ಉಪ್ಪಿನಂಗಡಿಯಲ್ಲಿ ಸಹೋದರರ ಅಪಹರಣ ಪ್ರಕರಣ: ಹಣಕ್ಕಾಗಿ ತಮ್ಮನ ಒತ್ತೆ; ಅಣ್ಣ ಮನೆಗೆ


Team Udayavani, Jan 21, 2023, 7:50 AM IST

kasaragod

ಉಪ್ಪಿನಂಗಡಿ : ವಿದೇಶದಿಂದ ಬಂದವರಿಂದ ಹಣವನ್ನು ಕಬಳಿಸುವ ಸಲುವಾಗಿ ಸಹೋದರರಿಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳು ಅವರಲ್ಲಿ ತಮ್ಮನನ್ನು ಒತ್ತೆ ಇರಿಸಿಕೊಂಡು ಹಣ ತರುವಂತೆ ಬೇಡಿಕೆಯಿಟ್ಟು ಅಣ್ಣನನ್ನು ಮನೆಗೆ ಕಳುಹಿಸಿದ ಬಗ್ಗೆ ಉಪ್ಪಿನಂಗಡಿ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಕೊçಲದ ಕೆ.ಸಿ. ಫಾರ್ಮ್ ಬಳಿಯ ನಿಜಾಮುದ್ದೀನ್‌ ಅವರು ಆರೋಪಿ ಗಳಾದ ಸಿದ್ದಿಕ್‌ ಜೆಸಿಬಿ ಕರುವೇಲು, ಇರ್ಷಾದ್‌ ಮಠ, ಶಾಫಿ ಗಡಿಯಾರ, ಅನ್ಸಾರ್‌ ಕೆಮ್ಮಾರ ಹಾಗೂ ಇತರರ ಮೇಲೆ ದೂರು ನೀಡಿದ್ದಾರೆ.

ಗುರುವಾರ ನಿಜಾಮುದ್ದೀನ್‌ ಅವರಿಗೆ ಪರಿಚಯದ ಸಿದ್ದಿಕ್‌ ಕರೆ ಮಾಡಿ ಕೆಲಸವಿದೆ. ನೀನು ಗಾಂಧಿಪಾರ್ಕ್‌ಗೆ ಬಾ ಎಂದು ತಿಳಿಸಿದ್ದ. ಅದರಂತೆ ಅಲ್ಲಿಗೆ ತೆರಳಿದಾಗ ಅಲ್ಲಿ ಪರಿಚಯದ ಅನ್ಸಾರ್‌ ಕೆಮ್ಮಾರ ಎಂಬವರ ಕಾರಿನಲ್ಲಿ ಸಿದ್ದಿಕ್‌ ಜೆಸಿಬಿ ಕರುವೇಲು, ಶಾಫಿ ಗಡಿಯಾರ, ಇರ್ಷಾದ್‌ ಮಠ ಎಂಬವರಿದ್ದು, ಪೆರ್ನೆ ಕಡೆ ಕೆಲಸಕ್ಕೆ ಹೋಗುವ ಎಂದು ನಿಜಾಮುದ್ದೀನ್‌ ಅವರನ್ನು ಕಾರಿನಲ್ಲಿ ಕುಳ್ಳಿರಿಸಿ ತೆರಳಿದ್ದರು. ದಾರಿ ಮಧ್ಯೆ ಅಪರಿಚಿತ ವ್ಯಕ್ತಿಯೋರ್ವ ಕಾರು ಹತ್ತಿದ್ದು, ಮಲ್ಲೂರಲ್ಲಿ ಕಾರನ್ನು ನಿಲ್ಲಿಸಿ ಮನೆಯೊಳಗೆ ನಿಜಾಮುದ್ದೀನ್‌ ಅವರೊಂದಿಗೆ ಹೋದರು. ಮನೆಯಲ್ಲಿದ್ದ ಅಪರಿಚಿತರೆಲ್ಲ ನಿಜಾಮುದ್ದೀನ್‌ರಲ್ಲಿ ವಿದೇಶದಿಂದ ಬಂದ ನಿನ್ನ ತಮ್ಮ ಶಾರೂಕ್‌ ಎಲ್ಲಿದ್ದಾನೆ? ಎಂದು ಕೇಳಿದ್ದಲ್ಲದೆ, ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಅವರ ಮೊಬೈಲ್‌  ಕಿತ್ತುಕೊಂಡು ತಮ್ಮ ಶಾರೂಕ್‌ಗೆ ಕರೆ ಮಾಡಿ ಕಡಂಬು ಎಂಬಲ್ಲಿಗೆ ಬರಲು ಹೇಳಿದರು.

