ಮಣಪ್ಪುರಂ ಬಳಿ ಅಪಘಾತ: ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದ ಧಾರವಾಡದ ಬಾಲಕ ಸಾವು
Team Udayavani, Jan 4, 2023, 9:07 PM IST
ಧಾರವಾಡ : ಕೇರಳದ ಮಣ್ಣಪುರಂ ಜಿಲ್ಲೆಯ ಎಡಪ್ಪಾಲ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದ ಧಾರವಾಡದ 10 ವರ್ಷದ ಬಾಲಕ ಮೃತಪಟ್ಟಿದ್ದು, ಈ ವಾಹನದಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.
ಇಲ್ಲಿಯ ಸೈದಾಪೂರ ಬಡಾವಣೆಯ ಪಾಂಡೆ ಕುಟುಂಬದ ಹಲವು ಸದಸ್ಯರು ಟಾಟಾ ಏಸ್ ವಾಹನದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಜ. 1 ರಂದು ತೆರಳಿದ್ದರು. ಬುಧವಾರ ಅಯ್ಯಪ್ಪನ ದರ್ಶನ ಮುಗಿಸಿ ವಾಪಸ್ಸು ಬರವಾಗ ಈ ಅಪಘಾತವಾಗಿದ್ದು, ಈ ಘಟನೆಯಲ್ಲಿ 10 ವರ್ಷದ ಸುಮಿತ ಪಾಂಡೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಉಳಿದಂತೆ ಸೂರಜ್ ಪಾಂಡೆ, ನಿಖಿಲ ಪಾಂಡೆ, ಸುಶಾಂತ ಪಾಂಡೆ ತೀವ್ರವಾಗಿ ಗಾಯಗೊಂಡಿದ್ದು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೇರಳದ ಆರೋಗ್ಯ ಇಲಾಖೆ ಹಾಗೂ ಮಣ್ಣಪುರಂ ಜಿಲ್ಲಾಧಿಕಾರಿಗಳ ಜತೆ ಚರ್ಚೆ ಮಾಡಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದು, ಮೃತ ಸುಮಿತ್ ಪಾಂಡೆಯ ಪಾರ್ಥಿವ್ ಶರೀರ ಧಾರವಾಡಕ್ಕೆ ತರಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕುಷ್ಟಗಿಯಲ್ಲೊಬ್ಬ ಎಣ್ಣೇ ಮೇಸ್ಟ್ರು: ಶಾಲೆಗೆ ಚಕ್ಕರ್… ಬಾರ್ ಗೆ ಹಾಜರ್