ಮಹಾವೀರರ ಜೀವನ ಸಂದೇಶ ಪಾಲಿಸಿ


Team Udayavani, Apr 10, 2017, 12:48 PM IST

dvg2.jpg

ದಾವಣಗೆರೆ: ಭಗವಾನ್‌ ಮಹಾವೀರರ ತತ್ವ, ಆದರ್ಶ, ಸಂದೇಶ ಕೇವಲ ವೇದಿಕೆ ಭಾಷಣಕ್ಕೆ ಸೀಮಿತಗೊಳಿಸದೆ ದೈನಂದಿನ ಚಟುವಟಿಕೆಯಲ್ಲಿ ಪಾಲಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಆಶಿಸಿದರು. ಭಾನುವಾರ ವಿರಕ್ತಮಠದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಭಗವಾನ್‌ ಶ್ರೀ ಮಹಾವೀರರ ಜಯಂತಿಯಲ್ಲಿ ಮಾತನಾಡಿದರು.

ವರ್ಧಮಾನ ಮಹಾವೀರರು ಪ್ರತಿಯೊಬ್ಬರು ಸತ್ಯವನ್ನೇ ನುಡಿಯಬೇಕು ಎಂಬ ಮಹತ್ತರ ಸಂದೇಶ ನೀಡಿದ್ದಾರೆ. ಸತ್ಯವನ್ನು ನುಡಿಯುವುದರಿಂದ ಅಹಿಂಸಾ ಹಾದಿಯಲ್ಲಿ ನಡೆದಂತಾಗುತ್ತದೆ. ಇಂದಿನ ಎಲ್ಲವನ್ನೂ ಪಾಲನೆ ಮಾಡುವುದು ಕಷ್ಟ. ಆದರೂ, ಒಂದಿಷ್ಟನ್ನಾದರೂ ಪಾಲಿಸಿದಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು. 

ವರ್ಧಮಾನ ಮಹಾವೀರರು 2,600 ವರ್ಷಗಳ ಹಿಂದೆ ನೀಡಿರುವ ಸಂದೇಶಗಳನ್ನು ಗಮನಿಸಿದರೆ ಈ ಕ್ಷಣಕ್ಕೂ ಆಗಿನ ಮತ್ತು ಈಗಿನ ವಾತಾವರಣಕ್ಕೆ ಅಂತಹ ಯಾವುದೇ ವ್ಯತ್ಯಾಸ ಕಂಡು  ಬರುವುದಿಲ್ಲ. ಈಗಲೂ ಆಗಿನ ಸ್ಥಿತಿ, ವಾತಾವರಣ ಇದೆ. ಸ್ವತಃ ರಾಜನಾಗಿ 30 ವರ್ಷಕ್ಕೂ ಹೆಚ್ಚು ಕಾಲ ರಾಜ್ಯಭಾರ ನಡೆಸಿದಂತಹ ಮಹಾವೀರರು ಈಗಲೂ ಪ್ರಸ್ತುತವಾಗುವಂತಹ ಮೌಲ್ಯಯುತ ಸಂದೇಶ ನೀಡಿದ್ದಾರೆ ಎಂದರೆ ಅವರಲ್ಲಿ ಎಂತಹ ಆಲೋಚನಾ ಶಕ್ತಿ ಇತ್ತು ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದರು. 

ಭಗವಾನ್‌ ಮಹಾವೀರರು ನೀಡಿರುವ ಸತ್ಯ, ಅಹಿಂಸೆ, ಅಚೋರಿಯಾ, ಬ್ರಹ್ಮಚರ್ಯ, ಅಭಯನಿಗ್ರಹ ಎಂಬ ಮೈಲಿಗಲ್ಲುಗಳನ್ನು ದಾಟುವ ಮೂಲಕ ಮೋಕ್ಷವನ್ನ ಸಾಧಿಸಬಹುದು. ಸಂದೇಶ ಪಾಲಿಸುವ ಮೂಲಕ ನಿಜವಾದ ಮಾನವರಾಗಬೇಕು. ನಾವಲ್ಲದೆ ನಮ್ಮ ಸುತ್ತಮುತ್ತಲಿನವರನ್ನು ಒಳ್ಳೆಯ ಹಾದಿಯಲ್ಲಿ ಕೊಂಡೊಯ್ಯುವಂತಾಗಬೇಕು ಎಂದು ತಿಳಿಸಿದರು. 

