Calendar

Updated: 11:11 AM IST

Saturday 23 Aug, 2025

image
Home
translate

UV English

Visit UV Englisharrow_outward

translate
image

UV English

language switch
search

Get App

android

Android

apps

iOS

home_btn

ಮುಖಪುಟ

home_btn

ಸುದ್ದಿ ವಿಭಾಗ

home_btn

ದಿನ ಭವಿಷ್ಯ

home_btn

ಹೊಂಗಿರಣ

home_btn

Search

back buttonದಾವಣಗೆರೆJul 8, 2025, 7:47 PM ISTJul 8, 2025, 7:47 PM IST

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ
sudhi_img1

Team Udayavani

ದಾವಣಗೆರೆ: ಮುಡಾ ಹಗರಣದಲ್ಲಿ ಬಚಾವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ನಿಗಮ ಹಗರಣದಲ್ಲಿ ಯಾವಾಗ ಬೇಕಾದರೂ ಮನೆಗೆ ಹೋಗುವ ಸಾಧ್ಯತೆಯಿದೆ. ಆದ್ದರಿಂದ ಅವರಿಗೆ ನಡುಕ ಶುರುವಾಗಿದ್ದು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ಜಿ.ಎಂ. ಸಿದ್ದೇಶ್ವರ ಅವರ 74ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಭಿವೃದ್ಧಿ ಸಂಪೂರ್ಣ ಮರೆತಿದೆ. ಎಲ್ಲದರ ಬೆಲೆ ಏರಿಕೆ ಮಾಡಿದೆ. ಆಶಾ ಕಾರ್ಯಕರ್ತರಿಗೆ ಮಾಸಿಕ 10 ಸಾವಿರ ಕೊಡುತ್ತೇನೆಂದು ಹೇಳಿತ್ತು. ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರುವುದಾಗಿ ಹೇಳಿತ್ತು. ಯಾವುದೂ ಮಾಡಿಲ್ಲ ಎಂದರು.

ಎಲ್ಲರಿಗೂ ಬಸ್ ಪ್ರಯಾಣ ಉಚಿತ, ವಿದ್ಯುತ್ ಉಚಿತ, ಪ್ರತಿ ತಿಂಗಳು 2000 ರೂ. ಕೊಡ್ತೇನೆ ಎಂದಿದ್ದರೆ ವಿನಃ ರಸ್ತೆ ಮಾಡಲ್ಲ; ಅಭಿವೃದ್ಧಿ ಕೆಲಸ ಮಾಡಲ್ಲ. ಎಲ್ಲದಕ್ಕೂ ತೆರಿಗೆ ಹೆಚ್ಚಳ ಮಾಡುತ್ತೇವೆ ಎಂದು ಹೇಳಿರಲಿಲ್ಲ. ಈಗ 48 ಅಗತ್ಯ ವಸ್ತುಗಳ ಸೇವೆಗಳ ಬೆಲೆ ಹೆಚ್ಚಿಸಿದೆ. ಕಾಂಗ್ರೆಸ್ ಆಡಳಿತಕ್ಕೆ ಜನ ಬೇಸತ್ತಿದ್ದು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಸಹಯೋಗದಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲಿದೆ. ಸಿದ್ದೇಶ್ವರ ನೇತೃತ್ವದಲ್ಲಿ ಪಕ್ಷದ ಬಾವುಟ ದಾವಣಗೆರೆಯಲ್ಲಿ ಹಾರಲಿದೆ ಎಂದರು.

ದಾವಣಗೆರೆ ಕ್ಷೇತ್ರದ ಅಭಿವೃದ್ಧಿಗೆ, ಬಿಜೆಪಿ ಪಕ್ಷಕ್ಕೆ ಸಿದ್ದೇಶ್ವರ ಅಪಾರ ಕೊಡುಗೆ ನೀಡಿದ್ದಾರೆ. ಸಾವಿರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಗಾಯತ್ರಿ ಸಿದ್ದೇಶ್ವರ ಗೆದ್ದಿದ್ದರೆ ವಿಮಾನ ನಿಲ್ದಾಣ ಸೇರಿದಂತೆ ಬಾಕಿ ಇರುವ ಯೋಜನೆಗಳೆಲ್ಲ ಕಾರ್ಯಗತವಾಗುತ್ತಿದ್ದವು. ನಮ್ಮ ಪಕ್ಷದ ಸಿದ್ದಾಂತ ಗೊತ್ತಿಲ್ಲದವರು ಸಿದ್ದೇಶ್ವರ ಅವರನ್ನು ಟೀಕೆ ಮಾಡುತ್ತಿದ್ದಾರೆ. ಅವರ ಪ್ರಮಾಣಪತ್ರ ಸಿದ್ದೇಶ್ವರರಿಗೆ ಬೇಕಿಲ್ಲ ಎಂದರು.

ಮಾವನವರು ಚುನಾವಣೆಯಲ್ಲಿ ಅಡ್ಜಸ್ಟಮ್ಮೆಂಟ್ ಮಾಡಿದ ಪರಿಣಾಮವಾಗಿ ದಾವಣಗೆರೆಯಲ್ಲಿ ಕಾಂಗ್ರೆಸ್ ಸಂಸದೆಯಾಗಿ ಪ್ರಭಾ ಮಲ್ಲಿಕಾರ್ಜುನ್ ಗೆದ್ದಿದ್ದಾರೆ. ಅವರು ಕಾಂಗ್ರೆಸ್‌ನಿಂದ ಗೆದ್ದಿಲ್ಲ. ನಮ್ಮವರು ನಮಗೆ ಮಾಡಿದ ದ್ರೋಹದಿಂದ ಹಾಗೂ ಅನ್ಯಾಯ ಮಾರ್ಗದಿಂದ ಅವರು ಗೆದ್ದಿದ್ದಾರೆ.ಅಮಿತ್ ಶಾ ಅವರನ್ನು  ಹೊಗಳಿಲ್ಲ, ಬದಲಾಗಿ ಭಾರಿ ಚಾಲಕಿ ಎಂದಿದ್ದಾರೆ ಎಂದು ಪ್ರತಾಪ್‌ ಸಿಂಹ ಹೇಳಿದರು.

