ಉಳ್ಳಾಲ: ಕೊಲ್ಯ-ಸೋಮೇಶ್ವರ: ರೈಲು ಹಳಿಗೆ ಬೇಕಿದೆ ಅಂಡರ್‌ಪಾಸ್‌

ಹಿರಿಯರು ಇಲ್ಲಿ ರೈಲ್ವೇ ಹಳಿ ದಾಟುವುದೇ ಕಷ್ಟಕರವಾಗಿದೆ.

Team Udayavani, Apr 17, 2023, 10:15 AM IST

ಉಳ್ಳಾಲ: ಕೊಲ್ಯ-ಸೋಮೇಶ್ವರ: ರೈಲು ಹಳಿಗೆ ಬೇಕಿದೆ ಅಂಡರ್‌ಪಾಸ್‌

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಕೊಲ್ಯ ಜಂಕ್ಷನ್‌ನಿಂದ ಸೋಮೇಶ್ವರಕ್ಕೆ ಜನರು ಕಾಲುದಾರಿ ಮೂಲಕ ರೈಲು ಹಳಿ ದಾಟಿಕೊಂಡು ಕೇವಲ ಅರ್ಧ ಕಿ. ಮೀನಲ್ಲಿ ತಲುಪಲು ಸಾಧ್ಯ. ಸೋಮೇಶ್ವರ ಮತ್ತು ಕೊಲ್ಯದ ನಡುವೆ ಇರುವ ರೈಲು ಹಳಿಗಳನ್ನು ದಾಟಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸೋಮೇಶ್ವರ ದೇವಸ್ಥಾನಕ್ಕೆ ತೆರಳುವ ಭಕ್ತರು, ಸ್ಥಳೀಯರು ಸೇರಿದಂತೆ ದಿನವೊಂದಕ್ಕೆ ಸಾವಿರಾರು ಜನರು ಸಂಚರಿಸುತ್ತಿದ್ದು, ಈ ರೈಲ್ವೇ ಹಳಿಗೆ ಅಂಡರ್‌ಪಾಸ್‌ ನಿರ್ಮಾಣ ಆಗಬೇಕು ಎನ್ನುವ ಜನರ ಹಲವು ವರುಷಗಳ ಬೇಡಿಕೆ ಇನ್ನೂ ಈಡೇರಿಲ್ಲ.

ರಾಷ್ಟ್ರೀಯ ಹೆದ್ದಾರಿ 66 ಸನಿಹದಲ್ಲೇ ಕೇರಳ – ಕರ್ನಾಟಕವನ್ನು ಸಂಪರ್ಕಿಸುವ ರೈಲ್ವೇ ಮಾರ್ಗ ಹಾದು ಹೋಗಿದೆ. ತಲಪಾಡಿಯಿಂದ ಮಂಗಳೂರುವರೆಗಿನ ಹೆದ್ದಾರಿಯ ಬದಿಯಲ್ಲಿ ಇಳಿದು ರೈಲ್ವೇ ಹಳಿಯ ಇನ್ನೊಂದು ಬದಿಯ ಊರುಗಳಿಗೆ ಜನರು ಶಾರ್ಟ್‌ಕಟ್‌ ಮಾರ್ಗವಾಗಿ ತೆರಳುವುದು ಸಹಜ.

