ಕರಾವಳಿ ಜನತೆಗೆ ಕೊಡುಗೆ: ಯಶವಂತಪುರ -ವಾಸ್ಕೋ ರೈಲು ಓಡಾಟಕ್ಕೆ ಐಆರ್ ಟಿಸಿ ಹಸಿರು ನಿಶಾನೆ
Team Udayavani, Feb 28, 2020, 10:50 AM IST
Representative Image
ಸುರತ್ಕಲ್: ರೈಲ್ವೇ ರಾಜ್ಯ ಸಹಾಯಕ ಸಚಿವ ಸುರೇಶ್ ಅಂಗಡಿ ಅವರ ಸೂಚನೆ ಮೇರೆಗೆ ರೈಲ್ವೇ ಇಲಾಖೆಯು ಯಶವಂತಪುರ ವಾಸ್ಕೋ ನಡುವೆ ಹೊಸ ರೈಲು ಓಡಾಟಕ್ಕೆ ಐಆರ್ ಟಿಸಿ ಸಮಿತಿ ಒಪ್ಪಿಗೆ ದೊರೆತಿದೆ.
ಕರಾವಳಿ ಜನತೆಯ ಬಹುದಿನದ ಬೇಡಿಕೆ ಈಡೇರಿದ್ದು ಬೆಂಗಳೂರು ಕಾರವಾರ ವಾಸ್ಕೋ ನಡುವೆ ನೇರ ಸಂಪರ್ಕ ಸಾಧ್ಯವಾಗಲಿದೆ.
ಈಗಿರುವ ಎರಡು ರೈಲು ಓಡಾಟದ ನಡುವೆ ಹೊಸ ರೈಲ್ವೇ ಕರಾವಳಿಗೆ ಮತ್ತೊಂದು ಬಹು ಪ್ರಯೋಜನಕಾರಿಯಾಗಲಿದೆ.
ಕರಾವಳಿಗರ ಬಹುದಿನದ ಬೇಡಿಕೆಗೆ ಸಚಿವ ಸುರೇಶ್ ಅಂಗಡಿ ಅವರು ಸ್ಪಂದಿಸಿ ಹೊಸ ರೈಲು ಓಡಾಟಕ್ಕೆ ಸೂಚಿಸಿದ್ದರು.
ಬೆಂಗಳೂರಿನಲ್ಲಿ ನಡೆದ ಐಆರ್ ಟಿಸಿ (ಇಂಡಿಯನ್ ರೈಲ್ವೆ ಟೈಮ್ ಟೇಬಲ್ ಕಮಿಟಿ) ಕಾನೂನಾತ್ಮಕ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಕೊಂಕಣ ರೈಲ್ವೇ ಹಳಿಯಲ್ಲಿ ಈಗಾಗಲೇ ನಿಗದಿಗಿಂತ ಹೆಚ್ಚು ರೈಲು ಓಡಾಟ ನಡೆಸುತ್ತಿದ್ದರೂ ರೈಲ್ವೇ ಸಚಿವರ ಆದೇಶದ ಮೇರೆಗೆ ಕೊಂಕಣ ರೈಲ್ವೇ ನಿಗಮವು ಹೊಸ ರೈಲು ಓಡಾಟಕ್ಕೆ ದಾರಿ ಅನುವು ಮಾಡಿಕೊಟ್ಟಿದೆ. ಇದೀಗ ರಾಜ್ಯದ ರೈಲ್ವೇ ಇಲಾಖೆ ಸಚಿವರು ಕರಾವಳಿಗೆ ಕೊಡುಗೆ ನೀಡಿದ್ದಾರೆ.
ರೈಲ್ವೇ ಬೇಡಿಕೆ ವಿಳಂಬ ಆಗುತ್ತಿದ್ದಂತೆ ಕೊಂಕಣ ರೈಲ್ವೇ ಇಲಾಖೆ ಸಚಿವ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂಬ ಅಪವಾದ ಕೇಳಿ ಬಂದಿತ್ತು. ಇದೀಗ ಸಚಿವ ಆದೇಶದ ಮೇರೆ ಹೊಸ ರೈಲು ಶೀಘ್ರ ಓಡಾಟ ಆರಂಭಿಸಲಿರುವುದರಿಂದ ಕರಾವಳಿ ಭಾಗದ ಜನತೆಯಲ್ಲಿ ಹರ್ಷವುಂಟಾಗಿದೆ.
ಹೊಸ ರೈಲು ಓಡಾಟಕ್ಕೆ ಸುರತ್ಕಲ್ ಆಪದ್ಭಾಂಧವ ಸಂಸ್ಥೆ ಸಂತಸ ವ್ಯಕ್ತಪಡಿಸಿದೆ. ಉಡುಪಿ -ಸುರತ್ಕಲ್ -ಬೆಂಗಳೂರಿಗೆ ನೇರ ಓಡಾಟಕ್ಕೆ ಅವಕಾಶವಾಗಿದ್ದು, ಈ ನಿಟ್ಟಿನಲ್ಲಿ ರೈಲ್ವೇ ರಾಜ್ಯ ಸಹಾಯಕ ಸಚಿವ ಸುರೇಶ್ ಅಂಗಡಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅಧ್ಯಕ್ಷ ಉಮೇಶ್ ದೇವಾಡಿಗ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Yugadi: ಯುಗಾದಿ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