ಉಳ್ಳಾಲದಲ್ಲಿ ಕಡಲ್ಕೊರೆತ: ಸಮುದ್ರಪಾಲಾದ ಮನೆ
Team Udayavani, Jun 17, 2020, 6:15 AM IST
ಮೀನುಗಾರ ಮೋಹನ್ ಅವರಿಗೆ ಸೇರಿದ ಮನೆ ಕುಸಿದಿರುವುದು.
ಉಳ್ಳಾಲ: ಉಳ್ಳಾಲದಲ್ಲಿ ಸಮುದ್ರ ಬಿರುಸುಗೊಂಡಿದ್ದು, ಭಾರೀ ಗಾತ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದ್ದು, ಸೋಮೇಶ್ವರದಲ್ಲಿ ಮೋಹನ್ ಅವರಿಗೆ ಸೇರಿದ ಮನೆ ಸಮುದ್ರ ಪಾಲಾಗಿದೆ.
ಸೋಮೇಶ್ವರ ರುದ್ರಪಾದೆ ಸನಿಹದ ಮೀನುಗಾರ ಮೋಹನ್ ಅವರಿಗೆ ಸೇರಿದ ಮನೆ ಕಳೆದ ಬಾರಿ ಕಡಲ್ಕೊರೆತಕ್ಕೆ ಭಾಗಶಃ ಹಾನಿಯಾಗಿತ್ತು.
ಕಳೆದ ಕೆಲವು ದಿನಗಳಿಂದ ಸಮುದ್ರದ ಅಲೆಗಳಿಗೆ ತತ್ತರಿಸಿದ್ದ ಮನೆ ಬಿರುಕು ಬಿಟ್ಟಿದ್ದು ಮಂಗಳವಾರ ಮಾಲಕರ ಕಣ್ಣೆದುರೇ ಸಮುದ್ರ ಪಾಲಾಗಿದೆ.
ಸೋಮೇಶ್ವರ ಉಚ್ಚಿಲ, ಉಳ್ಳಾಲದ ಕಿಲೇರಿಯಾ ನಗರ, ಕೈಕೋ, ಸೀಗ್ರೌಂಡ್ ಮುಂತಾದ ಕಡೆ ಭಾರೀ ಗಾತ್ರದ ಅಲೆಗಳು ಮನೆಗಪ್ಪಳಿಸುತ್ತಿದ್ದು 20ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ.
ಕಾಮಗಾರಿ ವಿಳಂಬದಿಂದ ಹಾನಿ: ಉಳ್ಳಾಲದಲ್ಲಿ ಎಡಿಬಿ ವತಿಯಿಂದ ನಡೆದ ಶಾಶ್ವತ ಕಾಮಗಾರಿ ಉಳ್ಳಾಲ ಮೊಗವೀರಪಟ್ಣವರೆಗೆ ಮಾತ್ರ ನಡೆದಿದ್ದು, ಸಮ್ಮರ್ ಸ್ಯಾಂಡ್ ಬಳಿಯಿಂದ ಸೀ ಗ್ರೌಂಡ್ವರೆಗೆ ಇನ್ನೊಂದು ಯೋಜನೆಯಡಿ ಶಾಶ್ವತ ಕಾಮಗಾರಿ ಅರ್ಧದಲ್ಲಿ ಇರುವುದರಿಂದ ಸಮಸ್ಯೆಯಾಗಿದೆ.
ಸೋಮೇಶ್ವರ ಉಚ್ಚಿಲದಲ್ಲಿ ನಡೆಯುತ್ತಿರುವ ಶಾಶ್ವತ ಕಾಮಗಾರಿ ವಿಳಂಬದಿಂದ ನ್ಯೂ ಉಚ್ಚಿಲ, ಬಟ್ಟಪ್ಪಾಡಿ ಸೇರಿದಂತೆ ವಿವಿಧೆಡೆ ಕಡಲ್ಕೊರೆತದ ಸಮಸ್ಯೆ ಉಂಟಾಗಿದೆ. ಕಳೆದೆರಡು ದಿನಗಳಿಂದ ಸಮುದ್ರ ಬಿರುಸುಗೊಂಡಿದ್ದು ಕೊರೆತ ಮುಂದುವರಿಯುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?