ಜಯಂತಿ ಉದ್ಘಾಟಿಸಿದ ಮೇಯರ್‌ ರೇಖಾ ನಾಗರಾಜ್‌ ಮಾತನಾಡಿ, ಜೈನ ಸಮಾಜ ಎಂದೆಂದೂ ಹಿಂಸೆಯನ್ನು ವಿರೊಧೀಧಿ ಸಿದ ಅಹಿಂಸೆಯ ಆಚಾರ ವಿಚಾರಗಳನ್ನು ಶ್ರೇಷ್ಠತೆಯನ್ನು ಮೈಗೂಡಿಸಿಕೊಂಡಿರುವ ಸಮಾಜ ಎಂದು ಹರ್ಷ ವ್ಯಕ್ತಪಡಿಸಿದರು.  ವಿಶೇಷ ಉಪನ್ಯಾಸ ನೀಡಿದ ಬಿಎಸ್ಸೆನ್ನೆಲ್‌ ಉಪಮಂಡಲ ಅಭಿಯಂತರ ಸಂಜಯ ಹಜಾರೆ, ಭಗವಾನ್‌ ಮಹಾವೀರರ ಜೀವನ ಸಂದೇಶ, ಉಪದೇಶ ಸಾರ್ವಕಾಲಿಕ ಸತ್ಯ.

ಪ್ರತಿಯೊಬ್ಬರ ಜೀವನವನ್ನು ಮುಕ್ತಿಯೆಡೆಗೆ ಕೊಂಡೊಯುವಂಥವು. ಪ್ರತಿ ಆತ್ಮಕ್ಕೆ ಪರಮಾತ್ಮನಾಗುವ ಶಕ್ತಿ ಇದೆ ಎಂದು ಮಹಾವೀರರು ಸದಾ ಪ್ರಸ್ತಾಪಿಸುತ್ತಿದ್ದರು ಎಂದು ತಿಳಿಸಿದರು. 2600 ವರ್ಷಗಳ ಹಿಂದೆ ಬಿಹಾರದಲ್ಲಿ ಜನಿಸಿದ ಭಗವಾನ್‌ ಮಹಾವೀರರು ಸಮಾಜದ ನೈತಿಕ ಮೌಲ್ಯಗಳ ಉನ್ನತಿಗೆ ಶ್ರಮಿಸಿದರು. ಜೀವಿಸಿ… ಜೀವಿಸಲು ಬಿಡಿ… ಎಂಬ ಉದಾತ್ತ ಸಂದೇಶ ನೀಡಿದವರು.

ಮಹಾವೀರರ ಸಂದೇಶಗಳು ಈ ಕ್ಷಣಕ್ಕೂ ಹೆಚ್ಚು ಪ್ರಸ್ತುತವಾಗಿವೆ. ಅರ್ಥ, ಕಾಮ, ಮೋಕ್ಷ, ಲೋಭ, ಮದ, ಮತ್ಸರದಂತಹ ಅರಿಷಡ್‌ವರ್ಗಗಳ ವಿರುದ್ಧ ಅಹಿರ್ನಿಶಿ ಹೋರಾಟ ನಡೆಸುತ್ತಾ ಸಮಾನತೆಗೆ ಶ್ರಮಿಸಿದವರು. 2 ಸಾವಿರ ವರ್ಷಗಳ ಹಿಂದೆಯೇ ಸ್ತ್ರೀ ಸಮಾನತೆಗೆ ಶ್ರಮಿಸಿದ ಮಹಾವೀರರ ಬದುಕು ಅನುಕರಣೀಯ ಎಂದು ತಿಳಿಸಿದರು. 

ಸ್ವಾರ್ಥಕ್ಕಾಗಿ ಜೀವಿಸುವುದು ಯಾಂತ್ರಿಕ ಜೀವನ… ಅಹಿಂಸೆಯ ಪರವಾಗಿ ಜೀವಿಸುವುದು ಸಾರ್ಥಕ ಜೀವನ… ಎನ್ನುವ ಸಂದೇಶ ನೀಡಿರುವ ಮಹಾವೀರರು ನುಡಿದಂತೆ ನಡೆದವರು. ಹಿಂಸಾ ಪರಮೋಧರ್ಮ ಎನ್ನುವಂತೆ ಕೊನೆಯವರೆಗೆ ಅಹಿಂಸಾ ಮಂತ್ರ ಪಾಲಿಸಿದರು. ತಮ್ಮ ಮಹತ್ತರ ಉಪದೇಶಗಳ ಮೂಲಕ  ಕ್ರಾಂತಿಕಾರಕ ಬದಲಾವಣೆ ತಂದ ಮಹಾವೀರರು ಚೀನಾದ ಲಾವೋತ್ಸೆ, ಫೈಥಾಗೊರಸ್‌, ಸಾಕ್ರೆಟಿಸ್‌ ಅವರಂತಹ ಶ್ರೇಷ್ಠ ದಾರ್ಶನಿಕರ ಸಮಕಾಲೀನರು.

