ಜವಳಿ ಮಳಿಗೆ ಮಾಲೀಕನೀಗ ಸಾವಯವ ಕೃಷಿಕ

ವೀರಾಪುರ ರೈತನ ಯಶೋಗಾಥೆ | 11 ಎಕರೆಯಲ್ಲಿ ಮಾದರಿ ಕೃಷಿ | ಪ್ರತಿಫಲ ನೀಡಿದ ಪ್ರಯೋಗ ಸಾಹಸ

Team Udayavani, Sep 28, 2021, 10:10 PM IST

dsfgtr

ವರದಿ: ಅಮರೇಗೌಡ ಗೋನವಾರ

ಹುಬ್ಬಳ್ಳಿ: ಅವರು ರೈತರಲ್ಲ, ಕಮ್ತಾ ಗೊತ್ತಿಲ್ಲ ಆದರೂ ಭೂ ತಾಯಿ ಸೆಳೆತ ಜವಳಿ ಮಳಿಗೆ ಮಾಲೀಕರೊಬ್ಬರನ್ನು ರೈತನನ್ನಾಗಿಸಿದೆ, ಕಮ್ತಾ ಕಲಿಸಿದೆ, ಹೊಸ ಪ್ರಯೋಗಕ್ಕೆ ಹಚ್ಚಿದೆ, ವಿಷಮುಕ್ತ ಕೃಷಿಯ ಪ್ರಯೋಗಶಾಲೆಯನ್ನು ತೆರೆಸಿದೆ, ಸುಮಾರು 11 ಎಕರೆಯಲ್ಲಿ ತೆಂಗು, ಅಡಿಕೆ, ಸಪೋಟಾ ಸೇರಿದಂತೆ ವಿವಿಧ ಹಣ್ಣಿನ ಗಿಡಗಳು ಕಂಗೊಳಿಸುವಂತೆ ಮಾಡಿದೆ.

ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಅಕ್ಕಿಆಲೂರು ಬಳಿಯ ವೀರಾಪುರ ಗ್ರಾಮದ ಸಾವಯವ ರೈತರೊಬ್ಬರ ಯಶೋಗಾಥೆಯಿದು. ಕೃಷಿ ಕಷ್ಟದಾಯಕ ಮತ್ತು ನಷ್ಟದ ಕಾಯಕ ಎಂದು ಅದೆಷ್ಟೋ ಜನರು ಕೃಷಿಯಿಂದ ವಿಮುಖರಾಗುತ್ತಿರುವ ಸನ್ನಿವೇಶದಲ್ಲಿ ಉತ್ತಮ ಗಳಿಕೆ ಜವಳಿ ವ್ಯಾಪಾರ ಇದ್ದರೂ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುವ ಸಾಹಸ ತೋರಿದ್ದಾರೆ. ಹೊಲಕ್ಕೆ ಹೆಜ್ಜೆ ಇಟ್ಟರೆ ಹಸಿರೆಲೆ ಗೊಬ್ಬರ, ದಶಪರ್ಣಿ, ಬೇವಿನ ಎಣ್ಣೆ, ರಸಾಯನ, ಪಂಚಗವ್ಯ-ದಶಗವ್ಯ, ಗೋಕೃಪಾಮೃತ, ಪೋಷಕಾಂಶ ಗೊಬ್ಬರ ತಯಾರಿ ನೋಡಬಹುದು, ಆಳೆತ್ತರಕ್ಕೆ ಬೆಳೆದು ನಿಂತ ಅಡಿಕೆ, ತೆಂಗಿನ ಮರಗಳು, ಚಿಕ್ಕು ಹಣ್ಣಿನ ಗಿಡಗಳು ಎಂತಹವರನ್ನು ಆಕರ್ಷಿಸುತ್ತವೆ. ವೀರಾಪುರದ ರೈತ ವಿಜಯಕುಮಾರ ತಿರಕಣ್ಣವರ ಕೃಷಿಯಲ್ಲಿ ಇಂತಹ ಸಾಧನೆಗಳ ಹೆಜ್ಜೆಯನ್ನು ಸದ್ದಿಲ್ಲದೇ ಇರಿಸಿದ್ದಾರೆ.

