ಕೆರೆ ಸಂರಕ್ಷಣೆ ನಮ್ಮ ಕರ್ತವ್ಯ: ಮಹನ್ಯಾ
Team Udayavani, Nov 18, 2019, 10:21 AM IST
ಹುಬ್ಬಳ್ಳಿ: ನಮ್ಮ ಕೆರೆ, ನಮ್ಮ ಹಕ್ಕಾಗಿದ್ದು, ಅದನ್ನು ಸುರಕ್ಷಿತವಾಗಿ ಕಾಪಾಡುವುದು ಕೂಡ ನಮ್ಮ ಕರ್ತವ್ಯವಾಗಿದೆ ಎಂದು ಕನ್ನಡ ಕೋಗಿಲೆ ಖ್ಯಾತಿಯ ಮಹನ್ಯಾ ಪಾಟೀಲ ಹೇಳಿದರು.
ಇಲ್ಲಿನ ಉಣಕಲ್ಲ ಕೆರೆ ಅಭಿವೃದ್ಧಿ ಸಂಘದಿಂದ ನಡೆಯುತ್ತಿರುವ ಉಣಕಲ್ಲ ಕೆರೆ ಸ್ವತ್ಛತಾ ಶ್ರಮದಾನದಲ್ಲಿ ರವಿವಾರ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮದ ಕೆರೆ ಎಂದಾಗ ಅದು ಇಡೀ ಗ್ರಾಮದ ಆಸ್ತಿಯಾಗಿರುತ್ತದೆ. ಇದನ್ನು ಹಾಳು ಮಾಡುವ ಹಕ್ಕು ಯಾರಿಗೂ ಇರಲ್ಲ. ಹೀಗಾಗಿ ಇಡೀ ಗ್ರಾಮದ ಜನರು ಒಗ್ಗೂಡಿಕೊಂಡು ಕೆರೆ ಸಂರಕ್ಷಣೆ ಮಾಡಬೇಕು ಎಂದರು.
ಕೆರೆಗಳ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಕಡಿಮೆಯಾಗುತ್ತಿದೆ. ಇದರ ಪರಿಣಾಮ ಕೆರೆಗಳು ಇಲ್ಲದಂತಾಗುತ್ತಿವೆ. ಪೂರ್ವಜರು ಗ್ರಾಮಕ್ಕೊಂದು ಕೆರೆ ನಿರ್ಮಿಸುವುದರ ಹಿಂದೆ ವೈಜ್ಞಾನಿಕ ಅಂಶವಿದೆ. ಕೆರೆಯಿಂದ ಅಂತರ್ಜಲ ವೃದ್ಧಿಸುವುದರ ಜತೆಗೆ ಇಡೀ ಗ್ರಾಮಕ್ಕೆ ನೀರಿನ ಸಮಸ್ಯೆ ನೀಗಿಸುತ್ತದೆ. ಆದರೆ ನಗರ ಪ್ರದೇಶಗಳಲ್ಲಿ ಅದೆಷ್ಟೋ ಕೆರೆಗಳು ಲೇಔಟ್ ಗಳಾಗಿ ಮಾರ್ಪಾಡಾಗಿವೆ. ಒಂದಿಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳನ್ನು ಕಾಣಬಹುದಾಗಿದ್ದರೂ ಸಂರಕ್ಷಣೆ ಕಾರ್ಯಗಳು ಆಗುತ್ತಿಲ್ಲ. ಕೆರೆಗಳು ಮುಂದಿನ ಜನಾಂಗಕ್ಕೂ ಅಗತ್ಯವಾಗಿವೆ ಎಂಬುದನ್ನು ಅರಿತು ಕೆರೆಗಳ ಸಂರಕ್ಷಣೆಗೆ ಪ್ರತಿಯೊಬ್ಬರು ಪಣ ತೊಡಬೇಕು ಎಂದರು.
ಕಲಾವಿದ ಬಸವರಾಜ ಯಾದವಾಡ ಮಾತನಾಡಿ, ಗ್ರಾಮದ ಕೆರೆ, ಹಳ್ಳ, ಕೊಳ್ಳಗಳನ್ನು ನಿರ್ಲಕ್ಷಿಸಿದರೆ ಅದರ ಪರಿಣಾಮ ಪ್ರತಿಯೊಬ್ಬರು ಅನುಭವಿಸಬೇಕಾಗುತ್ತದೆ. ಕೆರೆಗಳನ್ನು ಕಲುಷಿತಗೊಳ್ಳದಂತೆ ಕಾಪಾಡಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಉಣಕಲ್ಲ ಅಭಿವೃದ್ಧಿ ಸಂಘದ ಮೂಲಕ ಯುವಕರು ಕೆರೆ ಸ್ವತ್ಛಗೊಳಿಸುವ ಕಾರ್ಯ ಮಾದರಿಯಾಗಿದ್ದು, ಇಂತಹ ಕಾರ್ಯಗಳು ಪ್ರತಿ ಗ್ರಾಮದಲ್ಲಿ ಆಗಬೇಕು ಎಂದರು.
ಯುವಕರ ಕಾರ್ಯಕ್ಕೆ ಮೆಚ್ಚುಗೆ: ಉಣಕಲ್ಲ ಕೆರೆ ಅಭಿವೃದ್ಧಿ ಸಂಘದ ಮೂಲಕ ಯುವಕರ ಪಡೆಯೊಂದು ಕೆರೆಯಲ್ಲಿ ಬೆಳೆದಿರುವ ಜಲಕಳೆ ಸ್ವತ್ಛಗೊಳಿಸುವ ಕಾರ್ಯಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಕಳೆದ 15 ದಿನಗಳಿಂದ ಬೆಳಗ್ಗೆ ಹಾಗೂ ರಜಾದಿನಗಳಲ್ಲಿ ಇಡೀ ದಿನ ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿವಿಧ ರೂಪದ ಮೂಲಕ ನೆರವು ನೀಡುತ್ತಿದ್ದಾರೆ.ಜಿಲ್ಲಾಡಳಿತ, ಪಾಲಿಕೆಯಿಂದಲೂ ಅಗತ್ಯ ನೆರವು ನೀಡುವ ಭರವಸೆ ದೊರೆತಿವೆ. ಕೆಲವರು ರವಿವಾರ ಹಾಗೂ ರಜಾ ದಿನಗಳಲ್ಲಿ ಯುವಕರೊಂದಿಗೆ ಕೈ ಜೋಡಿಸಿ ಸ್ವತ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಮಹೇಶ ಚಿಕ್ಕವೀರಮಠ, ಸಿದ್ದ ಕೆಂಚಣ್ಣವರ, ಜಯಪ್ರಕಾಶ ಉಡುಪಿ, ಶಿವಕುಮಾರ ಸಾಲಿ, ಸಂಗಮೇಶ ಗೌರಿಮಠ, ಸತೀಶ, ಮಂಜುನಾಥ ಸೇರಿದಂತೆ ಇನ್ನಿತರರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ
Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ
MUST WATCH
ಹೊಸ ಸೇರ್ಪಡೆ
Ballari; ಪ್ರತ್ಯೇಕ ಸ್ಥಳಗಳಲ್ಲಿ ಕರಡಿಗಳ ದಾಳಿ: ಇಬ್ಬರಿಗೆ ತೀವ್ರ ಗಾಯ
Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