ನಿಜಾಮುದ್ದೀನ್‌ ಅವರನ್ನು ಕಡಂಬುಗೆ ಕರೆದುಕೊಂಡು ಬಂದಿದ್ದರು. ಆಗ ಅಲ್ಲಿಗೆ ಬಂದ ಶಾರೂಕ್‌ ಹಾಗೂ ಆತನ ಜತೆಗಿದ್ದ ಫೈಝಲ್‌ ಎಂಬವರನ್ನು ಕಾರಿನಲ್ಲಿ ಕುಳ್ಳಿರಿಸಿ, ಮತ್ತೆ ಮಲ್ಲೂರಿನ ಮನೆಗೆ ಕರೆದುಕೊಂಡು ಹೋಗಿ ಶಾರೂಕ್‌ ನಿಗೂ ಹಲ್ಲೆ ನಡೆಸಿದ್ದರು. ಬಳಿಕ ಶಾರೂಕ್‌ನನ್ನು ಒತ್ತೆ ಇರಿಸಿಕೊಂಡ ಆರೋಪಿಗಳು ನಿಜಾಮುದ್ದೀನ್‌ರಲ್ಲಿ 4 ಲಕ್ಷ ರೂ. ಹಣ ತಂದರೆ ಮಾತ್ರ ನಿನ್ನ ತಮ್ಮನನ್ನು ಬಿಡುತ್ತೇವೆ ಎಂದು ಹೇಳಿ ಆರೋಪಿ ಅನ್ಸಾರ್‌ ಕೆಮ್ಮಾರನ ಕಾರಿನಲ್ಲಿ ನಿಜಾಮುದ್ದೀನ್‌ ಹಾಗೂ ಫೈಝಲ್‌ನನ್ನು ಮನೆಗೆ ಕಳುಹಿಸಿದ್ದರು. ಮನೆ ತಲುಪಿದ ನಿಜಾಮುದ್ದೀನ್‌ ನಡೆದ ಘಟನೆಯನ್ನು ತಾಯಿಯಲ್ಲಿ ಹೇಳಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಜ.20ರಂದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿಗಳು ಹಣ ಸುಲಿಗೆ ಮಾಡುವ ಉದ್ದೇಶದಿಂದ ತಮ್ಮನ್ನು ಅಪಹರಿಸಿ, ಹಲ್ಲೆ ನಡೆಸಿದ್ದು, ತಮ್ಮನನ್ನು ಒತ್ತೆ ಇರಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣವನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಒತ್ತೆಯಾಳುವಿನ ಪತ್ತೆಗೆ ಕಾರ್ಯಾ ಚರಣೆ ನಡೆಯುತ್ತಿದೆ.