ವಿಜಯಕುಮಾರ ಅವರು ಪದವೀಧರರಾಗಿದ್ದು, ಅಕ್ಕಿಆಲೂರಿನಲ್ಲಿ ಕುಟುಂಬದಿಂದ ಬಂದ ಜವಳಿ ಮಾರಾಟ ಮಳಿಗೆ ನಿರ್ವಹಣೆಗೆ ಮುಂದಾಗಿದ್ದರು. ಸುಮಾರು 30-40 ವರ್ಷಗಳಿಂದ ಸಣ್ಣದಾಗಿಯೇ ಇದ್ದ ಮಳಿಗೆಯನ್ನು ದೊಡ್ಡ ಮಳಿಗೆಗೆ ಬದಲಾಯಿಸಿದ್ದರು. ಕೇವಲ ಸೀರೆ, ಬಟ್ಟೆ ಮಾರಾಟ ಆಗುತ್ತಿದ್ದ ಮಳಿಗೆಯಲ್ಲಿ ಸಿದ್ಧ ಉಡುಪುಗಳು ಸೇರಿದಂತೆ ಹೊಸ ಉತ್ಪನ್ನಗಳ ಮೂಲಕ ವಹಿವಾಟು ಹೆಚ್ಚಳಕ್ಕೂ ಶ್ರಮಿಸಿದ್ದರು. ವ್ಯಾಪಾರದ ಜತೆಗೆ ಕೃಷಿ ಕಾಯಕದ ಚಿಂತನೆ ಗರಿಗೆದರಿತ್ತು. ಗುತ್ತಿಗೆಯಾಗಿ ನೀಡಿದ್ದ ತಮ್ಮದೇ ಜಮೀನಿನಲ್ಲಿ ಯಾಕೆ ಕೃಷಿ ಕಾಯಕ ಕೈಗೊಳ್ಳಬಾರದೆಂಬ ಚಿಂತನೆಯೊಂದಿಗೆ ಮುಂದಡಿ ಇರಿಸಿದ್ದರು.

ದಶಪರ್ಣಿ ತಯಾರು: ಸಾವಯವ ಕೃಷಿಗೆ ಬೇಕಾಗುವ ಹಸಿರೆಲೆ ಗೊಬ್ಬರವನ್ನು ಹೊಲದಲ್ಲಿಯೇ ತಯಾರಿಸಲಾಗುತ್ತಿದೆ. ಬೇವಿನ ಸೊಪ್ಪು ತಂದು ಕುದಿಸಿ ಬೇವಿನ ಎಣ್ಣೆ ತಯಾರಿಸಲಾಗುತ್ತದೆ. ಸುಮಾರು 500 ಚಿಕ್ಕು ಗಿಡಗಳ ಕೆಳಗಡೆ ಕೆಲವೊಂದು ಹಕ್ಕಿ ಇನ್ನಿತರೆ ಕಾರಣದಿಂದ ಚಿಕ್ಕು ಕಾಯಿ, ಹಣ್ಣು ಬೀಳುತ್ತಿದ್ದವು. ಬಿದ್ದ ಕಾಯಿ-ಹಣ್ಣಿಗೆ ಬರುವ ಕೀಟಗಳು ಗಿಡದಲ್ಲಿನ ಕಾಯಿಗಳನ್ನು ಹಾಳು ಮಾಡುತ್ತಿದ್ದವು. ಬಿದ್ದ ಕಾಯಿ-ಹಣ್ಣು ಆಯ್ದುಕೊಂಡು ಡ್ರಮ್‌ನಲ್ಲಿ ಹಾಕಿ ಅಷ್ಟೇ ಪ್ರಮಾಣದ ಬೆಲ್ಲ ಸೇರಿಸಿ ಅದರಿಂದ ರಸಾಯನ ತಯಾರಿಸಲಾಗುತ್ತದೆ. ಮೂರು ತರಹದ ಹಾಲು ಇರುವ ಎಲೆಗಳು, ಮೂರು ತರಹದ ವಿಷಕಾರಿ ಎಲೆಗಳು, ಮೂರು ತರಹದ ನಾರಿನ ಅಂಶ ಹೆಚ್ಚಿರುವ ಎಲೆಗಳು ಒಟ್ಟು 9 ತರಹದ ಸುಮಾರು 10 ಕೆಜಿ ಎಲೆಗಳಿಗೆ 3 ಕೆಜಿಯಷ್ಟು ಎಲೆ ತಂಬಾಕು, 3 ಕೆಜಿ ಹಸಿಮೆಣಸಿನಕಾಯಿ ಹಾಗೂ 1 ಕೆಜಿಯಷ್ಟು ಜವಾರಿ ಬೆಳ್ಳೊಳ್ಳಿ ರುಬ್ಬಿ ಹಾಕಿ 45 ದಿನಗಳವರೆಗೆ ಇರಿಸುವ ಮೂಲಕ ದಶಪರ್ಣಿ ತಯಾರಿಸಲಾಗುತ್ತದೆ. ಕೀಟಗಳ ಬಾಧೆ ನಿಯಂತ್ರಣಕ್ಕೆ ಇದನ್ನು ಬಳಸಲಾಗುತ್ತದೆ.

