 6ಕ್ಕೆ ಪೇಟಿಎಂನಿಂದ ಮತ್ತೆ ಹೆಜಮಾಡಿ ಟೋಲ್ನಲ್ಲಿ 40 ರೂ. ಪೇಟಿಎಂನಿಂದ ಕಡಿತವಾಗಿರುವ ಬಗ್ಗೆ ಸಂದೇಶ ಬಂದಿತ್ತು. ಈ ವೇಳೆ ನನ್ನ ಕಾರು ಕದ್ರಿಯಲ್ಲಿಯೇ ಇತ್ತು. ಮೇ ಅನಂತರ ಹೆಜಮಾಡಿ ಟೋಲ್ ಮೂಲಕ ಹೋಗಿರಲಿಲ್ಲ ಎಂದು ಚಂದ್ರಮೋಹನ್ ಭಂಡಾರಿ ಅವರು ದೂರಿದ್ದು ಈ ಬಗ್ಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೂ ದೂರು ನೀಡಿದ್ದಾರೆ.
ಹಲವರಿಗೆ ವಂಚನೆ?
ಇದು ಟೋಲ್ಪ್ಲಾಝಾದವರಿಂದ ಆಗುತ್ತಿರುವ ವಂಚನೆಯೇ ಅಥವಾ ಬೇರೆ ಯಾವುದಾದರೂ ರೂಪದ ಮೋಸವೇ ಎಂಬುದನ್ನು ಪತ್ತೆ ಮಾಡಬೇಕಿದೆ. ಇದೇ ರೀತಿ ಬೆಂಗಳೂರಿನ ಟೋಲ್ ಪ್ಲಾಜಾಗಳಲ್ಲಿ ಹಾದು ಬಂದಿರುವ ವಾಹನದ ಕೆಲವು ಮಾಲಕರಿಗೂ ತೊಂದರೆಯಾಗಿರುವ ಮಾಹಿತಿ ಇದೆ ಎಂದು ಭಂಡಾರಿ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.
ಖಾತೆಯಿಂದ ಹಣ ಕಡಿತವಾಗಿರುವ ಕುರಿತು ಕೂಡಲೇ ಟೋಲ್ ಪ್ಲಾಜಾದವರಿಗೆ ತಿಳಿಸಿದ್ದು ಅವರು ವಾಹನದ ನೋಂದಣಿ ಸಂಖ್ಯೆ ನೀಡಲು ತಿಳಿಸಿದ್ದಾರೆ. ಅದರಂತೆ ನೀಡಿದ್ದೇನೆ. ಆದರೆ ಹಣ ಮರುಪಾವತಿ ಆಗಿಲ್ಲ. ಹಣ ಯಾಕೆ ಕಡಿತವಾಗಿದೆ ಎಂಬ ಪ್ರಶ್ನೆಗೂ ಉತ್ತರ ದೊರೆತಿಲ್ಲ ಎಂದು ಅವರು ದೂರಿದ್ದಾರೆ.
“ಹೆಚ್ಚುವರಿ ಮೊತ್ತ ಕಡಿತ ಅಸಾಧ್ಯ’
ಟೋಲ್ ಪ್ಲಾಜಾದಿಂದ ಈ ರೀತಿ ಹಣ ಕಡಿತವಾಗುವುದು ಅಸಾಧ್ಯ. ಇದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇಂತಹ ದೂರು ಬೇರೆ ಯಾರಿಂದಲೂ ಇದುವರೆಗೆ ಬಂದಿಲ್ಲ ಎಂದು ಹೆಜಮಾಡಿ ಟೋಲ್ಪ್ಲಾಜಾದ ಮ್ಯಾನೇಜರ್ ಶಿವಪ್ರಸಾದ್ ರೈ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