ಗಜೇಂದ್ರಗಡದಲ್ಲಿ ಎಳ್ಳ ಅಮಾವಾಸ್ಯೆ ಸಂಭ್ರಮ


Team Udayavani, Dec 28, 2019, 12:51 PM IST

gadaga-tdy-2

ಗಜೇಂದ್ರಗಡ: ಅನ್ನದಾತರ ಅಚ್ಚುಮೆಚ್ಚಿನ ಹಬ್ಬವಾದ ಎಳ್ಳು ಅಮಾವಾಸ್ಯೆ ಚರಗ ಪ್ರಯುಕ್ತ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತ ಸಮೂಹ ಹೊಲದಲ್ಲಿ ಬೆಳೆದ ಬೆಳೆಗಳ ಮಧ್ಯೆ ಬನ್ನಿ ವೃಕ್ಷಕ್ಕೆ ಮತ್ತು ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಶುಕ್ರವಾರ ಸಂಭ್ರಮದಿಂದ ಚರಗದ ಹಬ್ಬ ಆಚರಿಸಲಾಯಿತು.

ಈ ಬಾರಿ ಎಳ್ಳ ಅಮಾವಾಸ್ಯೆ ದಿನವೇ ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಕೆಲ ರೈತರು ಅಮಾವಾಸ್ಯೆ ಮುನ್ನಾ ದಿನವೇ ಹಬ್ಬ ಆಚರಿಸಿದರೆ ಇನ್ನು ಕೆಲ ರೈತರು ಗ್ರಹಣ ಕಳೆದ ಮರುದಿನ ಶುಕ್ರವಾರ ಸಂಪ್ರದಾಯ ಬದ್ಧವಾಗಿ ಒಕ್ಕಲುತನದ ಹಬ್ಬ ಆಚರಿಸಿದರು. ಬೆಳಗ್ಗೆ ರೈತರು ನಿತ್ಯದ ಒಡನಾಡಿ ಎತ್ತುಗಳನ್ನು ಮೈ ತೊಳೆದು ಸಿಂಗರಿಸಿ ಹೂಡಿದ ಬಂಡಿ, ಟ್ರಾಕ್ಟರ್‌, ಟಂಟಂ ವಾಹನಗಳಲ್ಲಿ ಕುಟುಂಬ ಮಹಿಳೆಯರು, ಮಕ್ಕಳು, ಗೆಳೆಯರು ಹಾಗೂ ವಿಶೇಷ ಆಮಂತ್ರಿತರ ಜೊತೆಗೂಡಿ ಬುತ್ತಿ ಸಮೇತ ಹೊಲಗಳಿಗೆ ತೆರಳಿ ಹರ್ಷದಿಂದ ಬನ್ನಿಗಿಡಕ್ಕೆ ಸಾಮೂಹಿಕ ಪೂಜೆ ಸಲ್ಲಿಸಿದರು.

ಹಿಂಗಾರಿ ಹಂಗಾಮಿನಲ್ಲಿ ಹುಲುಸಾಗಿ ಮೈ ಕೊಡವಿ ನಿಂತಿರುವ ಜೋಳ, ಕಡಲೆ, ಗೋಧಿಯ ಬೆಳೆಯಲ್ಲಿ ಹುಲಿಗ್ಯೋಸುರಂಬಳಗ್ಯೊ ಎನ್ನುವ ಉದ್ಘೋಷ ಹಾಕುತ್ತಾ, ಗಂಗಾ ಸ್ವರೂಪ ನೀರಿನ ಜೊತೆ ಸಿದ್ಧಪಡಿಸಿದ ಯಳ್ಳು ಹೊಳಿಗೆ ಭೂತಾಯಿ ಮಡಲಿಗೆ ಸಮರ್ಪಿಸಿ ನಮಿಸಿದರು.

