

Team Udayavani, Jun 3, 2020, 1:57 PM IST
ಮುಂಡರಗಿ: ಮಂಗಾರು ಹಂಗಾಮಿನ ಮಳೆ ಹದವಾಗಿ ಆಗುತ್ತಿರುವುದರಿಂದ ಪಟ್ಟಣದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಬಿತ್ತನೆ ಬೀಜಕ್ಕಾಗಿ ಬೆಳಗ್ಗೆಯಿಂದಲೇ ಕಾಯ್ದು ನಿಂತು ಬೀಜ ಖರೀದಿ ಮಾಡಿದರು.
ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆಗಾಗಿ ಮೆಕ್ಕೆಜೋಳ, ಸೂರ್ಯಕಾಂತಿ, ಸಜ್ಜೆ, ಶೇಂಗಾ, ಹೆಸರು, ತೊಗರಿ ಬೀಜಗಳು ಲಭ್ಯವಿದ್ದು, ರೈತರು ಖರೀದಿಸಬಹುದಾಗಿದೆ. ಬೀಜ ಖರೀದಿಸುವಾಗ ರೈತರು ಈಗಾಲೇ ಎಫ್ಐಡಿ ಮಾಡಿದ್ದರೆ ಆಧಾರ ಕಾರ್ಟ್ ಮಾತ್ರ ಸಲ್ಲಿಸಬೇಕು. ಇಲ್ಲದಿದ್ದರೆ ಖಾತೆ ಉತಾರ, ಆಧಾರ್ ಕಾರ್ಡ್ ಝರಾಕ್ಸ್, ಪಿಪಿ ಸೈಜಿನ ಫೋಟೋ, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್, ಮೊಬೈಲ್ ನಂಬರ್, ಎಸ್ಸಿ/ಎಸ್ಟಿ ಇದ್ದರೆ ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ಡಂಬಳದ ರೈತ ಸಂಪರ್ಕ ಕೇಂದ್ರದಲ್ಲೂ ಕೂಡ ಬೀಜಗಳ ಲಭ್ಯತೆ ಇದೆ.
Ad
You seem to have an Ad Blocker on.
To continue reading, please turn it off or whitelist Udayavani.