ಜೀವನೋಪಾಯಕ್ಕೆ ಉದ್ಯಮಶೀಲತೆ ಬೆಳೆಸಿಕೊಳ್ಳಿ

ಕಾಲ ಕಾಲಕ್ಕೆ ಉದ್ಯಮ ಮೇಳ ಆಯೋಜಿಸಿ ಉದ್ಯೋಗಾವಕಾಶ ನೀಡುವಲ್ಲಿ ಸದಾ ಮುಂದಿದೆ

Team Udayavani, Jan 19, 2022, 5:54 PM IST

ಜೀವನೋಪಾಯಕ್ಕೆ ಉದ್ಯಮಶೀಲತೆ ಬೆಳೆಸಿಕೊಳ್ಳಿ

ಅಳ್ನಾವರ: ಪ್ರಸ್ತುತ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಶಿಕ್ಷಣ ಇದ್ದರೆ ಸಾಲದು. ಜತೆಗೆ ಜೀವನೋಪಾಯಕ್ಕೆ ಬೇಕಾದ ತರಬೇತಿ, ಉದ್ಯಮಶೀಲತೆ, ಕೌಶಲ ರೂಢಿಸಿಕೊಳ್ಳಬೇಕು. ಅರ್ಹರಿಗೆ ಇಂತಹ ಮಾರ್ಗದರ್ಶನ ನೀಡಲು ಜಿಲ್ಲಾ ಕೌಶಲ ವಿಭಾಗ ಶ್ರಮಿಸುತ್ತದೆ ಎಂದು ಜಿಲ್ಲಾ ಕೌಶಲ ಅಧಿ ಕಾರಿ ಡಾ| ಎಂ.ಎಸ್‌. ಚಂದ್ರಪ್ಪ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್‌, ಕ್ರೀಡಾ ವಿಬಾಗ, ಯುಥ್‌ ರೆಡ್‌ಕ್ರಾಸ್‌ ಘಟಕ, ಸ್ಥಳೀಯ ಲಯನ್ಸ್‌ ಕ್ಲಬ್‌ , ರೋಟರಿ ಬ್ಲಿಡ್‌ ಬ್ಯಾಂಕ್‌ ಹಾಗೂ ಜಿಲ್ಲಾಸ್ಪತ್ರೆ ಮತ್ತು ಜಿಲ್ಲಾ ಕೌಶಲ ತರಬೇತಿ ಇಲಾಖೆ ವತಿಯಿಂದ ರಾಷ್ಟ್ರೀಯ ಯುವ ಸಪ್ತಾಹ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡ ಸ್ವಯಂ ರಕ್ತದಾನ ಶಿಬಿರ ಹಾಗೂ ಕೌಶಲ ಅಭಿವೃದ್ಧಿ ಕುರಿತ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರ, ಗ್ರಾಮೀಣ ಹಾಗೂ ಬಡತನ ರೇಖೆಗಿಂತ ಕೆಳಗಿನ ಸ್ತರದ ಜನರ ಬದುಕನ್ನು ಎತ್ತರಿಸಲು ಜಿಲ್ಲಾ ಕೌಶಲ ಅಭಿವೃದ್ಧಿ ಇಲಾಖೆ ಉಪಯುಕ್ತ ಯೋಜನೆ, ತರಬೇತಿ ಹಮ್ಮಿಕೊಂಡಿದೆ. ಕಾಲ ಕಾಲಕ್ಕೆ ಉದ್ಯಮ ಮೇಳ ಆಯೋಜಿಸಿ ಉದ್ಯೋಗಾವಕಾಶ ನೀಡುವಲ್ಲಿ ಸದಾ ಮುಂದಿದೆ ಎಂದರು.

ನಮ್ಮ ದೇಶ ಯುವ ಸಂಪತ್ತಿನಿಂದ ಕೂಡಿದೆ. ಇದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದರ ಜೊತಗೆ ಸಾಂಪ್ರದಾಯಿಕ ಉದ್ಯೋಗ ಮರೆಯಬಾರದು. ಸರ್ಕಾರದ ಮೂಲ ಉದ್ದೇಶ ನಿಮ್ಮ ಬದುಕು ರೂಪಿಸುವುದು. ಇದರ ಲಾಭ ಪಡೆದುಕೊಂಡು ಪ್ರಗತಿ, ಸಾಧನೆಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು.