ಅತೀ ಹೆಚ್ಚು ಜನ ಸಂಚಾರ
ಉಚ್ಚಿಲ, ಸೋಮೇಶ್ವರ, ತೊಕ್ಕೊಟ್ಟು, ಜಪ್ಪಿನಮೊಗರು ಪ್ರದೇಶದಲ್ಲಿ ಅಂಡರ್‌ಪಾಸ್‌, ಓವರ್‌ಬ್ರಿಡ್ಜ್ ಸಹಿತ ರಸ್ತೆಗಳಿವೆ ಆದರೆ ಈ ಎಲ್ಲಾ ಭಾಗಗಳಿಗಿಂತ ಅತೀ ಹೆಚ್ಚು ಜನರು ಸಂಚರಿಸುವುದು ಕೊಲ್ಯ ಜಂಕ್ಷನ್‌ ಮೂಲಕ ಸೋಮೇಶ್ವರ ಸಂಪರ್ಕಿಸುವ ರೈಲ್ವೇ ಹಳಿಯಲ್ಲಿ. ಕಾಸರಗೋಡು, ತಲಪಾಡಿ ಕಡೆಯಿಂದ ಬರುವ ವಿದ್ಯಾರ್ಥಿಗಳು ಮತ್ತು ಜನರು ಕೋಟೆಕಾರು ಮಾರ್ಗವಾಗಿ ಹೋಗಬೇಕಾದರೆ, ಬೀರಿ ಅಥವಾ ಕೋಟೆಕಾರಿನಲ್ಲಿ ಇಳಿದು ಸುಮಾರು ಒಂದೂವರೆ ಕಿ. ಮೀ. ನಡೆಯಬೇಕಾಗುತ್ತದೆ.

ಆದರೆ ಕೊಲ್ಯ ಬಳಿಯ ರೈಲ್ವೇ ಹಳಿಯಲ್ಲಿ ಸಾಗಿದರೆ ನಡೆದುಕೊಂಡ ಹೋಗುವ ಸಮಯ ಉಳಿತಾಯ, ಆಟೋಗಳಿಗೆ ನೀಡುವ ಹಣವೂ ಉಳಿತಾಯವಾಗುತ್ತದೆ ಈ ನಿಟ್ಟಿನಲ್ಲಿ ಜನರು ಅದರಲ್ಲೂ ಶಾಲಾ ವಿದ್ಯಾರ್ಥಿಗಳು ಕೊಲ್ಯ ಮೂಲಕವೇ ರೈಲು ಹಳಿ ದಾಟಿ ಸಂಚರಿಸುತ್ತಿದ್ದು, ಈ ಪ್ರದೇಶದಲ್ಲಿ ಹಳಿ ದಾಟುವುದು ಅಪಾಯಕಾರಿಯಾಗಿದ್ದು, ಅಂಡರ್‌ ಪಾಸ್‌ ನಿರ್ಮಾಣ ಮಾಡಿದರೆ ವೃದ್ಧರು ಸೇರಿದಂತೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ, ಸ್ಥಳೀಯ ಜನರಿಗೆ ಸಹಕಾರಿಯಾಗಲಿದೆ.

ಹೇಗಿದೆ ರೈಲು ಹಳಿ
ಉಳ್ಳಾಲ ರೈಲು ನಿಲ್ದಾಣಕ್ಕೆ ಹತ್ತಿರವಿರುವ ಈ ರೈಲು ಹಳಿ ಕಾಲು ದಾರಿಗಿಂತ ಅತೀ ಎತ್ತರ ಪ್ರದೇಶದಲ್ಲಿದ್ದು, ಎರಡೂ ಕಡೆಯಿಂದ ರೈಲು ಬರುವ ವೇಗ ಮತ್ತು ಶಬ್ದಗಳು ಇರುವುದಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಗಳು. ಮಳೆಗಾಲದಲ್ಲಂತೂ ಮಕ್ಕಳು ರೈಲು ಹಳಿಯಿರುವ ದಿಣ್ಣೆ ಏರಿಕೊಂಡು ಹೋಗುವುದು ಕಷ್ಟಕರವಾಗಿದ್ದು, ವೃದ್ಧರಿಗೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಮಣ್ಣಿನ ದಿಣ್ಣೆ ಏರಿ ರೈಲು ಹಳಿಗೆ ಕಾಲಿಡುವಾಗ ರೈಲು ಬರುತ್ತಿದೆ ಎನ್ನುವ ಮಾಹಿತಿಯೂ ಇಲ್ಲದೆ ಅವಘಡ ಸಂಭವಿಸುವ ಸಾಧ್ಯತೆಗಳಿವೆ.