ಇನ್ನಷ್ಟು ಸುದ್ದಿ ಈ ವಿಭಾಗದಿಂದ

4 days ago

ಜಗಳೂರು: 10 ಸಾವಿರ ರೂ ಲಂಚ ಪಡೆಯುತ್ತಿದ್ದ ಪಿಡಿಒ ಲೋಕಾಯುಕ್ತ ಬಲೆಗೆ

ಜಗಳೂರು: 10 ಸಾವಿರ ರೂ ಲಂಚ ಪಡೆಯುತ್ತಿದ್ದ ಪಿಡಿಒ ಲೋಕಾಯುಕ್ತ ಬಲೆಗೆ

7 days ago

ಕೆ.ಎನ್‌.ರಾಜಣ್ಣರನ್ನು ಸಚಿವ ಸ್ಥಾನದಿಂದ ಏಕಾಏಕಿ ವಜಾ ಮಾಡಬಾರದಿತ್ತು: ಸಚಿವ ಎಸ್ಸೆಸ್ಸೆಂ

ಕೆ.ಎನ್‌.ರಾಜಣ್ಣರನ್ನು ಸಚಿವ ಸ್ಥಾನದಿಂದ ಏಕಾಏಕಿ ವಜಾ ಮಾಡಬಾರದಿತ್ತು: ಸಚಿವ ಎಸ್ಸೆಸ್ಸೆಂ

7 days ago

Davanagere: 79ನೇ ಸ್ವಾತಂತ್ರ್ಯ ದಿನಾಚರಣೆ; ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

Davanagere: 79ನೇ ಸ್ವಾತಂತ್ರ್ಯ ದಿನಾಚರಣೆ; ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

7 days ago

Davanagere: ಸ್ವಾತಂತ್ರ್ಯ ದಿನಾಚರಣೆಯಂದೇ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ;ಹಲವರು ವಶಕ್ಕೆ

Davanagere: ಸ್ವಾತಂತ್ರ್ಯ ದಿನಾಚರಣೆಯಂದೇ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ;ಹಲವರು ವಶಕ್ಕೆ

12 days ago

ಧರ್ಮಸ್ಥಳದ ವಿರುದ್ಧ ಪಿತೂರಿ; ಕಾನೂನು ಕ್ರಮ ಕೈಗೊಳ್ಳಲು ಕಾಂಗ್ರೆಸ್ ಶಾಸಕ ಒತ್ತಾಯ

ಧರ್ಮಸ್ಥಳದ ವಿರುದ್ಧ ಪಿತೂರಿ; ಕಾನೂನು ಕ್ರಮ ಕೈಗೊಳ್ಳಲು ಕಾಂಗ್ರೆಸ್ ಶಾಸಕ ಒತ್ತಾಯ

13 days ago

D.G. Shantanagowda: ಕೊನೆ ಉಸಿರು ಇರುವ ತನಕ ರಾಜಕಾರಣ: ಶಾಂತನಗೌಡ

D.G. Shantanagowda: ಕೊನೆ ಉಸಿರು ಇರುವ ತನಕ ರಾಜಕಾರಣ: ಶಾಂತನಗೌಡ

13 days ago

ನಾವು ಬಿಜೆಪಿಯಲ್ಲಿಯೇ ಇದ್ದೇವೆ ಬೇರೆಲ್ಲಿಯೂ ಹೋಗಿಲ್ಲ: ಜಿ.ಎಂ.ಸಿದ್ದೇಶ್ವರ

ನಾವು ಬಿಜೆಪಿಯಲ್ಲಿಯೇ ಇದ್ದೇವೆ ಬೇರೆಲ್ಲಿಯೂ ಹೋಗಿಲ್ಲ: ಜಿ.ಎಂ.ಸಿದ್ದೇಶ್ವರ

16 days ago

Davanagere: ಕುರಿ ಹಿಂಡಿನ ಮೇಲೆ ಚಿರತೆ ದಾಳಿ... 21 ಕುರಿ ಸಾ*ವು

Davanagere: ಕುರಿ ಹಿಂಡಿನ ಮೇಲೆ ಚಿರತೆ ದಾಳಿ... 21 ಕುರಿ ಸಾ*ವು

18 days ago

Davanagere: 'ಪಕ್ಷ ಅವಕಾಶ ನೀಡಿದರೆ…': ರಾಜ್ಯಾಧ್ಯಕ್ಷ ಆಸೆ ವ್ಯಕ್ತಪಡಿಸಿದ ಶ್ರೀರಾಮುಲು

Davanagere: 'ಪಕ್ಷ ಅವಕಾಶ ನೀಡಿದರೆ…': ರಾಜ್ಯಾಧ್ಯಕ್ಷ ಆಸೆ ವ್ಯಕ್ತಪಡಿಸಿದ ಶ್ರೀರಾಮುಲು

25 days ago

ಗೊಬ್ಬರ ಪೂರೈಕೆಯಲ್ಲಿ ಸರಕಾರ ವಿಫಲ: ಬಿಜೆಪಿ ಪ್ರತಿಭಟನೆ

ಗೊಬ್ಬರ ಪೂರೈಕೆಯಲ್ಲಿ ಸರಕಾರ ವಿಫಲ: ಬಿಜೆಪಿ ಪ್ರತಿಭಟನೆ