ನವಧಾನ್ಯಗಳನ್ನು ಒಂದಿಂಚು ಮಣ್ಣಿನಲ್ಲಿ ಹಾಕಿ ಕತ್ತಲಿನಲ್ಲಿ ಇರಿಸಲಾಗುತ್ತದೆ. ಧಾನ್ಯಗಳು ಮೊಳಕೆ ಬಂದು, ಎಲೆ ಬಿಡುವುದರೊಳಗೆ ಅವುಗಳನ್ನು ಮಣ್ಣಿನಿಂದ ಬೇರ್ಪಡಿಸಿ ರುಬ್ಬಿ, 10 ದಿನ ನೀರಿನಲ್ಲಿ ಇರಿಸಲಾಗುತ್ತದೆ. ಇದು ಜಿಬ್ರಾಲಿಕ್‌ ಆ್ಯಸಿಡ್‌ ಆಗಿ ಪರಿವರ್ತನೆಗೊಳ್ಳಲಿದೆ. ಕಂಪೆನಿಗಳು ಒಂದು ಲೀಟರ್‌ಗೆ ಸುಮಾರು 40-50 ಸಾವಿರ ರೂ.ನಂತೆ ಮಾರಾಟ ಮಾಡುತ್ತಿವೆಯಂತೆ. ಜತೆಗೆ ಪಂಚಗವ್ಯ-ದಶಗವ್ಯ ತಯಾರಿಸಲಾಗುತ್ತದೆ. ಮೂರು ತರಹದ ಏಕದಳ ಧಾನ್ಯಗಳು, ಮೂರು ತರಹದ ದ್ವಿದಳ ಧಾನ್ಯಗಳು, ಮೂರು ತರಹದ ಎಣ್ಣೆ ಕಾಳುಗಳು ಸೇರಿ ಒಟ್ಟು 18 ಕೆಜಿ ಧಾನ್ಯಗಳನ್ನು ಹಿಟ್ಟು ಮಾಡಿ, ತಾಮ್ರದ ಪಾತ್ರೆಯಲ್ಲಿರಿಸಬೇಕು, ತುಕ್ಕು ಹಿಡಿಯದ 30 ಮಳೆ, ಬ್ಯಾಟರಿಯ ಹಳೇ ಸೆಲ್‌ಗ‌ಳಲ್ಲಿನ ಕರಿದಾದ ಪದಾರ್ಥ ಹಾಕಿ ಒಂದು ತಿಂಗಳು ಬಿಡುವ ಮೂಲಕ ಪೋಷಕಾಂಶ ತಯಾರಿಸಲಾಗುತ್ತಿದೆ.

6 ಟ್ರಿಪ್‌ ಮಣ್ಣು, ಆರು ಟ್ರಿಪ್‌ ಎಲೆಗಳು, ಆರು ಟ್ರಿಪ್‌ ಸಗಣೆ ಸೇರಿಸಿ ಹಸಿರೆಲೆ ಗೊಬ್ಬರ ಹೀಗೆ ವಿವಿಧ ಔಷಧ, ಪೋಷಕಾಂಶಗಳನ್ನು ವಿಜಯಕುಮಾರ ಅವರ ತೋಟದಲ್ಲಿ ತಯಾರು ಮಾಡಲಾಗುತ್ತದೆ. ಜತೆಗೆ 22 ಡ್ರಮ್‌ಗಳಲ್ಲಿ ಗೋಕೃಪಾಮೃತ ತಯಾರು ಮಾಡಲಾಗುತ್ತದೆ. ಅಡಿಕೆ ಮರಗಳಿಗೆ ಸುಳಿರೋಗ ಬಂದರೆ ಬುಡಸಮೇತ ಕಿತ್ತು ಹಾಕಬೇಕೆಂಬುದು ಅನೇಕ ರೈತರ ಅನಿಸಿಕೆ. ವಿಜಯಕುಮಾರ ಅವರ ತೋಟದಲ್ಲಿನ 4,500 ಅಡಿಕೆ ಮರಗಳಲ್ಲಿ ಏಳು ಮರಗಳಿಗೆ ಸುಳಿರೋಗ ಕಾಣಿಸಿಕೊಂಡಿತ್ತು. ಮರಗಳನ್ನು ಕಿತ್ತು ಹಾಕದೆ ಮೇಲಿನ ಭಾಗವನ್ನು ಕ್ರಾಸ್‌ ಕಟ್‌ ಮಾಡಿದರೆ, ಒಳಗೆ ಇನ್ನೊಂದು ಸುಳಿ ಇರುತ್ತದೆ. ಆ ಸುಳಿ ಮೇಲೆ ದಶಪರ್ಣಿ ಹಾಕುತ್ತ ಬಂದಿದ್ದು, ಇದೀಗ ಸುಳಿರೋಗಕ್ಕೆ ಸಿಲುಕಿದ ಮರಗಳು ಹೊಸ ಚಿಗುರಿನೊಂದಿಗೆ ಬೆಳೆದು ನಿಂತಿವೆ.

ಟಾಪ್ ನ್ಯೂಸ್

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.