ನರಗುಂದ: ಆಯುರ್ವೇದದಲ್ಲಿದೆ ಪರಿಣಾಮಕಾರಿ ಚಿಕಿತ್ಸೆ

ಪಂಚಕರ್ಮ ಚಿಕಿತ್ಸೆ ಶೀಘ್ರವಾಗಿ ಗುಣಪಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ

Team Udayavani, Jun 1, 2023, 4:41 PM IST

ನರಗುಂದ: ಆಯುರ್ವೇದದಲ್ಲಿದೆ ಪರಿಣಾಮಕಾರಿ ಚಿಕಿತ್ಸೆ

ನರಗುಂದ: ಆಯುರ್ವೇದ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿದೆ.ಪುರಾತನ ಪರಂಪರೆ ಹೊಂದಿರುವ ಆಯುರ್ವೇದ ಋತುಗಳಿಗೆ ಅನುಗುಣವಾಗಿ ನೀಡುವ ಚಿಕಿತ್ಸೆಯಾದಾಗಿದೆ ಎಂದು ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಸ್ವಾಮಿಗಳು ಹೇಳಿದರು.

ಬುಧವಾರ ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಬ್ರಹ್ಮಾನಂದ ಮಹಾಸ್ವಾಮಿಗಳ 108ನೇ ಜಯಂತ್ಯುತ್ಸವ ಹಾಗೂ ನೂತನ ಗಡ್ಡಿ ತೇರಿನ ಲೋಕಾರ್ಪಣೆ ನಿಮಿತ್ತ ಜಿಲ್ಲಾ ಆಯುಷ್‌ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ
ಭೈರನಹಟ್ಟಿ ಗ್ರಾಮ ಪಂಚಾಯಿತಿ, ದೊರೆಸ್ವಾಮಿ ಜನಕಲ್ಯಾಣ ಮತ್ತು ಶಿಕ್ಷಣ ಟ್ರಸ್ಟ್‌ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆಯುರ್ವೇದ ಚಿಕಿತ್ಸಾ  ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಇದಕ್ಕೆ ಪೂರಕವೆಂಬಂತೆ ಆಯುಷ್‌
ಇಲಾಖೆ ಸಂಚಾರಿ ಚಿಕಿತ್ಸಾ ವಾಹನದ ಮೂಲಕ ಜನರ ಆರೋಗ್ಯ ಕಾಪಾಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು.

ಹೈಬ್ರಿಡ್‌ ಯುಗದಲ್ಲಿರುವ ಜನರಿಗೆ ಮೊಣಕಾಲು ನೋವು, ಸಂದು ನೋವು ಜಾಸ್ತಿಯಾಗುತ್ತಿದೆ. ಅದಕ್ಕೆ ಆಯುರ್ವೇದದ ಪಂಚಕರ್ಮ ಚಿಕಿತ್ಸೆ ಶೀಘ್ರವಾಗಿ ಗುಣಪಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದರು.

ಜಿಲ್ಲಾ ಆಯುಷ್‌ ಇಲಾಖೆ ಹಿರಿಯ ವೈದ್ಯಾ ಧಿಕಾರಿ ಡಾ|ಅಶೋಕ ಮತ್ತಿಗಟ್ಟಿ ಮಾತನಾಡಿ, ಆಯುಷ್‌ ಇಲಾಖೆಯಲ್ಲಿ ಎಲ್ಲ ರೀತಿಯ ಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಸರ್ವರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಆಯುರ್ವೇದ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಜ್ಞಾನದೇವ ಮನೇನಕೊಪ್ಪ, ಪ್ರಕಾಶ ನರಸಾಪೂರ, ನಾಗಪ್ಪ ಕಟ್ಟಿಮನಿ, ಡಾ.ಪ್ರವೀಣ
ಸರ್ವೋದಯ, ಡಾ.ಸವಿತಾ ನಿಡಗುಂದಿ, ಡಾ.ಅನೀತಾ ಉತ್ತೂರ, ಡಾ.ಬಸವರಾಜ ಹಳ್ಳೆಮ್ಮನವರ, ಪ್ರಭು ಗುಂಜ್ಯಾಳ, ಪಾಂಡುರಂಗ ಗುಡದೂರ, ಭಾರತಿ ತಳವಾರ, ಜ್ಯೋತಿ ಯಾವಗಲ್‌, ಅಂಗನವಾಡಿ ಕಾರ್ಯಕರ್ತೆ ಶರಣವ್ವ ತೆಗ್ಗಿನಮನಿ, ಜಯಶ್ರೀ ದಂಡಿನ, ಆಶಾ ಕಾರ್ಯಕರ್ತೆ ಪಾರವ್ವ ಹೂಗಾರ, ಪ್ರಮುಖರು ಉಪಸ್ಥಿತರಿದ್ದರು.

ಉಚಿತ ಚಿಕಿತ್ಸಾ ಶಿಬಿರದಲ್ಲಿ 280ಕ್ಕೂ ಹೆಚ್ಚು ಜನ ಹಾಗೂ ಸುಮಾರು 40 ಜನ ಪಂಚಕರ್ಮ ಚಿಕಿತ್ಸೆಯ ಸದುಪಯೋಗ ಪಡೆದುಕೊಂಡರು. ಈರಪ್ಪ ಐನಾಪೂರ ಕಾರ್ಯಕ್ರಮ ನಿರೂಪಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ, ವಂದಿಸಿದರು

