ಟೋಯಿಂಗ್‌ ವ್ಯವಸ್ಥೆ : ಪರಿಹಾರಕ್ಕಿಂತ ಸಮಸ್ಯೆಗಳೇ ಹೆಚ್ಚು


Team Udayavani, Jan 12, 2021, 2:30 AM IST

ಟೋಯಿಂಗ್‌ ವ್ಯವಸ್ಥೆ : ಪರಿಹಾರಕ್ಕಿಂತ ಸಮಸ್ಯೆಗಳೇ ಹೆಚ್ಚು

ಮಹಾನಗರ: ನಗರದಲ್ಲಿ ಸರಿಯಾದ ಪಾರ್ಕಿಂಗ್‌ ಸೂಕ್ತ ಸೌಲಭ್ಯಗಳನ್ನು ಕಲ್ಪಿ ಸಿಲ್ಲ. ಆದರೂ ಸಂಚಾರ ಪೊಲೀಸರು ನೋ-ಪಾರ್ಕಿಂಗ್‌ ಹೆಸರಿನಲ್ಲಿ ದುಬಾರಿ ದಂಡ ವಿಧಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಇದೀಗ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

ರಸ್ತೆ ಬದಿಯಲ್ಲಿ ಅದರಲ್ಲಿಯೂ ವಾಹನಗಳ ದಟ್ಟನೆ ಜಾಸ್ತಿಯಿರುವ ಕಡೆ ಅಥವಾ ನೋ ಪಾರ್ಕಿಂಗ್‌ ಬೋರ್ಡ್‌ ಹಾಕಿರುವ ಕಡೆ ವಾಹನ ನಿಲುಗಡೆ ಮಾಡಿರುವುದರ ವಿರುದ್ಧ ಕ್ರಮ ಜರುಗಿಸುವುದಕ್ಕೆ ಸಾರ್ವಜನಿಕರ ಆಕ್ಷೇ ಪಣೆಯೂ ಇಲ್ಲ. ಆದರೆ, ನಗರ ವ್ಯಾಪ್ತಿಯಲ್ಲಿ ಶೇ.70 ರಷ್ಟು ಕಡೆ ಸಾರ್ವ ಜನಿಕರಿಗೆ ಅನುಕೂಲವಾಗುವಂತೆ ವಾಹನ ನಿಲುಗಡೆ ಮಾಡಲು ಅವಕಾಶವಿಲ್ಲ. ನಗರದೆಲ್ಲೆಡೆ ಕೆಲವೇ ಸ್ಥಳಗಳಲ್ಲಿ ಮಾತ್ರ ನೋ-ಪಾರ್ಕಿಂಗ್‌ ನಾಮಫಲಕ ಹಾಕಲಾಗಿದೆ. ಉಳಿದೆಡೆ ಅಂಥ ಯಾವುದೇ ಸೂಚನಾ ಫ‌ಲಕಗಳಿಲ್ಲ.

