ಸಂಗೀತ ಕಲಾವಿದರು ಶಾಸ್ತ್ರಜ್ಞಾನ ಹೊಂದಿರಲಿ; ಎಂ.ವೆಂಕಟೇಶ ಕುಮಾರ
ಇಂತಹ ಪ್ರಶಸ್ತಿಗಳು ಗುರುತರ ಜವಾಬ್ದಾರಿ ಸೂಚಿಸುತ್ತವೆ.
Team Udayavani, Dec 20, 2022, 2:15 PM IST
ಧಾರವಾಡ: ಸಂಗೀತ ಕಲಾವಿದರು, ಶಿಕ್ಷಕರು ಪ್ರಯೋಗ ದೊಂದಿಗೆ ಸ್ವಲ್ಪವಾದರೂ ಶಾಸ್ತ್ರಜ್ಞಾನ ಹೊಂದಿರಬೇಕು. ಅದರ ಸೂಕ್ಷ್ಮ ವಿಚಾರಗಳೆಲ್ಲ ಸಂಸ್ಕೃತ ಗ್ರಂಥಗಳಲ್ಲಿವೆ. ಯುವ ಗಾಯಕ-ವಾದಕರು ವಿವಿಧ ಗ್ರಂಥಗಳನ್ನು ಹೊರ ತರುತ್ತಿರುವುದು ಸಂತೋಷದ ವಿಷಯ ಎಂದು ಪದ್ಮಶ್ರೀ ಎಂ.ವೆಂಕಟೇಶಕುಮಾರ ಹೇಳಿದರು.
ನಗರದ ಸೃಜನಾ ರಂಗಮಂದಿರದಲ್ಲಿ ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಪ್ರಕಟಿಸಿದ ಮತ್ತು ರೋಹಿಣಿ ನಾಗೇಂದ್ರ ಬರೆದ “ಗಾನರಾಗ ರಸಾಯನ’ ಪುಸ್ತಕ ಬಿಡುಗಡೆಗೊಳಿಸಿ, ಅವರು ಮಾತನಾಡಿದರು. ಎಷ್ಟೋ ಸಲ ಶ್ರೋತೃಗಳ ಚಪ್ಪಾಳೆಗಳಿಂದ ಕಲಾವಿದ ಬೀಗುತ್ತ ಓದುವಿಕೆಯಿಂದ ವಿಮುಖನಾಗುತ್ತಾನೆ.
ಆದರೆ ಶಾಸ್ತ್ರಜ್ಞಾನದ ಕೊರತೆಯಿಂದ ಯಾವಾಗಲಾದರೂ ಬೇಸರವಾಗುವ ಸಂದರ್ಭ ಬರುತ್ತದೆ ಎಂದ ಅವರು, ರೋಹಿಣಿಯವರು ಎಲ್ಲರಿಗೂ ಅನುಕೂಲವಾಗುವಂತೆ ಅತ್ಯಂತ ಕ್ಲಿಷ್ಟಕರ ವಿಷಯದ ಗ್ರಂಥ ರಚಿಸಿರುವುದು ಶ್ಲಾಘನೀಯ ಎಂದರು.
ಸಂಗೀತ ಸಂಪನ್ಮೂಲ ವ್ಯಕ್ತಿ ಪಂ|ಕೃಷ್ಣರಾವ ಇನಾಮದಾರ ಮಾತನಾಡಿ, ಮಹಾ ಸಾಧಕರನ್ನು ನೀಡಿದ ಧಾರವಾಡದಂತಹ ಕರ್ಮಭೂಮಿಯಲ್ಲಿ ಯುವ ಗಾಯಕರ ಕರ್ತವ್ಯ ಬಹಳಷ್ಟಿದೆ. ಹಿರಿಯರ ಅನುಭವಗಳನ್ನು ಪಡೆದು ಪ್ರಾಚೀನ ಗ್ರಂಥಗಳ ಅಧ್ಯಯನಶೀಲರಾಗಬೇಕು ಎಂದರು.
ಕಲಾಶ್ರೀ ಪ್ರಶಸ್ತಿ ಸ್ವೀಕರಿಸಿ ಪಂ|ಶ್ರೀಪಾದ ಹೆಗಡೆ ಕಂಪ್ಲಿ ಮಾತನಾಡಿ, ಇಂತಹ ಪ್ರಶಸ್ತಿಗಳು ಗುರುತರ ಜವಾಬ್ದಾರಿ ಸೂಚಿಸುತ್ತವೆ. ಆಲಸ್ಯ ದೂರವಿಟ್ಟು ಕ್ರಿಯಾಶೀಲರಾಗಬೇಕೆಂದು ಎಚ್ಚರಿಸುತ್ತವೆ ಎಂದರು. ಸಂಗೀತ ವಿಮರ್ಶಕಿ ರೇಖಾ ಹೆಗಡೆ ಅವರು ಗಾನರಾಗ ರಸಾಯನ ಪುಸ್ತಕ ಪರಿಚಯಿಸಿದರು.
ಶಾಂತಮ್ಮ ಚಂದ್ರಶೇಖರ ಪುರಾಣಿಕಮಠ ಅವರು ಗ್ರಂಥ ಪ್ರಕಾಶನಕ್ಕೆ ಸಹಕರಿಸಿದ ಸಾಧಕರಿಗೆ ಪುಸ್ತಕಗಳನ್ನು ನೀಡಿದರು. ಡಾ|ಕೆ.ಗಣಪತಿ ಭಟ್ಟ ಪರಿಚಯಿಸಿದರು. ರೋಹಿಣಿ ಸ್ವಾಗತಿಸಿದರು. ಅಮೃತಾ ಪುರಾಣಿಕ ನಿರೂಪಿಸಿದರು. ಗುರುಕೃಪಾ ಸಂಗೀತ ವಿದ್ಯಾಲಯದ ಅಧ್ಯಕ್ಷ ಕುಮಾರ ಪುರಾಣಿಕಮಠ ವಂದಿಸಿದರು. ಪ್ರಕಾಶ ಬಾಳಿಕಾಯಿ ಮತ್ತು ರವೀಂದ್ರ ಕವಠೇಕರ ಕಲಾಕಾರರನ್ನು ಗೌರವಿಸಿದರು.
ಕರಾಮಚಂದ್ರ ಭಟ್ಟರ ಸಾಮಗಾನ ಮತ್ತು ಪ್ರಶಿಕ್ಷಿತ ಮಹಿಳೆಯರ ಸ್ತೋತ್ರಗಾನ ಗಮನ ಸೆಳೆಯಿತು. ನಂತರ ಜರುಗಿದ ಸಂಗೀತ ಸಿಂಚನದಲ್ಲಿ ಕೋಲ್ಕತ್ತಾದ ಪಂ|ಸಂದೀಪ ಚಟರ್ಜಿಯವರಿಂದ ಸಂತೂರ ವಾದನ, ಶ್ರೀಪಾದ ಹೆಗಡೆಯವರ ಗಾಯನ, ರೋಹಿಣಿಯವರಿಂದ ವಾಯೋಲಿನ್ ವಾದನ ಕಾರ್ಯಕ್ರಮಕ್ಕೆ ಮೆರಗು ತಂದಿತು. “ಸ್ವರ್ಣ ಜ್ಯುವೇಲರ್ಸ್ ಪ್ರೈ.ಲಿ, ಮುಖ್ಯ ಪ್ರಾಯೋಜಕರು, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಭಾರತೀಯ ಜೀವವಿಮಾ ನಿಗಮ ಸಹ ಪ್ರಾಯೋಜಕರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