ಟಾಪ್ ನ್ಯೂಸ್

1-dfsadsad

ಪ್ರೊ ಅಸ್ಸಾದಿ ಅವರಿಗೆ 26 ವರ್ಷಗಳ ನಂತರ ಕೈ ಸೇರಿದ ರಾಜೀನಾಮೆ ಪತ್ರ

1-wewqewqe

Nothing ಭಾರತದ ಮಾರ್ಕೆಟಿಂಗ್ ಡೈರೆಕ್ಟರ್ ಆಗಿ ಪ್ರಣಯ್ ರಾವ್ ನೇಮಕ

1-ssdsad

Shirva ಬೈಕುಗಳ ಮುಖಾಮುಖಿ:ಓರ್ವ ಮೃತ್ಯು, ಇನ್ನೋರ್ವ ಗಂಭೀರ

1-qwwqewq

Gadag ವಿರೇಶ್ವರ ಪುಣ್ಯಾಶ್ರಮದಲ್ಲಿ ಅದ್ದೂರಿ ಮಹಾರಥೋತ್ಸವ

Jaishankar

Rahul Gandhi ಅವರಿಗೆ ವಿದೇಶದಲ್ಲಿ ಭಾರತವನ್ನು ಟೀಕಿಸುವ ಅಭ್ಯಾಸ: ಜೈಶಂಕರ್

sanjay-raut

BJPಗೆ ಬಜರಂಗ ಬಲಿ ಸಹಾಯ ಮಾಡಲಿಲ್ಲ,ಈಗ ಔರಂಗಜೇಬ..: ರಾವುತ್

1-saddsad

Chikkamagaluru ; ನಾಲ್ವರು ಕುಖ್ಯಾತ ಶ್ರೀಗಂಧ ಕಳ್ಳರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

ಅಜ್ಜಿಯನ್ನು ಬಡಿದು ಕೊಂದಿದ್ದ ಪ್ರಕರಣ: ಜೈಲಿನಲ್ಲಿದ್ದ ಆರೋಪಿ ಮೊಮ್ಮಗ ಆಸ್ಪತ್ರೆಯಲ್ಲಿ ಸಾವು

ರಸ್ತೆ ಬದಿ ತ್ಯಾಜ್ಯ ಎಸೆದವರ ಪತ್ತೆ ಹಚ್ಚಿ ಅವರಿಂದಲೇ ಶುಚಿಗೊಳಿಸಿದ ಕೊಳ್ನಾಡಿನ ಯುವಕರು

Road Side ತ್ಯಾಜ್ಯ ಎಸೆದವರ ಪತ್ತೆ ಹಚ್ಚಿ ಅವರಿಂದಲೇ ಶುಚಿಗೊಳಿಸಿದ ಕೊಳ್ನಾಡಿನ ಯುವಕರು

ಚಾರ್ಮಾಡಿ ಘಾಟಿ ಬಸ್‌-ಸ್ಕೂಟರ್‌ ಅಪಘಾತ: ಓರ್ವ ಸಾವು, ಸಹಸವಾರ ಗಂಭೀರ

Charmadi Ghat ಬಸ್‌-ಸ್ಕೂಟರ್‌ ಅಪಘಾತ: ಓರ್ವ ಸಾವು, ಸಹಸವಾರ ಗಂಭೀರ

beBelthangady: ರಸ್ತೆ ವಿಚಾರದಲ್ಲಿ ಕುಟುಂಬದ ನಡುವೆ ಹೊಡೆದಾಟ

Belthangady: ರಸ್ತೆ ವಿಚಾರದಲ್ಲಿ ಕುಟುಂಬದ ನಡುವೆ ಹೊಡೆದಾಟ

4-sulya-padavu

Sulliapadavu: ಮರದ ದಿಮ್ಮಿ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ

1-adasds

Hunsur; ಅಕ್ರಮ ಮರಳು ಸಾಗಾಟ;ಟಿಪ್ಪರ್‌ ಗಳು ವಶ, ಚಾಲಕರು ಪರಾರಿ

1-asds-dsad

ವಸತಿ ವಿದ್ಯಾಲಯದಲ್ಲಿ ಬಾಲಕಿ ಆಕಸ್ಮಿಕ ಸಾವು; ಸೂಕ್ತ ತನಿಖೆಗೆ ಬೇಳೂರು ಸೂಚನೆ

1-dfsadsad

ಪ್ರೊ ಅಸ್ಸಾದಿ ಅವರಿಗೆ 26 ವರ್ಷಗಳ ನಂತರ ಕೈ ಸೇರಿದ ರಾಜೀನಾಮೆ ಪತ್ರ

1-wewqewqe

Nothing ಭಾರತದ ಮಾರ್ಕೆಟಿಂಗ್ ಡೈರೆಕ್ಟರ್ ಆಗಿ ಪ್ರಣಯ್ ರಾವ್ ನೇಮಕ

1-ssdsad

Shirva ಬೈಕುಗಳ ಮುಖಾಮುಖಿ:ಓರ್ವ ಮೃತ್ಯು, ಇನ್ನೋರ್ವ ಗಂಭೀರ