ಆದರೆ‌ ಪ್ರತಿದಿನ ಬೆಳಗ್ಗಿನಿಂದ ಸಂಜೆವರೆಗೆ ನಗರದಲ್ಲಿ ಸಂಚಾರ ಪೊಲೀಸರು ಎರಡು ಟೋಯಿಂಗ್‌ ವಾಹನಗಳಲ್ಲಿ ಸುತ್ತಾಡಿ ನೋ-ಪಾರ್ಕಿಂಗ್‌ ಹೆಸರಿನಲ್ಲಿ ತಮ್ಮ ಕಣ್ಣಿಗೆ ಬೀಳುವ ವಾಹನಗಳನ್ನು ಕೊಂಡೊಯ್ದು ಪ್ರತಿ ವಾಹನಕ್ಕೆ 1,650 ರೂ. ದಂಡ ಹಾಕುತ್ತಿದ್ದಾರೆ. ಕೊರೊನಾ ನಂತರದಲ್ಲಿ ಜನರು ತೀವ್ರವಾದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ನಗರ ಪ್ರದೇಶದಲ್ಲಿಯೂ ವ್ಯಾಪಾರಸ್ಥರಿಗೆ ಸರಿಯಾದ ವ್ಯಾಪಾರವಿಲ್ಲ. ಹಲವರಿಗೆ ಉದ್ಯೋಗ ನಷ್ಟವಾಗಿ ಜೀವನ ನಿರ್ವಹಣೆಗೆ ಅಲೆದಾಡುವ ಸ್ಥಿತಿಯಿದೆ. ಇಂಥಹ ತೀವ್ರ ಆರ್ಥಿಕ ಮುಗ್ಗಟ್ಟು ನಡುವೆ, ನೋ-ಪಾರ್ಕಿಂಗ್‌ ಕಾರಣ ನೀಡಿ ದ್ವಿಚಕ್ರವೊಂದನ್ನು ಟೋಯಿಂಗ್‌ ಮಾಡಿ ದುಬಾರಿ ದಂಡ ಹಾಕಿದರೆ ಕಟ್ಟುವುದಾದರೂ ಹೇಗೆ ಎನ್ನುವ ಪ್ರಶ್ನೆ ಜನರದ್ದು.

ತುರ್ತು ಕಾರಣಕ್ಕೆ ನಿಲ್ಲಿಸಿದರೂ ದಂಡ :

ಕೂಲಿ-ಕೆಲಸ ಮಾಡುವವರು, ದ್ವಿಚಕ್ರ ವಾಹನ ಇಟ್ಟುಕೊಂಡು ಸಣ್ಣ ವ್ಯಾಪಾರ ನಡೆಸುವವರು ತುರ್ತು ಕಾರಣಕ್ಕೆ ಒಂದೆಡೆ ವಾಹನ ನಿಲ್ಲಿಸಿ ಹೋಗಿ ಬರುವಷ್ಟರಲ್ಲಿ ಅದನ್ನು ಟೋಯಿಂಗ್‌ ಮಾಡಿ, ದುಬಾರಿ ದಂಡ ಕೊಟ್ಟು ವಾಹನ ಬಿಡಿಸಿಕೊಳ್ಳಬೇಕಿರುತ್ತದೆ. ನಗರದ ದುಡಿಮೆಯಲ್ಲಿ ದಿನಕ್ಕೆ 200-300 ರೂ. ಸಂಪಾದಿಸುವ ವ್ಯಕ್ತಿಯೊಬ್ಬ ಒಂದು ತಿಂಗಳಲ್ಲಿ ನಾಲ್ಕೈದು ಬಾರಿ ಟೋಯಿಂಗ್‌ ಪೊಲೀಸರ ಕಣ್ಣಿಗೆ ಸಿಕ್ಕಿಬಿದ್ದರೆ ಆ ವ್ಯಕ್ತಿ

ನಿಯಮ ಪಾಲಿಸದ ಟೋಯಿಂಗ್‌ ವಾಹನ! :

ರಸ್ತೆ/ ಚರಂಡಿ/ ಒಳಚರಂಡಿ ಅಭಿವೃದ್ಧಿ ಕಾಮಗಾರಿ ನಡೆಸುವ ವೇಳೆ ನಗರದ ಹಲವು ರಸ್ತೆಗಳಲ್ಲಿದ್ದ ಪಾರ್ಕಿಂಗ್‌ ತಾಣಗಳು ತೆರವಾಗಿವೆ. ಇದರಿಂದಾಗಿ ಜನರು ರಸ್ತೆ ಬದಿ ಅವಕಾಶ ಸಿಕ್ಕಿದಲ್ಲಿ ವಾಹನ ನಿಲ್ಲಿಸುತ್ತಾರೆ. ಹಾಲು, ಪತ್ರಿಕೆ, ತರಕಾರಿ ಇತ್ಯಾದಿಗಳ ಖರೀದಿಗೆ, ಎಟಿಎಂ ನಿಂದ ಹಣ ಪಡೆಯಲು ಮತ್ತಿತರ ಉದ್ದೇಶಗಳಿಗೆ ಜನರು ರಸ್ತೆ ಬದಿ ವಾಹನ ನಿಲ್ಲಿಸಿ ತಮ್ಮ ವ್ಯವಹಾರ ಮುಗಿಸಿ ಬರುವಷ್ಟರಲ್ಲಿ ವಾಹನ ಟೋಯಿಂಗ್‌ನವರ ಪಾಲಾಗಿರುತ್ತದೆ.