ಮಹಿಳೆಯರು ಕಳೆದ ಮೂರ್‍ನಾಲ್ಕು ದಿನಗಳಿಂದ ಶ್ರಮಪಟ್ಟು ಸಿದ್ಧಪಡಿಸಿದ ವಿಶೇಷ ಖಾದ್ಯಗಳಾದ ಕಡಬು, ಎಳ್ಳು ಹೋಳಿಗೆ, ಜೋಳದ ರೊಟ್ಟಿ, ಸಜ್ಜಿರೊಟ್ಟಿ, ಚಪಾತಿ, ಯಣ್ಣಿಗಾಯಿ, ಹೆಸರು ಕಾಳು ಪಲ್ಲೆ, ಶೇಂಗಾ, ಗುರೆಳ್ಳು, ಚಟ್ನಿ, ಕೆನಿ ಮೊಸರಿನ ಊಟವನ್ನು ಕುಟುಂಬ ಹಿತೈಸಿಗಳ ಜತೆ ಸವಿದರು. ವರ್ಷಪೂರ್ತಿ ಹೊಲದ ಮುಖ ನೋಡದ ಸರಕಾರಿ ನೌಕರರು, ಬ್ಯಾಂಕ್‌ ಅಧಿಕಾರಿಗಳು, ವರ್ತಕರು, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮಾಡುವ ಜನರು ಹೊಲದ ಊಟದಲ್ಲಿ ಪಾಲ್ಗೊಂಡು ಒತ್ತಡದ ಬದುಕಿಗೆ ಕೆಲ ಸಮಯ ವಿದಾಯ ಹೇಳಿದರು.

ಊಟ ಮಾಡಿದ ಬಳಿಕ ಮಹಿಳೆಯರು ಮಕ್ಕಳು ಹೊಲದ ತುಂಬೆಲ್ಲ ಸುತ್ತಾಡಿ ಕಡಲೆ, ಬದುವಿನಲ್ಲಿ ಬೆಳೆದಿರುವ ತರಕಾರಿ ಪಡೆದರು. ವಿಶ್ರಾಂತಿ ನಂತರ ಗೋಧೂಳಿಯ ಸಮಯದಲ್ಲಿ ಬರಿದಾದ ಬುತ್ತಿ ಗಂಟಿನ ಸಾಮಾನುಗಳ ಸಮೇತ ಒಲ್ಲದ ಮನಸ್ಸಿನಿಂದ ಬಂಡಿ ಹತ್ತಿ ಮನೆಗಳಿಗೆ ತೆರಳಿದರು.

Ad

ಟಾಪ್ ನ್ಯೂಸ್

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ

Rahul-CM-DCM

ನಾಳೆ ರಾಹುಲ್‌ ಜತೆ ಸಿಎಂ, ಡಿಸಿಎಂ ಸಭೆ: ಮೇಲ್ಮನೆ ಆಯ್ಕೆಗೆ ಒಪ್ಪಿಗೆ ಪಡೆವ ಸಾಧ್ಯತೆ

Trump-Musk

ಅಧ್ಯಕ್ಷ ಟ್ರಂಪ್‌ vs ಉದ್ಯಮಿ ಎಲಾನ್‌ ಮಸ್ಕ್: ಅಮೆರಿಕದಲ್ಲಿ ಸ್ನೇಹಿತರ ಸವಾಲ್‌!

