ಯುವಜನತೆ ಅನ್ಯಾಯ ಸಹಿಸದಿರಲಿ
Team Udayavani, Jul 6, 2017, 8:54 AM IST
ದಾವಣಗೆರೆ: ಯುವಜನತೆ ಸಮಾಜದಲ್ಲಿ ನಡೆಯುವ ಅನ್ಯಾಯವನ್ನು ಮೂಕ ಪ್ರೇಕ್ಷಕರಂತೆ ನೋಡಬಾರದು ಎಂದು ಎಐಡಿವೈಒ ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಮಂಜುನಾಥ ಕುಕ್ಕವಾಡ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದ ಚಾಮುಂಡೇಶ್ವರಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎಐಡಿವೈಒನ 51ನೇ ಸಂಸ್ಥಾಪನಾ ದಿನಚರಣೆಯಲ್ಲಿ ಮಾತನಾಡಿದ ಅವರು, ಯುವ ಜನತೆ ನಮ್ಮ ಸುತ್ತಲಿನಲ್ಲಿ ನಡೆಯುತ್ತಿರುವ ಅನ್ಯಾಯ ನೋಡಿ
ಸುಮ್ಮನಿರಬಾರದು. ಜನರನ್ನು ಶೋ‚ಷಿಸುತ್ತಾ ದೇಶ ಲೂಟಿ ಹೊಡೆಯುತ್ತಿರುವ ಆಳುವ ಬಂಡವಾಳ ಶಾಹಿ ವರ್ಗದ ವಿರುದ್ಧ ದನಿ ಎತ್ತಬೇಕು ಎಂದರು. ಎಲ್ಲಾ ಸರ್ಕಾರಗಳು ಲಾಭದಾಸೆಗೆ ಉದ್ಯಮ ಆರಂಭಿಸುವ ಬಂಡವಾಳದಾರರ ರಕ್ಷಣಗೆ ಟೊಂಕ ಕಟ್ಟಿ ನಿಂತಿವೆ. ಇದರಿಂದ ಸಾಮಾನ್ಯ ಜನ, ರೈತ, ಕಾರ್ಮಿಕರ ಜೀವನ ಸರ್ವನಾಶವಾಗುತ್ತಿದೆ. ಇದನ್ನು ಕಂಡು ಯುವಜನತೆ ಸುಮ್ಮನಿರದೆ ಭಗತ್ಸಿಂಗ್, ನೇತಾಜಿ ಸುಭಾ‚ಷ್ ಚಂದ್ರಬೋಸ್ ಮುಂತಾದ
ಮಹಾನ್ ಹೋರಾಟಗಾರಂತೆ ಹೋರಾಡಬೇಕು ಎಂದು ಅವರು ಮನವಿ ಮಾಡಿದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ತಿಪ್ಪೇಸ್ವಾಮಿ ಮಾತನಾಡಿ, ದೇಶ ಸ್ವತಂತ್ರ ಪಡೆದು 70 ವರ್ಷ ಕಳೆದರೂ ಇಂದಿನ ಸರ್ಕಾರಗಳು ಖಾಸಗಿಕರಣ ಎಂಬ ಹೆಸರಿನಲ್ಲಿ ಜನತೆಗೆ ನೈಜವಾಗಿ ಸಿಗಬೇಕಾದ ಮೂಲಭೂತ ಸೌಕರ್ಯ ತೆಗೆದು
ಹಾಕಿ ದುಡ್ಡಿದವರಿಗಾಗಿ ಮಾತ್ರ ಸೌಲಭ್ಯ ಎಂಬ ನೀತಿ ಅನುಸರಿಸುತ್ತಿದೆ. ಇದರಿಂದ ಇಂದಿನ ಯುವಕರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಉದ್ಯೋಗವಿಲ್ಲದೇ ಪ್ರತಿ ವರ್ಷ ಕೋಟ್ಯಂತರ ಯುವಕರು
ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ಆರೋಪಿಸಿದರು. ಕಾಲೇಜಿನ ಪ್ರಾಂಶುಪಾಲ ಲಕ್ಷಣ ಅಧ್ಯಕ್ಷತೆ ವಹಿಸಿದ್ದರು. ಶಶಿಕುಮಾರ್, ಗುರು ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panchamasali ಎಂಬ ಕಾರಣಕ್ಕೆ ಯತ್ನಾಳ್ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ
Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ
Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