ವಾಹನವನ್ನು ಟೋಯಿಂಗ್‌ ಮಾಡುವ ಮುಂಚಿತವಾಗಿ ರಸ್ತೆ ಬದಿ ನಿಯಮ ಉಲ್ಲಂಘಿಸಿ ನಿಲ್ಲಿಸಲಾದ ವಾಹನದ ಬಗ್ಗೆ ಉದ್ಘೋಷಣೆ ಮಾಡಬೇಕು ಹಾಗೂ ಸಂಬಂಧಪಟ್ಟ ವಾಹನದ ಮಾಲಕ/ ಚಾಲಕರಿಗೆ ಆ ವಾಹನವನ್ನು ತೆರವು ಮಾಡಲು 5 ನಿಮಿಷ ಕಾಲಾವಕಾಶ ನೀಡಬೇಕೆಂಬ ನಿಯಮವಿದೆ. ಆದರೆ ಇದ್ಯಾವುದನ್ನೂ ಪಾಲಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದು. ಇದೇ ಕಾರಣಕ್ಕೆ ಇತ್ತೀಚೆಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿಯೂ ಸದ್ಯಕ್ಕೆ ಟೋಯಿಂಗ್‌ ವಾಹನ ಕಾರ್ಯಾಚರಣೆ ನಿಲ್ಲಿಸುವಂತೆ ಒತ್ತಾಯ ಕೇಳಿಬಂದಿತ್ತು.

ಏರಿಕೆಯಾದ ದಂಡ ಶುಲ್ಕ  :

2020ರಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಬಳಿಕ ಟೋಯಿಂಗ್‌ ಶುಲ್ಕವೂ ಏರಿಕೆಯಾಗಿದೆ. ದ್ವಿಚಕ್ರ ವಾಹನಕ್ಕೆ ಈಗ 1,650 ರೂ. ಹಾಗೂ ಚತುಶ್ಚಕ್ರ ವಾಹನಕ್ಕೆ 2,000 ರೂ. ಶುಲ್ಕ ನೀಡಬೇಕು. ದ್ವಿಚಕ್ರ ವಾಹನದ 1,650 ರೂ.ಗಳಲ್ಲಿ 1,000 ರೂ. ಸಂಚಾರ ನಿಯಮ ಉಲ್ಲಂಘನೆಗಾಗಿ, ಉಳಿದ 650 ರೂ. ಗಳ ಪೈಕಿ ತಲಾ 325 ರೂ. ಟೋಯಿಂಗ್‌ ಗುತ್ತಿಗೆದಾರರಿಗೆ ಹಾಗೂ ಸರಕಾರದ ಬೊಕ್ಕಸಕ್ಕೆ ಹೋಗುತ್ತದೆ. ಚತುಶ್ಚಕ್ರ ವಾಹನದ 2,000 ರೂ. ಪೈಕಿ 1,000 ರೂ. ಸಂಚಾರ ನಿಯಮ ಉಲ್ಲಂಘನೆಗೆ, ಉಳಿದ 1,000 ರೂ. ಗಳಲ್ಲಿ ತಲಾ 500 ರೂ. ಟೋಯಿಂಗ್‌ ಗುತ್ತಿಗೆದಾರರಿಗೆ ಮತ್ತು ಸರಕಾರಕ್ಕೆ ಸೇರುತ್ತದೆ. ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಟೋಯಿಂಗ್‌ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. 2020ರ ಸೆ. 8ರಿಂದ ಪುನರಾರಂಭವಾಗಿದೆ.