ಧಾರವಾಡ ರೋಟರಿ ಬ್ಲಡ್‌ ಬ್ಯಾಂಕ್‌ ಆರೋಗ್ಯಾ ಧಿಕಾರಿ ಡಾ| ನಂದೇಶ ಮಾತನಾಡಿ, ರಕ್ತ ಮಾನವನ ಬದುಕಿಗೆ ಅತೀ ಅವಶ್ಯ ವಸ್ತು. ರಕ್ತದಾನ ಅತ್ಯಂತ ಶ್ರೇಷ್ಠ ಕಾರ್ಯ. ರಕ್ತ ನೀಡುವ ಮೂಲಕ ಇನ್ನೊಂದು ಜೀವ ಬದುಕಿಸಬಹುದು ಎಂದರು. ಪ್ರಾಂಶುಪಾಲರಾದ ಡಾ| ಸಿ.ಎನ್‌. ಹೊಂಬಾಳಿ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್‌ ಕ್ಲಬ್‌ ಅಧ್ಯಕ್ಷ ರಾಜಶೇಖರ ಹಿರೇಮಠ, ಪ್ರಶಾಂತ ಸೋನಾರ, ಪಿ.ಆರ್‌. ನಾಗರಾಳ, ಮಹ್ಮದ್‌ಶಫಿ ವಡ್ಡೊ, ಸಂತೋಷ ಜಾಧವ, ಶ್ರೀಪಾಲ ಕುರಕುರಿ, ರಾಧಿಕಾ ಆಪ್ಟೆ, ಅರುಣ ನಾಯ್ಕ, ವಿನಯಕುಮಾರ, ವರುಣ ಅಪರಾಜ ಇದ್ದರು. ಈಶ್ವರಿ ಕಲಾಲ ಸ್ವಾಗತಿಸಿದರು. ರಾಜೇಶ್ವರಿ ಮರಾಠಿ ನಿರೂಪಿಸಿದರು. ಸೇವಂತಿ ಜವಳೇಕರ ವಂದಿಸಿದರು.

ಟಾಪ್ ನ್ಯೂಸ್

Asian Games: Gold for India in Shooting Trap Men’s Team Event

Asian Games: ಶೂಟಿಂಗ್ ಟ್ರ್ಯಾಪ್ ಪುರುಷರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ

8-social-anxiety-disorder

Health: ಸೋಶಿಯಲ್‌ ಆ್ಯಂಕ್ಸೈಟಿ ಡಿಸಾರ್ಡರ್‌

Karachi; ಗುಂಡಿನ ದಾಳಿಯಲ್ಲಿ ಲಷ್ಕರ್-ಎ-ತೈಬಾ ಸ್ಥಾಪಕ ಸದಸ್ಯ ಖೈಸರ್ ಫಾರೂಕಿ ಹತ್ಯೆ

Karachi; ಗುಂಡಿನ ದಾಳಿಯಲ್ಲಿ ಲಷ್ಕರ್-ಎ-ತೈಬಾ ಸ್ಥಾಪಕ ಸದಸ್ಯ ಖೈಸರ್ ಫಾರೂಕಿ ಹತ್ಯೆ

hivanna

GHOST: ಶಿವಣ್ಣನ ಘೋಸ್ಟ್ ಅವತಾರಕ್ಕೆ ಫ್ಯಾನ್ಸ್ ಫಿದಾ; ಟ್ರೇಲರ್ ನೋಡಿ

Bengaluru; ನಟ ನಾಗಭೂಷಣ ಕಾರು ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು

Bengaluru; ನಟ ನಾಗಭೂಷಣ ಕಾರು ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು

