ವಿಲನ್ ರೋಲ್ ಮುಗೀತು, ಈಗ ಹೀರೋ ಸರಕಾರ
Team Udayavani, Sep 17, 2019, 8:26 PM IST
ಗದಗ: ರಾಜ್ಯದಲ್ಲಿ ವಿಲನ್ ಅಧಿಕಾರವಧಿ, ಪಾರ್ಟ್ ಟೈಮ್ ಸರಕಾರದ ರೋಲ್ ಮುಗಿದು, ಈಗ ಹೀರೋ ಸರಕಾರ ಅಧಿಕಾರಕ್ಕೆ ಬಂದಿದೆ. ರಾಜ್ಯದ ಜನತೆಗೂ ಈಗ ನಿಶ್ಚಿಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಸ್ವಾರಸ್ಯಕರವಾಗಿ ಹೇಳಿದರು.
ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ೨೦೧೩ರಿಂದ 2018ರ ವರೆಗೆ ವಿಲನ್(ಸಿದ್ದರಾಮಯ್ಯ) ಸರಕಾರ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆಯಾದರೂ, ಅವರಿಗೆ ಕಣ್ಣಲ್ಲಿ ಹನಿ ನೀರೂ ಬರಲಿಲ್ಲ. ಸಾಲದು ಎಂಬಂತೆ ಸಮಾಜವನ್ನೂ ಒಡೆದರು. ಅದಕ್ಕೆ ಜನರು ತಿರಸ್ಕರಿಸಿದರು.
ಬಳಿಕ ಪಾರ್ಟ್ ಟೈಮ್ ಸರಕಾರ ಅಧಿಕಾರಕ್ಕೆ ಬಂದು ಎಚ್.ಡಿ.ಕುಮಾರಸ್ವಾಮಿ ಸೈಡ್ ಆಕ್ಟರ್ ಆಗಿದ್ದರು. ಇದೀಗ ಹೀರೋ ಸರಕಾರ ಅಧಿಕಾರಕ್ಕೆ ಬಂದಿದೆ. ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮುಂದಿನ ಮೂರೂವರೆ ವರ್ಷ ಯಾವುದೇ ಅಡೆತಡೆಯಿಲ್ಲದೇ ರಾಜ್ಯ ಅಭಿವೃದ್ಧಿಯತ್ತ ಮುನ್ನಡೆಯಲಿದೆ. ಸದ್ಯ ಎದುರಾಗಿರುವ ಬರ ಮತ್ತು ನೆರೆಯನ್ನು ಸಮರ್ಥವಾಗಿ ನಿಭಾಯಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಜಿಲ್ಲಾದ್ಯಂತ ನೀರಿಗಾಗಿ ಹಾಹಾಕಾರ ಶುರು-ಅಂತರ್ಜಲ ಮಟ್ಟ ಕುಸಿತ
Gadag: ಜಮೀನು ಮಾರಾಟದ ಹಣಕ್ಕಾಗಿ ತಂದೆಯನ್ನೇ ಕೊಂದ ಮಕ್ಕಳು
Gadaga ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕಣ್ಗಾವಲು ಯೋಜನೆ ಜಾರಿ
Mundargi; ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಕೊಲೆಗೈದು ಮರಕ್ಕೆ ನೇತು ಹಾಕಿದ ದುಷ್ಕರ್ಮಿಗಳು!
ಧರ್ಮ ಪಾಲನೆಯಿಂದ ಶಾಂತಿ ಸಾಧ್ಯ; ಸಂಪತ್ತಿನೊಂದಿಗೆ ಶಿವಜ್ಞಾನವು ಮುಖ್ಯ