ಇಂದು ಬಂಟ್ವಾಳಕ್ಕೆ ಯೋಗಿ: ಬಿಗಿ ಪೊಲೀಸ್ ಬಂದೋಬಸ್ತ್
ಭದ್ರತಾ ವಾಹನಗಳ ರಿಹರ್ಸಲ್ ಕಾರ್ಯ
Team Udayavani, May 6, 2023, 6:45 AM IST
ಬಂಟ್ವಾಳ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಿಜೆಪಿ ಅಭ್ಯರ್ಥಿ ರಾಜೇಶ್ ನಾೖಕ್ ಅವರ ಪರ ಪ್ರಚಾರಕ್ಕಾಗಿ ಮೇ 4ರಂದು ಬಂಟ್ವಾಳಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಬಂಟ್ವಾಳ- ಬಿ.ಸಿ. ರೋಡಿನಾದ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿದ್ದು, ಬಸ್ತಿಪಡು³ ಹೆಲಿ ಪ್ಯಾಡ್ನಿಂದ ರಸ್ತೆ ಮಾರ್ಗದಲ್ಲಿ ಭದ್ರತಾ ವಾಹನಗಳೊಂದಿಗೆ ಸಾಗುವ ಕುರಿತು ಶುಕ್ರವಾರ ಸಂಜೆ ರಿಹರ್ಸಲ್ ನಡೆಸಲಾಯಿತು.
ಯೋಗಿ ಅವರು ಸಂಜೆ 4ರ ಸುಮಾರಿಗೆ ಹೊನ್ನಾವರ ಹೆಲಿಪ್ಯಾಡ್ನಿಂದ ಹೊರಟು 4.40ಕ್ಕೆ ಬಂಟ್ವಾಳ ಬಸ್ತಿಪಡು³ ಹೆಲಿಪ್ಯಾಡ್ಗೆ ಆಗಮಿಸುವರು.
ಬಳಿಕ ಝಿರೊ ಟ್ರಾಫಿಕ್ನಲ್ಲಿ ಬಿ.ಸಿ.ರೋಡಿನ ಕೈಕಂಬಕ್ಕೆ ತೆರಳುವ ಯೋಗಿಯವರು ಅಲ್ಲಿಂದ ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಖಾಸಗಿ ಬಸ್ಸು ನಿಲ್ದಾಣದ ಬಳಿಗೆ ಬಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವರು.
ಸದ್ಯದ ಅವರ ಕಾರ್ಯಕ್ರಮದ ಪ್ರಕಾರ ಇಲ್ಲಿನ ಕಾರ್ಯಕ್ರಮ ಮುಗಿಸಿ 5.40 ರ ಸುಮಾರಿಗೆ ಹೆಲಿಪ್ಯಾಡ್ ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಲಕ್ನೋಗೆ ವಾಪಸಾಗುವರು. ಒಂದುವೇಳೆ ಕಾರ್ಯಕ್ರಮ ಮುಗಿಯುವುದು ತೀರಾ ತಡವಾದರೆ ವಾಪಸು ತೆರಳುವುದಕ್ಕೆ ಸಂಬಂಧಿಸಿ ಕೆಲವು ಬದಲಾವಣೆ ಆಗುವ ಸಾಧ್ಯತೆಯೂ ಇದೆ.
ರಿಹರ್ಸಲ್
ಬಸ್ತಿಪಡ್ಪು ಮೈದಾನದಲ್ಲಿ ಶುಕ್ರವಾರ ಸಂಜೆ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖ ದಲ್ಲಿ ಬಂಟ್ವಾಳ ಪುರಸಭಾ ಹಿರಿಯ ಸದಸ್ಯ ಎ.ಗೋವಿಂದ ಪ್ರಭುಗಳ ನೇತೃತ್ವದಲ್ಲಿ ಹೆಲಿ ಪ್ಯಾಡ್ ನಿರ್ಮಾಣದ ಕಾರ್ಯ ನಡೆಯಿತು.
ಬಳಿಕ ಸಂಜೆ ಸುಮಾರು 20 ಅಧಿಕ ಭದ್ರತಾ ವಾಹನಗಳು ಬಿ.ಸಿ.ರೋಡಿನಿಂದ ಮಂಗಳೂರು ವಿಮಾನ ನಿಲ್ದಾಣದವರೆಗೂ ರಿಹರ್ಸಲ್ ನಡೆಸಿದವು. ಈ ಸಂದರ್ಭ ಬಿ.ಸಿ.ರೋಡಿನಲ್ಲಿ ಕೊಂಚ ಮಟ್ಟಿನ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಸ್ಥಳೀಯ ಪೊಲೀಸರು ಸಂಚಾರ ದಟ್ಟನೆಯನ್ನು ನಿಯಂತ್ರಿಸಿದರು.
ಯೋಗಿ ಆಗಮನದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಭದ್ರತೆ ಕೈಗೊಳ್ಳಲಾಗಿದ್ದು, ಎಸ್ಪಿಜಿ ಕಮಾಂಡೋಗಳ ಜತೆಗೆ ಉತ್ತರಪ್ರದೇಶದ ಪೊಲೀಸರೂ ಆಗಮಿಸಿ ಬಿ.ಸಿ.ರೋಡಿನಲ್ಲೇ ಬೀಡು ಬಿಟ್ಟಿದ್ದಾರೆ. ಜತೆಗೆ ಸ್ಥಳೀಯ ಪೊಲೀಸರು, ಸಿಆರ್ಪಿಎಫ್ ಪಡೆಗಳು ಭದ್ರತೆಯನ್ನು ನಿರ್ವಹಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು