ಸ್ಥಳೀಯ ಕದನದಲ್ಲಿ ಕಾಂಗ್ರೆಸ್‌-ಬಿಜೆಪಿ ನೇರ ಹಣಾಹಣಿ


Team Udayavani, May 16, 2019, 3:03 PM IST

gad-2

ಮುಂಡರಗಿ: ಸ್ಥಳೀಯ ಸಂಸ್ಥೆಯ ಪುರಸಭೆ 23 ವಾರ್ಡ್‌ಗಳ ಚುನಾವಣೆ ಮೇ 29ರಂದು ನಡೆಯಲಿದೆ. ಮೇ 16ರಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಬಿಎಸ್‌ಪಿ ಪಕ್ಷದಲ್ಲಿರುವ ಟಿಕೆಟ್ ಆಕಾಂಕ್ಷಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ನೇರವಾದ ಹಣಾಹಣಿ ಇದ್ದು, ಜೆಡಿಎಸ್‌, ಬಿಎಸ್‌ಪಿ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯಲ್ಲಿ ಪೈಪೋಟಿ ನೀಡಲಿದ್ದಾರೆ. ಪುರಸಭೆ 23 ವಾರ್ಡ್‌ಗಳಲ್ಲಿ ಮೇ 29ರಂದು ನಡೆಯಲಿರುವ ಚುನಾವಣೆಯಲ್ಲಿ 9,836 ಪುರುಷರು, 10,067 ಮಹಿಳಾ ಮತದಾರರು ಸೇರಿದಂತೆ ಒಟ್ಟು 19,903 ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.

ಹಲವು ವರ್ಷಗಳಿಂದ ಪುರಸಭೆ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದು, ಬಿಜೆಪಿ ಪಕ್ಷ ಕಾಂಗ್ರೆಸ್‌ ಹಿಡಿತದಿಂದ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಲಿದೆ. ಕಾಂಗ್ರೆಸ್‌ಗೆ ಈ ಮೊದಲು ಜೆಡಿಎಸ್‌ ಪ್ರಬಲ ಪೈಪೋಟಿ ನೀಡುತ್ತಿತ್ತು. ಆದರೆ ಕಳೆದೆರಡು ಅವಧಿಗಳಿಂದ ಕಾಂಗ್ರೆಸ್‌ಗೆ ಬಿಜೆಪಿ ತೀವ್ರ ಪೈಪೋಟಿ ನೀಡಿ ಸಂಖ್ಯೆ ಹೆಚ್ಚಿಸಿಕೊಂಡು, ಅಧಿಕಾರ ಚುಕ್ಕಾಣಿ ಹಿಡಿದುಕೊಂಡಿತ್ತು.

ಪುರಸಭೆಯಲ್ಲಿ ಕಳೆದ ಅವಧಿಯಲ್ಲಿ 23 ಸಂಖ್ಯಾಬಲದ ಜನಪ್ರತಿನಿಧಿಗಳಲ್ಲಿ ಕಾಂಗ್ರೆಸ್‌ 12 ಜನಪ್ರತಿನಿಧಿಗಳು, ಬಿಜೆಪಿ 8 ಜನಪ್ರತಿನಿಧಿಗಳು ಇದ್ದರು. ಒಬ್ಬರು ಜೆಡಿಎಸ್‌ನವರು, ಇಬ್ಬರು ಪಕ್ಷೇತರರು ಇದ್ದರು. ಮೊದಲ ಅವಧಿಯಲ್ಲಿ ಕಾಂಗ್ರೆಸ್‌ನ ಭಾರತಿ ಹಕ್ಕಿ ಅಧ್ಯಕ್ಷೆ, ಉಪಾಧ್ಯಕ್ಷರಾಗಿ ಸೋಮನಗೌಡ ಗೌಡ್ರ ಅಯ್ಕೆಯಾಗಿದ್ದರು.ನಂತರ ಎರಡನೇ ಅವಧಿಯಲ್ಲಿ ನಾಲ್ವರು ಕಾಂಗ್ರೆಸ್‌ ಮತ್ತು ಓರ್ವ ಜೆಡಿಎಸ್‌ ಸದಸ್ಯರು ಬಿಜೆಪಿಗೆ ಬೆಂಬಲಿಸಿದ್ದರಿಂದ ಬಿಜೆಪಿಯ ಹೇಮಾವತಿ ಅಬ್ಬಿಗೇರಿ ಅಧ್ಯಕ್ಷೆಯಾಗಿ, ಬಸವರಾಜ ನರೇಗಲ್ಲ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಪುರಸಭೆ ಅವಧಿ ಮುಗಿಯುವ ಹದಿನೈದು ದಿನಗಳು ಬಾಕಿ ಇರುವಾಗ ಹೇಮಾವತಿ ಅಬ್ಬಿಗೇರಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿ, ಉಪಾಧ್ಯಕ್ಷ ಬಸವರಾಜ ನರೇಗಲ್ಲ್ ಪ್ರಭಾರಿ ಅಧ್ಯಕ್ಷರಾಗಿ ಆಯ್ಕೆಯಾಗಿ ಅವಧಿ ಪೂರ್ಣಗೊಳಿಸಿದ್ದಾರೆ.

