ಸಮಗ್ರ ಲಿಂಗಾಯತ ಸಮಾಜ ಒಂದಾಗಲಿ: ಸಿಎಂ ಬೊಮ್ಮಾಯಿ
Team Udayavani, Jan 10, 2023, 3:17 PM IST
ಧಾರವಾಡ: ಸಮಗ್ರ ವೀರಶೈವ ಲಿಂಗಾಯತ ಸಮುದಾಯ ಒಳ ಪಂಗಡಗಳನ್ನು ಮರೆತು ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಲಹೆ ನೀಡಿದರು.
ಶ್ರಿ ಲಿಂಗರಾಜ್ ವಿವಿದುದ್ದೇಶ ಸಂಸ್ಥೆ ವತಿಯಿಂದ ನಡೆದ ಶಿರಸಂಗಿ ಲಿಂಗರಾಜರ 162 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಲಿಂಗರಾಜ್ ಸರದೇಸಾಯಿ ಅವರ ಆದರ್ಶಗಳು ಲಿಂಗಾಯತ ಸಮಗ್ರ ಸಮುದಾಯಕ್ಕೆ ಮಾದರಿಯಾಗಬೇಕಿದೆ. ಲಿಂಗಾಯತ ಸಮುದಾಯದ ಶ್ರೇಷ್ಠರನ್ನು ಒಂದು ಪಂಗಡ ಅಥವಾ ಒಳ ಪಂಗಡಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದರು.
ಎಲ್ಲರೂ ನಿಲುಕದ ನಕ್ಷತ್ರಗಳ ಬಗ್ಗೆ ಮಾತನಾಡುತ್ತೇವೆ. ಲಿಂಗರಾಜರಂತಹ ಮಹನೀಯರ ಆದರ್ಶದಿಂದ ಬದುಕಿನಿಂದ ಸಿರಿ ಬಂದಿದೆ. ಪರಕೀಯರ ಆಡಳಿತ, ಬ್ರಿಟೀಷರ ಆಡಳಿದಲ್ಲಿ ಯಾರು ಕೂಡ ಸೇರಿರಲಿಲ್ಲ. ಎಲ್ಲವನ್ನೂ ಮೀರಿ ರಾಣಿ ಚೆನ್ನಮ್ಮ ದೈತ್ಯ ಇಂಗ್ಲೀಷರನ್ನು ಎದುರಿಸಿದರು ಎಂದರು.
12 ನೇ ಶತಮಾನದ ನಂತರ 18 ನೇ ಶತಮಾನದಲ್ಲಿ ಭಾರಿ ಬದಲಾವಣೆ ಬಂತು. ಸ್ವತಂತ್ರ ಹೋರಾಟದ ಜೊತೆಗೆ ಶಿಕ್ಷಣದಲ್ಲಿ ಬದಲಾವಣೆ ಶುರುವಾಯಿತು. ರಾಜ್ಯದಲ್ಲಿ ಲಿಂಗರಾಜ್ ಅವರು ಇಡೀ ದೇಶಗತಿಯನ್ನು ಕೊಡುಗೆಯಾಗಿ ನೀಡಿದರು. ವೀರಶೈವ ಮಹಾಸಭಾದ ಅಧ್ಯಕ್ಷತೆ ವಹಿಸಿದರು. ಹಿರಿತನ ಮೆರೆದರು. ಸಮಾಜವನ್ನು ಒಗ್ಗುಡಿಸಿಕೊಂಡು ಮುಂದೆ ಹೋಗೋಣಾ. ಲಿಂಗರಾಜರ ಹೆಸರು ಉಳಿಸುವ ಎಲ್ಲಾ ಕೆಲಸಗಳಿಗೂ ಎಲ್ಲಾ ಸಹಾಯ ಮಡುತೇನೆ. ಶಿರಸಂಗಿ ಲಿಂಗರಾಜ ಟ್ರಸ್ಟ್ ಅಭಿವೃದ್ದಿ ಮೂಲಕ ಇಡೀ ಸಮುದಾಯಕ್ಕೆ ನೆರವಾಗಲು ಸಹಕಾರ ನೀಡುತ್ತೆನೆ. ಇದರ ನೇತೃತ್ವ ಮಾಜಿ ಸಚಿವ ಎಂ.ಬಿ.ಪಾಟೀಲ ವಹಿಸಲಿ ಎಂದರು.
ಇದನ್ನೂ ಓದಿ:ಪಣಜಿ: ಕರ್ನಾಟಕ ಸರ್ಕಾರದ ವತಿಯಿಂದಲೇ ಗೋವಾದಲ್ಲಿ ಕನ್ನಡ ಭವನ ನಿರ್ಮಿಸಲು ಸಿ.ಎಂ. ಗೆ ಮನವಿ
ವೀರಶೈವ ಲಿಂಗಾಯತ ಸಮುದಾಯ ಒಟ್ಟಾಗಿ ಹೋಗೋಣ. ಕರ್ನಾಟಕದಾದ್ಯಂತ ಶೈಕ್ಷಣಿಕ ಕ್ರಾಂತಿಯಾಯಿತು ಇದು ಒಂದು ಜಾತಿಗೆ ಸೀಮಿತವಲ್ಲ ಎಂದರು.
ಬಡವರಿಗೆ ಮಠಗಳು ಆಶ್ರಯ ನೀಡಿದವು. ನಾಡು ಸಿರಿಯಾಗಲು ಉತ್ತರ ಕರ್ನಾಟಕದ ಮಠಗಳ ತ್ರಿವಿಧ ದಾಸೋಹ ಮಾಡಿವೆ. ಲಿಂಗರಾಜರ ಮಾರ್ಗದಲ್ಲಿಯೇ ಕೆಎಲ್ ಇ ಬಿ.ಎಲ್ಡಿಇ , ವಿಜಯಪುರ, ಕಲಬುರ್ಗಿ ಯಲ್ಲಿನ ಲಿಂಗಾಯತ ಶಿಕ್ಷಣ ಸಂಸ್ತೆಗಳು ಬೆಳೆದು ಹೆಮ್ಮರವಾಗಿ ಬೆಳೆದು ನಿಂತಿವೆ ಎಂದರು.
ಮಾಜಿ ಸಚಿವ ಎಂ.ಬಿ.ಪಾಟೀಲ್, ಸಚಿವ ಶಂಕರ ಪಾಟೀಲ್,ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