ಮನೆ-ತಾರಸಿ ಮೇಲೆ ಪ್ರಾರ್ಥನೆ ಸಲ್ಲಿಸಿದ್ರು
Team Udayavani, May 26, 2020, 5:54 AM IST
ಹರಿಹರ: ರಂಜಾನ್ ಅಂಗವಾಗಿ ಮುಸ್ಲಿಂ ಸಮುದಾಯದ ಚಿಣ್ಣರು ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರು.
ಹರಿಹರ: ಹಸಿವಿನ ಮೌಲ್ಯ, ಬಡವರ ಬಗ್ಗೆ ಕಾಳಜಿ, ಆತ್ಮ ಪರಿಷ್ಕರಣೆಯ ಸಂದೇಶ ನೀಡುವ ಈದ್-ಉಲ್ -ಫಿತರ್ (ರಂಜಾನ್) ಹಬ್ಬವನ್ನು ಸೋಮವಾರ ತಾಲೂಕಿನಾದ್ಯಂತ ಮುಸ್ಲಿಂ ಸಮುದಾಯದವರು ಸರಳವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಲಾಕ್ಡೌನ್ ನಿಮಿತ್ತ ಈದ್ಗಾ ಮೈದಾನ, ಮಸೀದಿಗಳ ಸಾಮೂಹಿಕ ಪ್ರಾರ್ಥನೆಗಳಿಂದ ದೂರ ಉಳಿದು ತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಹಲವರು ತಮ್ಮ ಮನೆಗಳ ತಾರಸಿ ಮೇಲೆಯೆ ಬೆಳಿಗ್ಗೆ ಹಬ್ಬದ ಪ್ರಾರ್ಥನೆ ಸಲ್ಲಿಸಿದರೆ, ಹಂಚಿನ ಮನೆಯವರು ಮನೆಯೊಳಗೆ ಸಲ್ಲಿಸಿದರು. ಬಹುತೇಕರಿಗೆ ಹಬ್ಬದ ಪ್ರಾರ್ಥನೆ ಮನೆಗಳಲ್ಲಿ ಸಲ್ಲಿಸುತ್ತಿರುವುದು ಪ್ರಥಮ ಅನುಭವವಾಯಿತು.
ಲಾಕ್ಡೌನ್ ಜನರ ದುಡಿಮೆ ಮೇಲೆ ಗದಾಪ್ರಹಾರ ಮಾಡಿದ್ದರೂ, ಮುಸ್ಲಿಮರು ಮನೆಗಳಲ್ಲಿ ಸಿಹಿ ಅಡುಗೆ ಮಾಡಿ ಸೇವಿಸಿದರು. ಕೆಲವರು ಅನ್ಯಧರ್ಮಿಯ ನೆರೆಹೊರೆಯವರಿಗೆ ಸಿಹಿಯೂಟವನ್ನು ಹಂಚಿದರು. ಬಡವರೂ ಕೂಡ ಹೊಸ ಬಟ್ಟೆ ಧರಿಸುವ ಈ ಹಬ್ಬದಲ್ಲಿ ಬಹುತೇಕರು ಹಳೆ ಬಟ್ಟೆಗಳನ್ನೇ ಆಶ್ರಯಿಸಿದರು. ಕೆಲ ಮಕ್ಕಳು ಮಾತ್ರ ಹೊಸ ಬಟ್ಟೆ ಧರಿಸಿ ಸಂಭ್ರಮ ಪಟ್ಟರು. ಸಮಾಜದವರ ಕರೆಯ ಮೇರೆಗೆ ಈ ಬಾರಿ ಹೊಸ ಬಟ್ಟೆ ಖರೀದಿಯಿಂದ ಜನರು ದೂರವಿದ್ದರು.
ಕುಟುಂಬದಲ್ಲಿರುವಆಭರಣ, ಆಸ್ತಿ, ಆದಾಯವವನ್ನು ಆಧರಿಸಿ ನೀಡುವ ದಾನಕ್ಕೆ ಜಕಾತ್ ಎಂದೂ, ಕುಟುಂಬದ ಸದಸ್ಯರ ಸಂಖ್ಯೆಯನ್ನಾಧರಿಸಿ ನೀಡುವ ದಾನಕ್ಕೆ ಫಿತರಾ ಎನ್ನಲಾಗುತ್ತದೆ. ಉಳ್ಳವರು ಸುತ್ತಲಿನ ಬಂಧು, ಬಳಗ, ವಿಧವೆ, ಅನಾಥರಿಗೆ ದಾನ ಮಾಡಿದರು. ತಾಲೂಕಿನಭಾನುವಳ್ಳಿ, ಕರಲಹಳ್ಳಿ, ಮಲೆಬೆನ್ನೂರು, ಬೆಳ್ಳೂಡಿ, ಕೊಂಡಜ್ಜಿ, ಹೊಳೆಸಿರಿಗೆರೆ, ಕೆ.ಎನ್. ಹಳ್ಳಿ, ಅಮರಾವತಿ, ಎಕ್ಕೆಗೊಂದಿ, ರಾಜನಹಳ್ಳಿ, ಹಲಸಬಾಳು ಇತರೆ ಗ್ರಾಮಗಳಲ್ಲೂ ರಂಜಾನ್ ಆಚರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