ರಾಜ್ಯಕ್ಕೆ ಕೇಂದ್ರ ಸರಕಾರ ಸ್ಪಂದನೆ ಏನು?: ಪಾಟೀಲ
Team Udayavani, Nov 2, 2020, 8:34 PM IST
ಗದಗ/ಮುಳಗುಂದ: ರಾಜ್ಯದಲ್ಲಿ ಈ ಬಾರಿ ಉಂಟಾಗಿರುವ ಅತಿವೃಷ್ಟಿ, ಪ್ರವಾಹದಿಂದಾಗಿ 250ಜೀವಗಳನ್ನು ಕಳೆದುಕೊಂಡಿದ್ದೇವೆ. 35 ರಿಂದ 430 ಸಾವಿರ ಕೋಟಿ ರೂ. ಮೊತ್ತದ ಬೆಳೆ ಹಾನಿಯಾಗಿದೆ. ಇವತ್ತು ರಾಜ್ಯ ದೊಡ್ಡ ಆಪತ್ತಿಗೆ ಸಿಲುಕಿದ್ದರೂ ಕೇಂದ್ರ ಸರಕಾರ ಸ್ಪಂದನೆ ಏನು ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಆದರೆ, ಕೇಂದ್ರ ಸರಕಾರ ನಯಾ ಪೈಸೆಯೂ ನೀಡುತ್ತಿಲ್ಲ. ಇದು ರಾಜ್ಯ ಸರಕಾರದ ಅಶಕ್ತತೆಯನ್ನು ತೋರಿಸುತ್ತದೆ. ರಾಜ್ಯದ ಪ್ರತಿನಿಧಿಗಳು ಕೇಂದ್ರದೊಂದಿಗೆ ಸಂಘರ್ಷ ಮಾಡಿ, ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಒಟ್ಟಾರೆ, ಪ್ರವಾಹ ಮತ್ತು ಅತಿವೃಷ್ಟಿಯಿಂದ ಕನ್ನಡದ ಜನತೆ ಅತ್ಯಂತ ನೋವು ಅನುಭವಿಸುವ ದುರ್ದೈವಿಗಳಾಗಿದ್ದಾರೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಕಳೆದ ವರ್ಷ ಪ್ರವಾಹಕ್ಕೆ ಸಿಲುಕಿದ್ದನೆರೆ ಸಂತ್ರಸ್ತ್ರಿಗೆ ಈ ವರೆಗೆ ಸೂರು ಕಲ್ಪಿಸಲಾಗಿಲ್ಲ. ಜನರು ಬೀದಿ ಬದಿಯಲ್ಲೇ ಜೀವನ ಕಳೆಯುಚವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಬಿಡಲ್ಲ: ಕಪ್ಪತ್ತಗುಡ್ಡ ಪರಿಸರದ ಆಸ್ತಿಯಾಗಿ ಉಳಿಯಬೇಕು. ಗಣಿಗಾರಿಕೆ ಮಾಡಬಾರದು ಎಂಬುದೇ ಜಿಲ್ಲೆಯ ಜನರ ಹೋರಾಟದ ಉದ್ದೇಶ. ಇದನ್ನು ಕೆಲ ಶ್ರೀಮಂತರ ಅನುಕೂಲಕ್ಕಾಗಿ ಕಪ್ಪತ್ತಗುಡ್ಡ ವನ್ನು ಗಣಿಗಾರಿಕೆ ನೀಡಬಾರದು. ಗಣಿಗಾರಿಕೆಯಿಂದ ಜನರ ಬದುಕು ಏನಾಗುತ್ತದೆ ಎಂಬುದಕ್ಕೆ ಪಕ್ಕದ ಬಳ್ಳಾರಿ ಜಿಲ್ಲೆಯ ಬಳ್ಳಾರಿ,ಸಂಡೂರ್ ಹಾಗೂ ಜಿಂದಾಲ್ ಪ್ರದೇಶವೇ ಜೀವಂತ ಸಾಕ್ಷಿ. ಹೀಗಾಗಿ ಯಾವತ್ತೂ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಬಿಡುವುದಿಲ್ಲ ಎಂದರು.
ಕೋವಿಡ್ ಮತ್ತು ಪ್ರವಾಹದ ಹೊಡೆತದಿಂದಾಗಿ ದೇಶ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಕೊರೊನಾ ನಿಯಂತ್ರಿಸುವಲ್ಲಿ ಸರಕಾರ ವಿಫಲರಾಗಿದ್ದರಿಂದ ಅನೇಕಸಾವು-ನೋವುಗಳು ಸಂಭವಿಸಿದ್ದರೆ, ಆರ್ಥಿಕ ಕ್ಷೇತ್ರ ಸಂಪೂರ್ಣ ನೆಲಕಚ್ಚಿವೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ದೊಡ್ಡ ದೊಡ್ಡ ಪ್ಯಾಕ್ ಘೋಷಣೆ ಮಾಡಿದರೂ, ಅವು ಕೇವಲ ಪತ್ರಿಕಾ ಹೇಳಿಕೆಗಳಿಗೆ ಸೀಮಿತವಾಗಿವೆ. ಸರಕಾರದ ನೆರವಿನಿಂದ ಯಾವ ವರ್ಗಕ್ಕೆ ಅನುಕೂಲವಾಗಿದೆ ಎಂಬುದನ್ನು ಜನರ ಮುಂದಿಡಬೇಕು. ಪಿಎಂ ಕೇರ್ ಫಂಡ್, ಸಿಎಂ ಕೇರ್ ಫಂಡ್ ಗಳ ವಿವರಗಳನ್ನು ಗೌಪ್ಯವಾಗಿಡುವುದು ದುರದೃಷ್ಟಕರ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