Roman Starovoit: ಕಾರಿನಲ್ಲೇ ಗುಂಡಿಕ್ಕಿ ಆತ್ಮಹ*ತ್ಯೆಗೆ ಶರಣಾದ ರಷ್ಯಾದ ಮಾಜಿ ಸಚಿವ…

Roman Starovoit: ಕಾರಿನಲ್ಲೇ ಗುಂಡಿಕ್ಕಿ ಆತ್ಮಹ*ತ್ಯೆಗೆ ಶರಣಾದ ರಷ್ಯಾದ ಮಾಜಿ ಸಚಿವ…

ಬ್ರಿಕ್ಸ್‌ ರಾಷ್ಟ್ರಗಳಿಗೆ 10% ಹೆಚ್ಚುವರಿ ಸುಂಕ: ಅಮೆರಿಕ ಅಧ್ಯಕ್ಷ ಬೆದರಿಕೆ

ಬ್ರಿಕ್ಸ್‌ ರಾಷ್ಟ್ರಗಳಿಗೆ 10% ಹೆಚ್ಚುವರಿ ಸುಂಕ: ಅಮೆರಿಕ ಅಧ್ಯಕ್ಷ ಬೆದರಿಕೆ

UPSC

UPSC Exam: ನಾಗರಿಕ ಸೇವಾ ಪರೀಕ್ಷೆ : ಸತತ ಪರಿಶ್ರಮ, ಅಧ್ಯಯನದಿಂದ ಯಶಸ್ಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madhu-Bangarappa

ಆರ್‌ಎಸ್‌ಎಸ್‌ ಬ್ಯಾನ್‌ ಮಾಡುವುದು ಒಳ್ಳೆಯದು: ಸಚಿವ ಮಧು ಬಂಗಾರಪ್ಪ

16

Naregal: ವರುಣನಿಗಾಗಿ ಮಹಿಳೆಯರಿಂದ ಮೌನಾಚರಣೆ

Gadag: NREGA outsourced staff starts non-cooperation movement in front of the Taluk Panchayath

Gadag: ತಾ.ಪಂ ಎದುರು ನರೇಗಾ ಹೊರಗುತ್ತಿಗೆ ಸಿಬ್ಬಂದಿಯಿಂದ ಅಸಹಕಾರ ಚಳುವಳಿ ಆರಂಭ

Muharram: ಸಡಗರದ ಮೊಹರಂ; ಬೆಂಕಿಯ ಕುಂಡದಲ್ಲಿ ಕಂಬಳಿ ಹಾಸಿ ನಮಾಜ್ ಮಾಡಿದ ಮೌಲ್ವಿ

Muharram: ಸಡಗರದ ಮೊಹರಂ; ಬೆಂಕಿಯ ಕುಂಡದಲ್ಲಿ ಕಂಬಳಿ ಹಾಸಿ ನಮಾಜ್ ಮಾಡಿದ ಮೌಲ್ವಿ

1-dess

Gadag: ವರುಣನ ಕೃಪೆಗಾಗಿ ಮಹಿಳೆಯರ ಮೌನ ಪೂಜೆ!

MUST WATCH

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

udayavani youtube

ಸಾವಯವ ಅಕ್ಕಿ ಹಾಗೂ ಸಾವಯವ ಧಾನ್ಯಗಳ ಬಗ್ಗೆ ಮಾಹಿತಿ

ಹೊಸ ಸೇರ್ಪಡೆ

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ

Parameshawar

ಅಕ್ರಮ ಬಾಂಗ್ಲಾ ವಲಸಿಗರ ಗಡೀಪಾರು ಪ್ರಕ್ರಿಯೆ ನಿರಂತರ: ಡಾ.ಪರಮೇಶ್ವರ್‌

Rahul-CM-DCM

ನಾಳೆ ರಾಹುಲ್‌ ಜತೆ ಸಿಎಂ, ಡಿಸಿಎಂ ಸಭೆ: ಮೇಲ್ಮನೆ ಆಯ್ಕೆಗೆ ಒಪ್ಪಿಗೆ ಪಡೆವ ಸಾಧ್ಯತೆ

Trump-Musk

ಅಧ್ಯಕ್ಷ ಟ್ರಂಪ್‌ vs ಉದ್ಯಮಿ ಎಲಾನ್‌ ಮಸ್ಕ್: ಅಮೆರಿಕದಲ್ಲಿ ಸ್ನೇಹಿತರ ಸವಾಲ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.