ಕೋವಿಡ್ ಸಂಕಷ್ಟದಲ್ಲಿ ಕೈಹಿಡಿದ ಖಾದಿ ಮಾಸ್ಕ್
2 ಲಕ್ಷಕ್ಕೂ ಹೆಚ್ಚು ಮಾಸ್ಕ್ ಪೂರೈಕೆ | ಗುಣಮಟ್ಟ ಜತೆ ಕಡಿಮೆ ಬೆಲೆ | ಕುಟುಂಬ ನಿರ್ವಹಣೆಗೆ ದಾರಿ
Team Udayavani, May 8, 2021, 5:30 PM IST
ವರದಿ: ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ಕೋವಿಡ್ ಮಹಾಮಾರಿ ಖಾದಿ ಉತ್ಪನ್ನಗಳ ಬೇಡಿಕೆ ಕುಗ್ಗಿಸಿದ್ದು, ಇದನ್ನೇ ನೆಚ್ಚಿಕೊಂಡಿದ್ದ ಕುಟುಂಬಗಳು ಉತ್ಕೃಷ್ಟ ದರ್ಜೆಯ ಖಾದಿ ಮಾಸ್ಕ್ಗಳ ತಯಾರಿಕೆಯಲ್ಲಿ ಯಶಸ್ಸು ಕಂಡಿವೆ.
ಖಾದಿ ಮಾಸ್ಕ್ಗಳನ್ನು ಅತ್ಯಂತ ಕನಿಷ್ಟ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಈಗಾಗಲೇ ಸುಮಾರು 2 ಲಕ್ಷಕ್ಕೂ ಹೆಚ್ಚು ಮಾಸ್ಕ್ಗಳನ್ನು ರಾಜ್ಯ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಿಗೆ ಪೂರೈಸಿದ್ದಾರೆ. ಎರಡನೇ ಅಲೆ ಪರಿಣಾಮ ಬೇಡಿಕೆ ಹೆಚ್ಚಾಗುತ್ತಿದೆ.
ಎರಡು ಘಟನೆ ಪ್ರೇರಣೆ: ಖಾದಿ ಉತ್ಪನ್ನಗಳ ತಯಾರಿಕೆಯಲ್ಲಿ ಮೂರು ದಶಕಗಳ ಕಾಲ ಅನುಭವ ಹೊಂದಿರುವ ರಾಘವೇಂದ್ರ ಅವರು ತಮ್ಮ ಆಪ್ತರೊಬ್ಬರ ನಿಧನ ಹಾಗೂ ಮಹಿಳೆಯೊಬ್ಬರ ಆರ್ಥಿಕ ಸಂಕಷ್ಟ ಮಾಸ್ಕ್ ತಯಾರಿಸುವ ಕೆಲಸಕ್ಕೆ ಮುಂದಾಗುವಂತೆ ಮಾಡಿವೆ. ಖಾದಿ ಬಟ್ಟೆಯ ಉತ್ಪನ್ನಗಳಿಗೆ ಬೇಡಿಕೆ ಸಾಕಷ್ಟು ಕುಸಿದ ಸಂದರ್ಭದಲ್ಲಿ ತಮ್ಮ ಕುಟುಂಬ ಹಾಗೂ ಇವರ ವೃತ್ತಿಯ ಮೇಲೆ ಅವಲಂಬಿತವಾಗಿರುವ 10 ಕುಟುಂಬಗಳಿಗೆ ಕೋವಿಡ್ ಸಂದರ್ಭದಲ್ಲಿ ಕೆಲಸ ನೀಡಿ ಜೀವನ ನಿರ್ವಹಣೆಗೆ ದಾರಿ ಮಾಡಿಕೊಟ್ಟಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳು ಕೂಡ ಈ ಕಾಯಕದಲ್ಲಿ ನಿರತರಾಗಿದ್ದಾರೆ.
ಖಾದಿ ಯಾಕೆ ಶ್ರೇಷ್ಠ: ಒಮ್ಮೆ ಬಳಸಿ ಬಿಸಾಡುವ ಸರ್ಜಿಕಲ್ ಮಾಸ್ಕ್ ನ ಬೆಲೆ 6-7 ರೂ. ಇದೆ. ಹೀಗಿರುವಾಗ ಇವರು ಖಾದಿ ಬಟ್ಟೆ ಡಬಲ್ ಲೇಯರ್ ಮಾಸ್ಕ್ ಅನ್ನು 10 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ಪುನಃ ಬಳಕೆ ಮಾಡಬಹುದಾಗಿದ್ದು, ಪರಿಸರ ಸ್ನೇಹಿ ಹಾಗೂ ಆರೋಗ್ಯಕರ. ಕೈಯಿಂದ ನೂಲಲ್ಪಟ್ಟ, ನೇಯಲ್ಪಟ್ಟ ಬಟ್ಟೆಯನ್ನು ಇಲ್ಲಿ ಬಳಸಲಾಗುತ್ತಿದೆ. ಎಲ್ಲಿಯೂ ರಾಸಾಯಿನಿಕ ಬಳಕೆಯಿಲ್ಲ. ಮಾಸ್ಕ್ ಸಿದ್ಧಪಡಿಸಿ ನಿಗದಿತ ಉಷ್ಣಾಂಶದಲ್ಲಿ ಇಸ್ತ್ರಿ ಮಾಡಿ ಪ್ಯಾಕ್ ಮಾಡಲಾಗುತ್ತದೆ. ಖಾದಿಯ ಮಹತ್ವ ಅರಿತವರು ಇವರ ಮನೆಗೆ ಆಗಮಿಸಿ 10-15 ಮಾಸ್ಕ್ಗಳನ್ನು ಖರೀದಿಸುತ್ತಿದ್ದಾರೆ.
ಉತ್ತಮ ಬೇಡಿಕೆ: ಈಗಾಗಲೇ ಬೆಂಗಳೂರು, ಹೈದರಾಬಾದ್, ಸೊಲ್ಲಾಪುರ, ಚೆನ್ನೈ ಸೇರಿದಂತೆ ವಿವಿಧ ಭಾಗಗಳಿಗೆ ಪೂರೈಸಿದ್ದಾರೆ. ರೈಲ್ವೆ ಇಲಾಖೆ ಕಾರ್ಮಿಕರ ಸಂಘಟನೆಗಳು, ಪೊಲೀಸ್, ವಿವಿಧ ಸಂಘ-ಸಂಸ್ಥೆ, ದೇವಸ್ಥಾನಗಳಿಗೆ ಬೇಡಿಕೆಗೆ ತಕ್ಕಂತೆ ಸಾವಿರಾರು ಮಾಸ್ಕ್ಗಳನ್ನು ಸಿದ್ಧಪಡಿಸಿ ನೀಡಿದ್ದಾರೆ. ಬೇಡಿಕೆ ಆಧರಿಸಿ ಮಾಸ್ಕ್ ಮೇಲೆ ಸಂಘಟನೆ ಹೆಸರು, ಚಿನ್ಹೆಗಳನ್ನು ಮುದ್ರಿಸಿ ಕೇವಲ 10 ರೂ. ಒಂದರಂತೆಯೇ ಮಾರಾಟ ಮಾಡುತ್ತಿದ್ದಾರೆ. ಗುಣಮಟ್ಟ ಹಾಗೂ ಕೈಗೆಟಕುವ ಬೆಲೆಯ ಪರಿಣಾಮ ಹೆಚ್ಚು ಬೇಡಿಕೆ ಬರುತ್ತಿದೆ. ಸಂಪರ್ಕ ಸಂಖ್ಯೆ: 98451 89610
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