ಕೈಗೆ ಬಲ, ಕಮಲ ಛಲ, ದಳ ವಿಲವಿಲ
Team Udayavani, Sep 7, 2021, 1:45 PM IST
ಧಾರವಾಡ: ಗೆದ್ದೇ ತೀರುತ್ತೇವೆಎಂದವರು ಮಕಾಡೆ ಮಲಗಿದರು,ಸೋಲು ನಿರೀಕ್ಷಿಸಿದವರೇ ಕೊನೆ ಕಣದÒ ಲ್ಲಿಗೆದ್ದು ಬೀಗಿದರು, ಉಳಿಪೆಟ್ಟು ತಿಂದುಗಟ್ಟಿಯಾದ ಬಂಡಾಯಗಾರರು, ಒಟ್ಟಿನಲ್ಲಿ ಪೂರ್ಣ ಬಹುಮತಪಡೆಯದೇ ಕಮಲ ಕುಲು ಕುಲು, ಕಳೆದಬಾರಿಗಿಂತ ಕೊಂಚ ಚೇತರಿಸಿಕೊಂಡ ಕೈಕಿಲ ಕಿಲ. ಒಂಭತ್ತರಿಂದ ಕೇವಲ ಒಂದೇ ಒಂದು ಸ್ಥಾನಕ್ಕೆ ಕುಸಿದ ಜೆಡಿಎಸ್ ವಿಲವಿಲ. ಪಕ್ಷೇತರರದ್ದು ಸೆಡ್ಡು ಹೊಡೆದ ಬಲಾಬಲ.
ಹೌದು, ದಶಕಗಳ ಕಾಲಬಿಜೆಪಿ ಭದ್ರಕೋಟೆಯಾಗಿದ್ದಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯಲ್ಲಿ ಸ್ಪಷ್ಟ ಬಹುಮತಪಡೆಯುವಲ್ಲಿ ಬಿಜೆಪಿ ಹಿನ್ನಡೆಅನುಭವಿಸಿದೆ. ಆದರೂ ತನ್ನದೇ ಪಕ್ಷದಬಂಡಾಯಗಾರರ ಮನವೊಲಿಕೆಯಿಂದಮತ್ತೆ ಅಧಿಕಾರ ಗದ್ದುಗೆ ಹಿಡಿಯುವತಂತ್ರಗಾರಿಕೆ ಮೂಲಕ ಮತ್ತೂಮ್ಮೆಅರಳಲು ಸಜ್ಜಾಗಿದೆ.ಪಾಲಿಕೆಯ 1-34 ವಾರ್ಡ್ಗಳವ್ಯಾಪ್ತಿ ಒಳಗೊಂಡಿರುವ ಧಾರವಾಡಗ್ರಾಮೀಣ ವಿಧಾನಸಭಾ ಕ್ಷೇತ್ರ ಮತ್ತುಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಈ ಬಾರಿ ಕೈ-ಕಮಲಪಡೆ ತೀವ್ರ ಸೆಣಸಾಟ ನಡೆಸಿದ್ದವು.
2013ರಲ್ಲಿ ನಡೆದ ಪಾಲಿಕೆ ಚುನಾವಣೆಗೆಹೊಲಿಸಿದರೆ ಕೈ ಚೇತರಿಸಿಕೊಂಡಿದ್ದು, ಕಮಲಕ್ಕೆ ಕೊಂಚ ಹಿನ್ನಡೆಯಾಗಿದ್ದರೆ, ದಳಧೂಳೀಪಟವಾಗಿದೆ.ಪಾಳೆಗಾರರ ಸಮಬಲದ ಕಾದಾಟ:ಧಾರವಾಡ ಗ್ರಾಮೀಣ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಕೈ-ಕಮಲ ಎರಡೂ ಪಕ್ಷಗಳ ಸಮಬಲದ ಕಾದಾಟನಡೆಸಿದ್ದವು. ಕಳೆದ ಬಾರಿ 2013ರಲ್ಲಿಇಲ್ಲಿನ ಒಟ್ಟು 8 ವಾರ್ಡ್ಗಳ ಪೈಕಿಬಿಜೆಪಿ-4, ಕಾಂಗ್ರೆಸ್-3 ಹಾಗೂಜೆಡಿಎಸ್-1 ಸ್ಥಾನ ಪಡೆದುಕೊಂಡಿದ್ದವು.