3,575 ಪ್ರಕರಣ ದಾಖಲು :

ಮಂಗಳೂರಿನಲ್ಲಿ ಟೋಯಿಂಗ್‌ ವ್ಯವಸ್ಥೆ ಜಾರಿಗೆ ಬಂದದ್ದು 2019 ರ ಮಾರ್ಚ್‌ 2 ರಂದು. 2020 ನವೆಂಬರ್‌ ತನಕ ಒಟ್ಟು 3,575 ಪ್ರಕರಣ ದಾಖಲಿಸಿ 48,44,800 ರೂ. ಶುಲ್ಕ ವಸೂಲಾಗಿದೆ. ಪ್ರಾರಂಭದಲ್ಲಿ ದಂಡ ಶುಲ್ಕವನ್ನು ದ್ವಿಚಕ್ರ ವಾಹನಗಳಿಗೆ 750 ರೂ. ಹಾಗೂ ಕಾರುಗಳಿಗೆ 1,100 ರೂ. ಇತ್ತು. ಈ 750 ರೂ. ದಂಡ ಶುಲ್ಕದಲ್ಲಿ 325 ರೂ. ಗುತ್ತಿಗೆದಾರರಿಗೆ ಹಾಗೂ ಉಳಿದ 425 ರೂ. ಸರಕಾರಕ್ಕೆ ಹೋಗುತ್ತಿತ್ತು. ಕಾರುಗಳಿಗೆ ಸಂಬಂಧಿಸಿ 1,100 ರೂ. ಪೈಕಿ 500 ರೂ. ಗುತ್ತಿಗೆದಾರರಿಗೆ ಹಾಗೂ ಉಳಿದ 600 ರೂ. ಸರಕಾರಕ್ಕೆ ಸಂದಾಯವಾಗುತ್ತಿತ್ತು.

ಪೊಲೀಸರ ವಿರುದ್ಧವೇ ಅಸಮಾಧಾನ  :

ಟೋಯಿಂಗ್‌ ವ್ಯವಸ್ಥೆಯನ್ನು ಟೆಂಡರ್‌ನಲ್ಲಿ ಬಿಡ್‌ ಮಾಡಿ ಗುತ್ತಿಗೆ ವಹಿಸಿಕೊಳ್ಳಲಾಗುತ್ತದೆ. ಪ್ರಸ್ತುತ ಮೂರು ವರ್ಷಗಳ ಗುತ್ತಿಗೆ 2019ರ ಮಾರ್ಚ್‌ ನಲ್ಲಿ ಬೆಂಗಳೂರಿನವರು ವಹಿಸಿಕೊಂಡಿ ದ್ದಾರೆ. ಇವರು ತಮ್ಮ ಬಿಡ್‌ ಹಣ ಹೊಂದಿಸಿಕೊಳ್ಳಲು ಕಣ್ಣಿಗೆ ಕಾಣಿಸುವ ವಾಹನಗಳನ್ನು ಹೊತ್ತೂಯ್ಯುತ್ತಾರೆ. ಇದು ಸುಗಮ ಸಂಚಾರದ ಉದ್ದೇಶವಲ್ಲ. ಹೀಗಾಗಿ, ಟೋಯಿಂಗ್‌ ವ್ಯವಸ್ಥೆಯಲ್ಲಿನ ಲೋಪದ ಆರೋಪಗಳಿಗೆಲ್ಲ ಪೊಲೀಸರು ಗುರಿಯಾಗುತ್ತಿದ್ದಾರೆ ಎನ್ನುವುದು ಸಾರ್ವಜನಿಕವಾಗಿ ಕೇಳಿಬರುತ್ತಿರುವ ಅಭಿಪ್ರಾಯ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಕಾರಿಗೆ ಪೆಟ್ರೋಲ್‌ ಬದಲು ಡೀಸೆಲ್‌ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.