![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
Gadaga: ಹುಟ್ಟು-ಸಾವಿನ ನಡುವಿನ ಅಂತರ ಕಂಡುಕೊಳ್ಳಿ; ಗವಿಶ್ರೀ ಆಶೀರ್ವಚನ
ಕೊಟ್ಟರೆ ಖಾಲಿಯಾಗಬಾರದು, ಮನೆಯಲ್ಲಿಟ್ಟರೆ ಹಾಳಾಗಿರಬಾರದು
Team Udayavani, Nov 29, 2023, 5:58 PM IST
![Gadaga: ಹುಟ್ಟು-ಸಾವಿನ ನಡುವಿನ ಅಂತರ ಕಂಡುಕೊಳ್ಳಿ; ಗವಿಶ್ರೀ ಆಶೀರ್ವಚನ](https://www.udayavani.com/wp-content/uploads/2023/11/Gavishree-620x414.jpg)
ಗದಗ: ಹುಟ್ಟು ಬಿಟ್ಟು ಸಾವಿಲ್ಲ, ಸಾವು ಬಿಟ್ಟು ಹುಟ್ಟಿಲ್ಲ. ಹುಟ್ಟು-ಸಾವಿನ ನಡುವಿನ ಹೋರಾಟವೇ ಜೀವನ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಶ್ರೀ ಹೇಳಿದರು.
ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಜರುಗಿದ ಆಧ್ಯಾತ್ಮಿಕ ಪ್ರವಚನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದೇಹ, ಮಾತು, ಮನಸ್ಸನ್ನು ಸರಿಯಾಗಿ ಬಳಸಿಕೊಳ್ಳುವುದೇ ಜೀವನ. ನಮ್ಮಲ್ಲಿರುವ ಪ್ರಜ್ಞೆಯಿಂದ ಉತ್ತಮ ಕಾರ್ಯಗಳನ್ನು ಮಾಡುವುದರಿಂದ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ನಾವು ಹುಟ್ಟಿನಿಂದ ಸಾವಿನವರೆಗೆ ನಡೆಸುವ ಪಾಪ-ಪುಣ್ಯಗಳ ಕರ್ಮದ ಫಲಗಳು ನಮ್ಮ ಜೀವನವನ್ನು ಮುನ್ನಡೆಸುತ್ತವೆ. ಆದ್ದರಿಂದ ನಮ್ಮ ಕಾರ್ಯಗಳು ಪುಣ್ಯದ ಕೆಲಸಗಳಾಗಿರಬೇಕು. ಅದರಿಂದ ಮಾತ್ರ ಜೀವನವು ಪುಣ್ಯಪ್ರಾಪ್ತವಾಗುತ್ತದೆ ಎಂದು ಹೇಳಿದರು.
ಮಾನವ ತಾನು ನನ್ನದು ಎಂದು ಕೊಂಡಿರುವ ನಗದು, ಹೊಲ, ಮನೆ, ಅಧಿಕಾರ, ಸಂಪತ್ತು ಸೇರಿ ಎಲ್ಲವನ್ನೂ ಸಾವು ಕಸಿದುಕೊಂಡು ಹೋಗುತ್ತದೆ. ಆದ್ದರಿಂದ ಸಾವು ನಮ್ಮಿಂದ ಕಸಿದುಕೊಳ್ಳಲಾರದ ಸಂಪತ್ತಾಗಿರುವ ಪುಣ್ಯವನ್ನು ನಾವು ಗಳಿಸಬೇಕಿದೆ. ಪುಣ್ಯವನ್ನು ಸಂಪಾದಿಸುವುದು ನಮ್ಮ ಜೀವನದ ಗುರಿಯಾಗಬೇಕು. ಪುಣ್ಯವನ್ನು ಮಾತ್ರ ಸಾವಿನಿಂದ ಕಸಿದುಕೊಳ್ಳಲಾಗದು ಎಂದರು. ಕೊಟ್ಟರೆ ಖಾಲಿಯಾಗಬಾರದು, ಮನೆಯಲ್ಲಿಟ್ಟರೆ ಹಾಳಾಗಿರಬಾರದು, ಕಟ್ಟಿದ ಗಂಟು ಅಂಗಳದಲ್ಲಿಟ್ಟರೂ ಮುಟ್ಟಲು ಬಂದಿರಬಾರದು. ಅದುವೇ ಪುಣ್ಯದ ಕಾರ್ಯವಾಗಿದೆ. ಮನುಷ್ಯ ಪುಣ್ಯದ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.
ನೀರು, ಧೂಪ-ದೀಪಗಳಿಂದ, ಬಿಲ್ವಪತ್ರೆ- ಹೂವುಗಳಿಂದ ಮಾಡುವುದು ಪೂಜೆಯಲ್ಲ. ಇನ್ನೊಬ್ಬರ ವಸ್ತುಗಳನ್ನು ಬಳಸದೇ, ಭಕ್ತಿ-ಭಾವದಿಂದ, ಸಮಚಿತ್ತದಿಂದ ಮಾಡುವುದೇ ಪೂಜೆ. ಶರಣರು, ಅನುಭಾವಿಗಳು ಹಾಗೂ ಸಂತರು ಶರಣು-ಶರಣಾರ್ಥಿ ಎನ್ನುತ್ತಲೇ ಕಲ್ಯಾಣ ಕಟ್ಟಿದರು. ಆದ್ದರಿಂದ ಮನುಷ್ಯರು ಮತ್ತೂಬ್ಬರ ಬಗ್ಗೆ ನಿಂದನೆ ಮಾಡಲಾರದೇ, ನಮ್ಮ ಕಾಯಕವನ್ನು ಮಾಡುತ್ತ, ಪರಸ್ಪರರಿಗೆ ಗೌರವ ಕೊಡುತ್ತ ಜೀವನ ಸಾಗಿಸಿದರೆ ಬಾಳು ಬಂಗಾರವಾಗುತ್ತದೆ ಎಂದು ಹೇಳಿದರು.
ಚಿಕೇನಕೊಪ್ಪ ಶರಣರ ಮಠದ ಶಿವಶಾಂತವೀರ ಶರಣರು, ಆಧ್ಯಾತ್ಮ ಪ್ರವಚನ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ, ಚಂದ್ರು ಬಾಳಿಹಳ್ಳಿಮಠ, ಗುರಣ್ಣ ಬಳಗಾನೂರ, ಶೇಖಣ್ಣ ಗದ್ದಿಕೇರಿ, ಬಾಲಚಂದ್ರ ಭರಮಗೌಡ್ರ, ಧೀರಜ್ ಜೈನ್, ಮುರುಘರಾಜೇಂದ್ರ ಬಡ್ನಿ, ರಾಘವೇಂದ್ರ ಕಾಲವಾಡ, ಅಶೋಕ ಪಾಟೀಲ ಇದ್ದರು.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.