2021ರಲ್ಲಿ ಒಟ್ಟು 9 ವಾರ್ಡ್ಗಳಪೈಕಿ ಬಿಜೆಪಿ-5 ಹಾಗೂ ಕಾಂಗ್ರೆಸ್-4ಸ್ಥಾನಗಳನ್ನು ಗೆದ್ದುಕೊಂಡಿವೆ.ಈ ಕàತ ೆÒ Åದಲ್ಲಿ ಮಾಜಿ ಸಚಿವ ವಿನಯ್ಕುಲಕರ್ಣಿ ಹಾಗೂ ಹಾಲಿ ಶಾಸಕಅಮೃತ ದೇಸಾಯಿ ಅವರ ಮಧ್ಯೆ ತೀವ್ರಹಣಾಹಣಿ ಏರ್ಪಟ್ಟಿತ್ತು. ವಿನಯ್ ಜಿಲ್ಲೆಪ್ರವೇಶವಿಲ್ಲದೇ ಇದ್ದರೂ, ಮೊಬೈಲ್ಮೂಲಕ ವಿಡಿಯೋಗಳನ್ನು ಮಾಡಿತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಮಾಡಿದ್ದರು.
ವಿನಯ್ ಪತ್ನಿ ಶೀವಲೀಲಾಕುಲಕರ್ಣಿ, ಮಾಜಿ ಸಚಿವ ಸಂತೋಷಲಾಡ್ ಕೂಡ ಕೈ ಅಭ್ಯರ್ಥಿಗಳ ಬೆಂಬಲಕ್ಕೆನಿಂತಿದ್ದರು. ಕಳೆದ ಬಾರಿಗಿಂತ ಬಿಜೆಪಿಒಂದು ಸ್ಥಾನ ಹೆಚ್ಚು ಪಡೆದರೆ, ಕಾಂಗ್ರೆಸ್ಕೂಡ ಒಂದು ಸ್ಥಾನ ಹೆಚ್ಚು ಪಡೆದಿದೆ.ಪಾಳೆಗಾರರ ಸಮಬಲದ ಕಾದಾಟಮತ್ತೂಮ್ಮೆ ರುಜುವಾತಾಗಿದೆ.
ಪಶ್ಚಿಮದಲ್ಲಿ ಗೆದ್ದು ಸೋತ ಬಿಜೆಪಿ: ಶಾಸಕಹಾಗೂ ಬಿಜೆಪಿ ನಗರ ಜಿಲ್ಲಾ ಘಟಕದಅಧ್ಯಕ್ಷರಾಗಿರುವ ಅರವಿಂದ ಬೆಲ್ಲದಅವರು ಪ್ರತಿನಿಧಿಸುವ ಹು-ಧಾ ಪಶ್ಚಿಮ ವಿಧಾನಸಭಾ ಕàತೆÒ Å ವ್ಯಾಪ್ತಿಯಲ್ಲೂ ಬಿಜೆಪಿಮುನ್ನಡೆ ಕಾಯ್ದುಕೊಂಡಿದೆಯಾದರೂ,ಕಳೆದಪಾಲಿಕೆಚುನಾವಣೆಗೆಹೋಲಿಸಿದರೆಕಡಿಮೆ ವಾರ್ಡ್ಗಳನ್ನು ಗೆದ್ದುಕೊಂಡುಕೊಂಚ ಹಿನ್ನಡೆ ಅನುಭವಿಸಿದೆ.