ತೀವ್ರ ಪೈಪೋಟಿ: ಈ ಎಲ್ಲ ರಾಜಕೀಯ ಬೆಳವಣಿಗೆಗಳ ಮಧ್ಯೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಬಿಎಸ್‌ಪಿ ಪಕ್ಷಗಳು ಅಭ್ಯರ್ಥಿಗಳನ್ನು ಪ್ರತಿ ವಾರ್ಡಿನಲ್ಲಿ ಕಣಕ್ಕಿಳಿಸುವುದರಿಂದ ತೀವ್ರ ಪೈಪೋಟಿ ಎದುರಾಗಲಿದೆ. ಕಾಂಗ್ರೆಸ್‌ ಪಾಳೆಯದಲ್ಲಿ ಬಿಜೆಪಿ ತೀವ್ರ ಸ್ಪರ್ಧೆಯೊಡ್ಡಿ ಪುರಸಭೆಯನ್ನು ತನ್ನ ಕೈ ವಶ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಸ್ಪರ್ಧೆ ಇದ್ದರೂ, ಜೆಡಿಎಸ್‌, ಬಿಎಸ್‌ಪಿ ಪಕ್ಷಗಳ ಅಭ್ಯರ್ಥಿಗಳು ಉಭಯ ಪಕ್ಷಗಳಿಗೆ ಪೈಪೋಟಿ ನೀಡಲಿದ್ದಾರೆ.