ಆಯುರ್ವೇದ ವೈಜ್ಞಾನಿಕ ತಳಹದಿ ಮೇಲೆ ನಿಂತಿರುವ ಒಂದು ಭಾಗವಾಗಿದೆ. ಆಯುರ್ವೇದ ಕೇವಲ ಆರೋಗ್ಯ ಕಾಪಾಡಿಕೊಳ್ಳುವುದಲ್ಲದೆ ಜೀವನದ ವಿಧಾನ ಹಾಗೂ ಮಾನಸಿಕ ಸ್ವಾಸ್ಥ್ಯವನ್ನೂ ಕಾಪಾಡುವ ಏಕೈಕ ಶಾಸ್ತ್ರವಾಗಿದೆ.
ಪ್ರತಿಯೊಬ್ಬರು ಆಯುರ್ವೇದದ ಮಹತ್ವ ಅರಿತುಕೊಳ್ಳಬೇಕು.
ಶಾಂತಲಿಂಗ ಶ್ರೀಗಳು,
ದೊರೆಸ್ವಾಮಿಮಠ, ಭೈರನಹಟ್ಟಿ

ಟಾಪ್ ನ್ಯೂಸ್

1-saasd

Tamil Nadu : ನೀಲಗಿರಿಯಲ್ಲಿ ಪ್ರವಾಸಿಗರ ಬಸ್ ಕಮರಿಗೆ ಬಿದ್ದು 8 ಮಂದಿ ಮೃತ್ಯು

1-sasa

Asian Games ಅಭಿಯಾನ ದುರಂತದಲ್ಲಿ ಕೊನೆ; ಜಾರಿ ಬಿದ್ದ ಮೀರಾಬಾಯಿ ಚಾನು

accident

Holehonnuru ; ಭೀಕರ ರಸ್ತೆ ಅಪಘಾತದಲ್ಲಿ ಮೂವರ ದುರ್ಮರಣ

1-asdasd

Asian Games ಪುರುಷರ ಹಾಕಿ: 10-2ರಿಂದ ಪಾಕಿಸ್ಥಾನವನ್ನು ಮಣಿಸಿದ ಭಾರತ

1-dadas

Kushtagi : ವೈಯಕ್ತಿಕ ಸಿಟ್ಟಿಗೆ ಸ್ನೇಹಿತನ ಹತ್ಯೆಗೈದ ಇಬ್ಬರ ಬಂಧನ

Shamanuru Shivashankarappa

Lingayat ಅಧಿಕಾರಿಗಳಿಗೆ ಅನ್ಯಾಯ ಹೇಳಿಕೆಗೆ ಬದ್ಧ: ಶಾಮನೂರು ಪುನರುಚ್ಚಾರ

1-sasa-sa

Hirekerur ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag; ಸಚಿವ ಎಚ್.ಕೆ. ಪಾಟೀಲ ಅವರಿಂದ ಜಿಲ್ಲೆಯ ಮೊದಲ ಜನತಾ ದರ್ಶನಕ್ಕೆ ಚಾಲನೆ

Gadag; ಸಚಿವ ಎಚ್.ಕೆ. ಪಾಟೀಲರಿಂದ ಜಿಲ್ಲೆಯ ಮೊದಲ ಜನತಾ ದರ್ಶನಕ್ಕೆ ಚಾಲನೆ

Gadag; ಬಸ್-ಕಾರು ನಡುವೆ ಅಪಘಾತ: ಇಬ್ಬರು ಸಾವು

Gadag; ಬಸ್-ಕಾರು ನಡುವೆ ಅಪಘಾತ: ಇಬ್ಬರು ಸಾವು

Gadag: ಡಾ| ಪಂ| ಪುಟರಾಜ ಕವಿ ಗವಾಯಿ 13ನೇ ಪುಣ್ಯ ಸ್ಮರಣೋತ್ಮವ

Gadag: ಡಾ| ಪಂ| ಪುಟರಾಜ ಕವಿ ಗವಾಯಿ 13ನೇ ಪುಣ್ಯ ಸ್ಮರಣೋತ್ಮವ

Gadag; ಪಂಡಿತ ಪುಟ್ಟರಾಜ ಗವಾಯಿಗಳ 13ನೇ ಪುಣ್ಯಸ್ಮರಣೋತ್ಸವ

Gadag; ಪಂಡಿತ ಪುಟ್ಟರಾಜ ಗವಾಯಿಗಳ 13ನೇ ಪುಣ್ಯಸ್ಮರಣೋತ್ಸವ

Gadaga:ಕ್ರೀಡೆಯಲ್ಲಿ ಸೋಲೇ ಗೆಲುವಿನ ಮೆಟ್ಟಿಲು: ಉಷಾ

Gadaga:ಕ್ರೀಡೆಯಲ್ಲಿ ಸೋಲೇ ಗೆಲುವಿನ ಮೆಟ್ಟಿಲು: ಉಷಾ

MUST WATCH

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

ಹೊಸ ಸೇರ್ಪಡೆ

tower

Mulki: ಮೊಬೈಲ್‌ ಟವರ್‌ ಮೇಲೇರಿ ಪ್ರತಿಭಟನೆ ?

swim

Drown: ಕೇರಳದ ವಯನಾಡ್‌ಗೆ ಪ್ರವಾಸ- ನೀರಿನಲ್ಲಿ ಮುಳುಗಿ ಯುವಕನ ಸಾವು

MOBILE FRAUD MONEY

OTP ಹೇಳಿ ಲಕ್ಷ ರೂ. ಕಳೆದುಕೊಂಡ ಕೂಲಿ ಕಾರ್ಮಿಕ

lok adalat

Bantwal: ಯುವಕನ ಕೊಲೆ ಪ್ರಕರಣ- ಇಬ್ಬರು ಆರೋಪಿಗಳಿಗೆ ಜಾಮೀನು

power lines

Uppur: ವಿದ್ಯುತ್‌ ತಂತಿ ಸ್ಪರ್ಶಿಸಿ ಮೀನುಗಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.