2013ರಲ್ಲಿ ಹು-ಧಾ ಪಶ್ಚಿಮವಿಧಾನಸಭಾ ಕàತೆÒ Å ವ್ಯಾಪ್ತಿಯ 19ವಾರ್ಡ್ಗಳ ಪೈಕಿ ಒಟ್ಟು 11 ವಾಡ್ìಗಳಲ್ಲಿ ಜಯಗಳಿಸಿ, ಶೇ.60ಮತಬೇಟೆಯಾಡಿತ್ತು.ಆಗ ಇಲ್ಲಿ ಕಾಂಗ್ರೆಸ್-5 ಹಾಗೂ ಜೆಡಿಎಸ್-3 ಸ್ಥಾನಗಳನ್ನುಪಡೆದುಕೊಂಡಿದ್ದವು. 2021ರಲ್ಲಿ ಈಕ್ಷೇತ್ರ ವ್ಯಾಪ್ತಿಯ 25 ವಾರ್ಡ್ಗಳ ಪೈಕಿಬಿಜೆಪಿ 13 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ,ಕಾಂಗ್ರೆಸ್-10, ಜೆಡಿಎಸ್-1 ಹಾಗೂಪಕàತ ೆÒ ರ-1ರಲ್ಲಿ ಜಯ ಗಳಿಸಿದ್ದು,ಶೇ.53 ಮತ ಪಡೆದುಕೊಂಡಿದೆ.
ಆದರೆಕೈ ಇಲ್ಲಿಯೂ ಕಳೆದ ಬಾರಿಗಿಂತ ಹೆಚ್ಚಿನಸ್ಥಾನ ಗೆದ್ದುಕೊಂಡಿದೆ.ಕೈ-ಕಮಲಕೆ R ಬಂಡಾಯದ ಬಿಸಿ:ಧಾರವಾಡ ನಗರ ವ್ಯಾಪ್ತಿಯ 27 ವಾಡ್ìಗಳ ಪೈಕಿ 16 ವಾರ್ಡ್ಗಳಲ್ಲಿ ಬಿಜೆಪಿಮತ್ತು ಕಾಂಗ್ರೆಸ್ ಪಕ್ಷಕ್ಕೆ ಬಂಡಾಯದತೀವ್ರ ಬಿಸಿ ತಟ್ಟಿದ್ದು, ಇಲ್ಲಿ ಪಕ್ಷಗಳಅಭ್ಯರ್ಥಿಗಳು ಕೆಲವು ಕಡೆ ಸೋಲುಕಂಡರೆ ಇನ್ನು ಕೆಲ ಕ್ಷೇತ್ರದಲ್ಲಿ ಪ್ರಯಾಸದಗೆಲುವು ಸಾಧಿಸಿದ್ದಾರೆ.
3ನೇ ವಾರ್ಡಿನಲ್ಲಿಬಿಜೆಪಿಗೆ ಮಂಜುನಾಥ ನಡಟ್ಟಿ ತೀವ್ರಠಕ್ಕರ್ ಕೊಟ್ಟಿದ್ದರೆ, 24ನೇ ವಾರ್ಡಿನಲ್ಲಿಮಹಾವೀರ ಶಿವಣ್ಣವರ, 29ನೇವಾರ್ಡ್ನಲ್ಲಿ ಮಂಜುನಾಥ ಬುರಲಿಕಮಲ ಪಾಳೆಯಕ್ಕೆ ಬಂಡಾಯದಬಿಸಿ ಮುಟ್ಟಿಸಿದ್ದಾರೆ. ಧಾರವಾಡನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್ಗೂಬಂಡಾಯದ ಬಿಸಿ ಮುಟ್ಟಿದ್ದು, 6ನೇವಾರ್ಡ್ನಲ್ಲಿ ಶಾಹೀನ್ ಹಾವೇರಿಪೇಟ್,8ನೇ ವಾರ್ಡ್ನಲ್ಲಿ ಮಂಜುನಾಥ ಕದಂ,ಪ್ರಕಾಶ ಘಾಟಗೆ, 9ನೇ ವಾರ್ಡ್ನಲ್ಲಿಸವಿತಾ ಕಟಗಿ ಬಂಡಾಯ ಬಾವುಟಹಾರಿಸಿದ್ದರಿಂದ ಕೈ ಈ ಕ್ಷೇತ್ರಗಳಲ್ಲಿ ಸಾಕಷ್ಟುನಷ್ಟ ಅನುಭವಿಸುವಂತಾಯಿತು.
ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ
Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ
MUST WATCH
ಹೊಸ ಸೇರ್ಪಡೆ
Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