ಆದರ್ಶಮಯ ಜೀವನ ದರ್ಶನ ಮಾಡಿಸಿದ ಮಹಾಪುರುಷ ಎಂದು ಬಣ್ಣಿಸಿದರು.  ಮನುಷ್ಯನ ಮನಸ್ಸಿನ ವಿಕೃತಿಗಳನ್ನು ತೊಳೆದು ಪರಿಶುದ್ದವಾಗಿಸುವವನೇ ತೀರ್ಥಂಕರ. ಅಂತಹ ತೀರ್ಥಂಕರ ಶ್ರೇಷ್ಠರಲ್ಲಿ ಪ್ರಮುಖರಾದವರು ಮಹಾವೀರರು. ಸ್ವತಃ ಇಂದ್ರನೇ  ತೀಥಂಕರನ ಪೂಜೆ¿ ಮಾಡುತ್ತಿದ್ದ ಎಂಬುದು ಪ್ರತೀತಿ ಇದೆ ಎಂದು ತಿಳಿಸಿದರು. 

ಧರ್ಮೋ ರಕ್ಷತಿ ರಕ್ಷತಃ… ಎನ್ನುವಂತೆ ಧರ್ಮವನ್ನು ರಕ್ಷಿಸು, ಧರ್ಮ ನಿನ್ನನ್ನು ರಕ್ಷಿಸುತ್ತದೆ ಎನ್ನುವ ಸಂದೇಶ ನೀಡಿರುವ ಮಹಾವೀರರು ಧರ್ಮ ಸಕಲ ಜೀವಿಗಳು ಒಟ್ಟುಗೂಡಿ ಸುಖ ಜೀವನ ನಡೆಸುವುದೇ ನಿಜವಾದ ಧರ್ಮ ಎಂದು ಸಾರಿದವರು ಎಂದು ತಿಳಿಸಿದರು.

ಸಮಾಜದ ಮುಖಂಡರಾದ ರಮಣ್‌ ಲಾಲ್‌ ವಿ. ಸಂಘವಿ, ಅಜಿತ್‌ಕುಮಾರ್‌ ಇತರರು ಇದ್ದರು. ಪ್ರಸನ್ನ ಚಂದ್ರಪ್ರಭ ಮತ್ತು ಸಂಗಡಿಗರು ಜಿನಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಸ್ವಾಗತಿಸಿದರು. ಗಂಗಾಧರ್‌ ಬಿ.ಎಲ್‌. ನಿಟ್ಟೂರು ನಿರೂಪಿಸಿದರು. 

ಟಾಪ್ ನ್ಯೂಸ್

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

Supreme Court

State-Governor ಕದನ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ರಾಗಿ ಸಂಗ್ರಹ; ಓರ್ವ ಬಂಧನ

Davanagere: ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ರಾಗಿ ಸಂಗ್ರಹ; ಓರ್ವ ಬಂಧನ

13-davangere

Davanagere: ಕಾರು- ಬಸ್ ಅಪಘಾತ; ಸ್ಥಳದಲ್ಲೇ ಮೃತಪಟ್ಟ ಕ್ರೈಸ್ತ ಧರ್ಮಗುರು

drowned

Harihara; ಕೊಚ್ಚಿ ಹೋಗಿದ್ದ ಯುವಕನ ಶವ 2 ಕಿ.ಮೀ ದೂರದಲ್ಲಿ ಪತ್ತೆ

Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

BJP: ದಾವಣಗೆರೆಯಲ್ಲಿ ಬಿಜೆಪಿ ಸೋಲಿಗೆ ರೇಣುಕಾಚಾರ್ಯ ತಂಡವೇ ಕಾರಣ: ಸ್ವಪಕ್ಷೀಯರ ಆರೋಪ

BJP: ದಾವಣಗೆರೆಯಲ್ಲಿ ಬಿಜೆಪಿ ಸೋಲಿಗೆ ರೇಣುಕಾಚಾರ್ಯ ತಂಡವೇ ಕಾರಣ: ಸ್ವಪಕ್ಷೀಯರ ಆರೋಪ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.