7-belthanagdy

Belthangady: ಎಕ್ರೆ ಪ್ರದೇಶದಲ್ಲಿ ಭತ್ತದ ಗದ್ದೆಗೆ ಆನೆ ದಾಳಿ

Sandalwood ; 7 movies releasing on October 6

Sandalwood ಸಿನಿಜಾತ್ರೆ; ಅಕ್ಟೋಬರ್‌ 6ಕ್ಕೆ 7 ಸಿನಿಮಾಗಳು ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cauvery issue; ಮುಂದೆ ಜಾಗರೂಕತೆಯಿಂದ ಹೆಜ್ಜೆ ಇರಿಸಬೇಕಾಗಿದೆ: ಎಚ್.ಕೆ ಪಾಟೀಲ

Cauvery issue; ಮುಂದೆ ಜಾಗರೂಕತೆಯಿಂದ ಹೆಜ್ಜೆ ಇರಿಸಬೇಕಾಗಿದೆ: ಎಚ್.ಕೆ ಪಾಟೀಲ

Bommai BJP

Congress ಸರಕಾರ ವರ್ಚಸ್ಸು ಕಳೆದುಕೊಂದು ಆಪರೇಷನ್ ಗೆ ಮುಂದಾಗಿದೆ: ಬೊಮ್ಮಾಯಿ ಕಿಡಿ

mohan limbikai

Loksabha; ಧಾರವಾಡ ಕ್ಷೇತ್ರದಿಂದ ಸ್ಪರ್ಧೆ ಸಿದ್ದತೆಗೆ ಡಿಕೆಶಿಯಿಂದ ಸೂಚನೆ: ಮೋಹನ ಲಿಂಬೆಕಾಯಿ

mahaDharwad ರಾಷ್ಟ್ರಧ್ವಜ ತಯಾರಿಕಾ ಕೇಂದ್ರಕ್ಕೆ ಮಹಾತ್ಮಾಗಾಂಧಿ ಪ್ರಶಸ್ತಿ

Dharwad ರಾಷ್ಟ್ರಧ್ವಜ ತಯಾರಿಕಾ ಕೇಂದ್ರಕ್ಕೆ ಮಹಾತ್ಮಾಗಾಂಧಿ ಪ್ರಶಸ್ತಿ

Hubballi: ಆತ್ಮಗುರಿಯೇ ನಿಜವಾದ ಆಧ್ಯಾತ್ಮ- ನಿರ್ಭಯಾನಂದ ಶ್ರೀ

Hubballi: ಆತ್ಮಗುರಿಯೇ ನಿಜವಾದ ಆಧ್ಯಾತ್ಮ- ನಿರ್ಭಯಾನಂದ ಶ್ರೀ

MUST WATCH

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

ಹೊಸ ಸೇರ್ಪಡೆ

Asian Games: Gold for India in Shooting Trap Men’s Team Event

Asian Games: ಶೂಟಿಂಗ್ ಟ್ರ್ಯಾಪ್ ಪುರುಷರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ

10-charmadi

Cleaning: ಅರಣ್ಯ ಇಲಾಖೆ ವತಿಯಿಂದ ಚಾರ್ಮಾಡಿ ಘಾಟ್ ನಲ್ಲಿ ಸ್ವಚ್ಚತಾ ಕಾರ್ಯ

9–chincholi

ಸಚಿವ ಸ್ಥಾನ ಪಡೆದ ಬಳಿಕ ಮೊದಲ ಸಲ ಮತಕ್ಷೇತ್ರಕ್ಕೆ ಭೇಟಿ ನೀಡಿದ ಸಚಿವ ಡಾ. ಶರಣಪ್ರಕಾಶ ಪಾಟೀಲ

Dr. TMA Pai Convention Centre; 3 ದಿನಗಳ “ಬಿಗ್‌ ಬ್ರ್ಯಾಂಡ್ಸ್‌ ಎಕ್ಸ್‌ಪೋಗೆ’ ಚಾಲನೆ

Dr. TMA Pai Convention Centre; 3 ದಿನಗಳ “ಬಿಗ್‌ ಬ್ರ್ಯಾಂಡ್ಸ್‌ ಎಕ್ಸ್‌ಪೋಗೆ’ ಚಾಲನೆ

8-social-anxiety-disorder

Health: ಸೋಶಿಯಲ್‌ ಆ್ಯಂಕ್ಸೈಟಿ ಡಿಸಾರ್ಡರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.