ನರಗುಂದ ಪುರಸಭೆಗೆ27 ನಾಮಪತ್ರ ಸಲ್ಲಿಕೆ

ನರಗುಂದ: ಪಟ್ಟಣದ ಪುರಸಭೆ ಆಡಳಿತ ಮಂಡಳಿ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ವಿವಿಧ ವಾರ್ಡ್‌ಗಳಿಗೆ ಸ್ಪರ್ಧೆ ಬಯಸಿ ಕಾಂಗ್ರೆಸ್‌, ಬಿಜೆಪಿ ಮತ್ತು ಪಕ್ಷೇತರರಾಗಿ 27 ಜನ ಉಮೇದುವಾರಿಕೆ ಸಲ್ಲಿಸಿದ್ದಾರೆ. 1ನೇ ವಾರ್ಡ್‌ ಸುನೀಲ ಕುಷ್ಟಗಿ, 2ನೇ ವಾರ್ಡ್‌ ಮಂಜುಳಾ ಪಟ್ಟಣಶೆಟ್ಟಿ, ಮೆಹಬೂಬಿ ಪಠಾಣ, 3ನೇ ವಾರ್ಡ್‌ ರಿಯಾಜ ಕೊಣ್ಣೂರ, 4ನೇ ವಾರ್ಡ್‌ ಭರತರಾಜ ಕಟ್ಟಿಮನಿ, ಸುಭಾಷ ತಳಕೇರಿ, 5ನೇ ವಾರ್ಡ್‌ ಚಂದ್ರಗೌಡ ಪಾಟೀಲ, 6ನೇ ವಾರ್ಡ್‌ ತೇಜಾಕ್ಷಿ, 7ನೇ ವಾರ್ಡ್‌ ಗೌರವ್ವ ಕೋನವರ, 9ನೇ ವಾರ್ಡ್‌ ರೇಣುಕಾ ಕೋಟೋಳಿ, 11ನೇ ವಾರ್ಡ್‌ ಸುರೇಶ ಸವದತ್ತಿ, ಫಕ್ಕೀರಪ್ಪ ಅಣ್ಣಿಗೇರಿ ನಾಮಪತ್ರ ಸಲ್ಲಿಸಿದ್ದಾರೆ. 12ನೇ ವಾರ್ಡ್‌ ಭಾವನಾ ಪಾಟೀಲ, 13ನೇ ವಾರ್ಡ್‌ ರಾಚನಗೌಡ ಪಾಟೀಲ, ಕೊಟ್ರೇಶ ಬೆಳವಟಗಿ, 14ನೇ ವಾರ್ಡ್‌ ಮಹೇಶ ಬೋಳಶೆಟ್ಟಿ, ಸಿದ್ದನಗೌಡ ಪಾಟೀಲ, 15ನೇ ವಾರ್ಡ್‌ ನೀಲವ್ವ ವಡ್ಡಿಗೇರಿ, ಬಸಪ್ಪ ಗುಡದನ್ನವರ, ಗಂಗವ್ವ ಗುಡದರಿ, 16ನೇ ವಾರ್ಡ್‌ ದೊಡ್ಡಲಾಲಸಾಬ ಕಿಲ್ಲೇದಾರ, ಸಣ್ಣಲಾಲಸಾಬ ಕಿಲ್ಲೇದಾರ, 18ನೇ ವಾರ್ಡ್‌ ಸುಮಿತ್ರಾ ತೊಂಡಿಹಾಳ, 19ನೇ ವಾರ್ಡ್‌ ಚನ್ನಪ್ಪಗೌಡ ಪಾಟೀಲ, ಯಲ್ಲಪ್ಪಗೌಡ ನಾಯ್ಕರ, 20ನೇ ವಾರ್ಡ್‌ ಕಾಶವ್ವ ಮಳಗಿ ಹಾಗೂ 22ನೇ ವಾರ್ಡ್‌ ರೇಣವ್ವ ಕಿಲ್ಲಾರಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ-15, ಕಾಂಗ್ರೆಸ್‌-8 ಹಾಗೂ ಪಕ್ಷೇತರರಾಗಿ 4 ಜನ ಸೇರಿ ಒಟ್ಟು 27 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಪ್ರತಿ ವಾರ್ಡಿನಲ್ಲೂ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದರೂ ಪಕ್ಷ ಅಂತಿಮಗೊಳಿಸುವ ಅಭ್ಯರ್ಥಿಗಳು ಕಣದಲ್ಲಿ ಉಳಿದು ಪೈಪೋಟಿ ನೀಡಲಿದ್ದಾರೆ. ಈ ಬಾರಿ ಪುರಸಭೆ ಬಿಜೆಪಿ ವಶವಾಗಲಿದೆ.

•ದೇವಪ್ಪ ಕಂಬಳಿ, ಮುಂಡರಗಿ ಮಂಡಲದ ಬಿಜೆಪಿ ಅಧ್ಯಕ್ಷ

ಚುನಾವಣೆಯಲ್ಲಿ ಕಾಂಗ್ರೆಸ್‌ ಎಲ್ಲ ಪಕ್ಷಗಳಿಗಿಂತಲೂ ಮುಂದಿದೆ. ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಅಧಿಕಾರ ಒಲಿದು ಬರಲಿದೆ.

•ರಾಮು ಕಲಾಲ್, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ಪುರಸಭೆ 23 ವಾರ್ಡ್‌ಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಚುನಾವಣೆಗೆ ನಿಲ್ಲಲಿದ್ದಾರೆ. ಇದರಿಂದ ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳಿಗೆ ಸ್ಪರ್ಧೆಯೊಡ್ಡಲಿದ್ದಾರೆ.