ಸುಮಾರು 6 ರೈಲ್ವೇ ಹಳಿಗಳು ಇಲ್ಲಿ ಹಾದು ಹೋಗಿದ್ದು, ವಿದ್ಯಾಥಿಗಳು, ಅದರಲ್ಲೂ ಮಹಿಳೆಯರು ದಾಟುವಾಗ ಕಾಲು, ಮತ್ತು ಸೀರೆ ರೈಲ್ವೇ ಹಳಿಗಳಿಗೆ ಸಿಲುಕುವ ಸಾಧ್ಯತೆಗಳೇ ಹೆಚ್ಚು. ಇದೀಗ ಗೂಡ್ಸ್‌ ರೈಲ್ವೇ ಇಂಜಿನ್‌ ಬದಲಾವಣೆ ಮಾಡುವ ಟ್ರ್ಯಾಕ್‌ ನಿರ್ಮಾಣವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯ ಸಂಭ ವಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ ಸ್ಥಳೀಯರು.

ಜಿಲ್ಲಾಡಳಿತ, ರೈಲ್ವೇ ಇಲಾಖೆ ಸ್ಪಂದಿಸಬೇಕಾಗಿದೆ
ಕೊಲ್ಯ ರೈಲ್ವೇ ಹಳಿಯ ಇನ್ನೊಂದು ಭಾಗವಾದ ಸೋಮೇಶ್ವರದಲ್ಲಿರುವ ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಸಹಿತ ನೂರಾರು ಜನರು ಸಂಚರಿಸುತ್ತಿದ್ದು, ಸಣ್ಣ ಮಕ್ಕಳು ಸೇರಿದಂತೆ ಹಿರಿಯರು ಇಲ್ಲಿ ರೈಲ್ವೇ ಹಳಿ ದಾಟುವುದೇ ಕಷ್ಟಕರವಾಗಿದೆ. ಈ ಪ್ರದೇಶದಲ್ಲಿ ಸಣ್ಣದಾದ ಅಂಡರ್‌ಪಾಸ್‌ ಇದ್ದು, ಇದನ್ನೇ ಅಭಿವೃದ್ಧಿ ಮಾಡಿ ದೊಡ್ಡ ಅಂಡರ್‌ಪಾಸ್‌ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ನಡೆದಾಡಿಕೊಂಡು ಹೋಗಲು ಸಹಕಾರಿಯಾಗಲಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ,ರೈಲ್ವೇ ಇಲಾಖೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ.
– ಜಯರಾಮ ಗಟ್ಟಿ, ನಿವೃತ್ತ ಎಸ್‌ಐ, ಕೊಲ್ಯ ನಿವಾಸಿ

ಸಾಹಸವಾಗಿದೆ
ಕಳೆದ ಹಲವು ವರುಷಗಳಿಂದ ಈ ಹಳಿಯಲ್ಲಿ ದಾಟಿ ಮನೆಗೆ ತೆರಳುವ ಸ್ಥಿತಿ ನಮ್ಮದು. ಇದೀಗ ವಯಸ್ಸಾಗಿದ್ದು, ರೈಲ್ವೇ ಹಳಿ ದಾಟುವುದೇ ಒಂದು ಸಾಹಸವಾಗಿದೆ. ಕಾಲುದಾರಿಗೆ ಪೂರಕವಾಗಿ ಅಂಡರ್‌ಪಾಸ್‌ ನಿರ್ಮಾಣ ಮಾಡಿದರೆ ಇಲ್ಲಿ ವಿದ್ಯಾರ್ಥಿಗಳು ಸೇರಿದಂತೆ ನಮ್ಮಂತಹ ವೃದ್ಧರಿಗೂ  ಸಹಕಾರಿಯಾಗಲಿದೆ.
– ಕಮಲ, ಸ್ಥಳೀಯ ಹಿರಿಯ ನಾಗರಿಕರು

ವಸಂತ್‌ ಎನ್‌. ಕೊಣಾಜೆ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.