•ಅಶೋಕ ತ್ಯಾಮಣ್ಣವರ, ಜೆಡಿಎಸ್‌ ಅಧ್ಯಕ್ಷ

18 ನಾಮಪತ್ರ ಸಲ್ಲಿಕೆ
ಮುಂಡರಗಿ: ಪುರಸಭೆಗೆ ಮೇ 29ರಂದು ನಡೆಯುವ ಚುನಾವಣೆಗೆ ಬುಧವಾರ 18 ನಾಮಪತ್ರಗಳು ಸಲ್ಲಿಕೆಯಾಗಿವೆ.
ವಾರ್ಡ್‌ ನಂ-1 ಸುರೇಶ ಭಜಂತ್ರಿ (ಜೆಡಿಎಸ್‌), ವಾರ್ಡ್‌ ನಂ-3 ಲತಾ ಉಳ್ಳಾಗಡ್ಡಿ(ಬಿಜೆಪಿ), ವಾರ್ಡ್‌ ನಂ-4 ಗಂಗಿಮಾಳವ್ವ ಮೋರನಾಳ (ಬಿಜೆಪಿ), ವಾರ್ಡ್‌ ನಂ-5 ಶಿವಪ್ಪ ಚಿಕ್ಕಣ್ಣವರ (ಬಿಜೆಪಿ), ಬಸಪ್ಪ ಹ.ರಾಟಿ (ಪಕ್ಷೇತರ), ವಾರ್ಡ್‌ ನಂ-8, ರೇಖಾ ಕಟ್ಟಿಮನಿ (ಬಿಜೆಪಿ), ವಾರ್ಡ್‌ ನಂ-11 ನಿರ್ಮಲಾ ಕೋರ್ಲಹಳ್ಳಿ (ಬಿಜೆಪಿ), ವಾರ್ಡ್‌ ನಂ-12, ಸಣ್ಣಮೈಲಪ್ಪ ಹರಿಜನ (ಕಾಂಗ್ರೆಸ್‌), ಪ್ರಲಾØದ ಹೊಸಮನಿ (ಬಿಜೆಪಿ), ವಾರ್ಡ್‌ ನಂ-13, ದೇವಪ್ಪ ರಾಟಿ (ಕಾಂಗ್ರೆಸ್‌), ವಾರ್ಡ್‌ ನಂ-14, ಬಸಪ್ಪ ದೇಸಾಯಿ(ಪಕ್ಷೇತರ), ನಾಗರಾಜ ಹೊಂಬಳಗಟ್ಟಿ (ಕಾಂಗ್ರೆಸ್‌), ವೀರಣ್ಣ ಘಟ್ಟಿ (ಪಕ್ಷೇತರ), ವಾರ್ಡ್‌ ನಂ-16 ದ್ರುವ ಹೂಗಾರ (ಬಿಜೆಪಿ), ವಾರ್ಡ್‌ ನಂ-18 ಪ್ರಶಾಂತಕುಮಾರ ಗುಡದಪ್ಪನವರ (ಪಕ್ಷೇತರ), ನಾಗೇಂದ್ರ ಹುಬ್ಬಳ್ಳಿ (ಬಿಜೆಪಿ), ವಾರ್ಡ್‌ ನಂ-19 ಅಬೂಬಕರ್‌ ಚೌಥಾಯಿ (ಬಿಎಸ್‌ಪಿ), ವಾರ್ಡ್‌ ನಂ-22, ಕಾಶೀಮಸಾಬ ನಶೇನವರ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಎಸ್‌.ಎನ್‌. ಹಳ್ಳಿಗುಡಿ, ಕೆಎಂಕೆ. ಶರ್ಮಾ ತಿಳಿಸಿದ್ದಾರೆ.
45 ನಾಮಪತ್ರ ಸ್ವೀಕೃತ
ಗದಗ:
ಜಿಲ್ಲೆಯ ಮುಂಡರಗಿ, ನರಗುಂದ ಪುರಸಭೆಗಳ ಚುನಾವಣೆ ಕುರಿತಂತೆ ಮೇ 15 ರಂದು ಒಟ್ಟು 45 ನಾಮಪತ್ರಗಳು ಸ್ವೀಕೃತಿಯಾಗಿವೆ.

ಮುಂಡರಗಿ ಪುರಸಭೆಗೆ ಕಾಂಗ್ರೆಸ್‌ 3, ಬಿಜೆಪಿ 7, ಜೆಡಿಎಸ್‌ 1, ಬಿಎಸ್‌ಪಿ 1 ಹಾಗೂ ಪಕ್ಷೇತರರು 6 ಸೇರಿ ಒಟ್ಟು 18 ನಾಮಪತ್ರ ಸಲ್ಲಿಕೆಯಾಗಿವೆ.

ನರಗುಂದ ಪುರಸಭೆಗೆ ಕಾಂಗ್ರೆಸ್‌ 6, ಬಿಜೆಪಿ 17 ಹಾಗೂ ಪಕ್ಷೇತರ 4 ಸೇರಿದಂತೆ ಒಟ್ಟು 27 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳ ಚುನಾವಣೆ ವಿಭಾಗದ ಪ್ರಕಟಣೆ ತಿಳಿಸಿದೆ.

•ಹು.ಬಾ. ವಡ್ಡಟ್ಡಿ

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.