ಉದ್ಯಮಕ್ಕೆ 300 ಎಕರೆ ಭೂಮಿ ಮೀಸಲು


Team Udayavani, Feb 4, 2023, 4:36 PM IST

TDY-19

ಹೊಳೆನರಸೀಪುರ: ತಾಲೂಕಿನ ಗಡಿಭಾಗ ಮತ್ತು ಅರಕಲಗೂಡು ಗಡಿ ಭಾಗದಲ್ಲಿ ಉದ್ಯಮವೊಂದನ್ನು ಆರಂಭಿಸುವ ಸಲುವಾಗಿ 300 ಎಕರೆ ಭೂಮಿಯನ್ನುಮೀಸಲಾಗಿಡಲಾಗಿದ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್‌.ಡಿ.ರೇವಣ್ಣ ನುಡಿದರು.

ತಾಲೂಕಿನ ಗಂಗೂ ರು ಗ್ರಾಮದಲ್ಲಿ ನೂತನವಾಗಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ 66/11 ಕೆವಿ ವಿದ್ಯುತ್‌ ಉಪ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಹುದಿನಗಳಿಂದ ಈ ಭಾಗದಲ್ಲಿ ಉದ್ಯಮವೊಂದನ್ನು ಸ್ಥಾಪಿಸಬೇಕೆಂಬ ತಮ್ಮ ಹಂಬಲಕ್ಕೆ ಇದೀಗ ಕಾಲಕೂಡಿ ಬಂದಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಲಭಿಸಲಿದೆ ಎಂದರು.

2007ರ ಕಾಮಗಾರಿ: ಪ್ರಸ್ತುತ ಈ ವಿದ್ಯುತ್‌ ಪ್ರಸರಣ ಕಾಮಗಾರಿಗೆ ಕಳೆದ 2007ರಲ್ಲಿ ಅಂದು ತಾವು ಸಚಿವರಾಗಿದ್ದ ಅವಧಿಯಲ್ಲಿ ಕ್ರಿಯಾಯೋಜನೆತಯಾರಿಸಿ ಸುಮಾರು 3.86 ಕೋಟಿಯಲ್ಲಿ ಯೋಜನೆ ತಯಾರಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.ಕಾರಣಾಂತರಗಳಿಂದ ಕಾಮ ಗಾರಿ ನಿಧಾನಗತಿಯಲ್ಲಿ ಸಾಗಿ ಇದೀಗ ಪೂರ್ಣಗೊಂಡಿದ್ದು ಶುಕ್ರವಾರ ಚಾಲನೆ ನೀಡಲಾಗುತ್ತಿದೆ ಎಂದರು.

ಉತ್ತಮ ಗುಣಮಟ್ಟದ ವಿದ್ಯುತ್‌ ಪ್ರಸರಣ: ಈ ವಿದ್ಯುತ್‌ ಕೇಂದ್ರ ಆರಂಭದಿಂದ ಗಂಗೂರುಸುತ್ತಮುತ್ತಲ ಗ್ರಾಮಗಳಾದ ಕಳ್ಳಿಕೊಪ್ಪಲು, ದೊಡ್ಡಬ್ಯಾಗತವಳ್ಳಿ ಗಳಿಗೆ ಗುಣಮಟ್ಟದ ವಿದ್ಯುತ್‌ ಸರಬರಾಜು ಮಾಡಲು ಸಹಕಾರಿ ಆಗಲಿದೆ. ಭವಿಷ್ಯದ ಹೊರೆಯನ್ನು ನಿಭಾಯಿಸಲು ಸಹಕಾರಿ ಆಗಲಿದೆ. ವೋಲ್ಟೇಜ್‌ನಲ್ಲಿ ಆಗುವ ಏರುಪೇರನ್ನು ಸರಿಪಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.

ನಾಲ್ಕು ಉಪಕೇಂದ್ರಗಳು ಪ್ರಗತಿಯಲ್ಲಿ: ಇದೇ ರೀತಿ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಇನ್ನೂ ನಾಲ್ಕು ಕಡೆ ಹೆರಗು 9.75 ಕೋಟಿ, ಸೋಮನಹಳ್ಳಿ 6.06 ಕೋಟಿರೂ.ವೆಚ್ಚದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದೆ. ಉಳಿದಂತೆ ತಾಲೂಕಿನ ತಟ್ಟೇಕೆರೆ 7.06 ಕೋಟಿವೆಚ್ಚದಲ್ಲಿ ವಿದ್ಯುತ್‌ ಮಾರ್ಗದ ಕಾಮಗಾರಿಗೆ ಟೆಂಡರ್‌ಕರೆಯಲಾಗುತ್ತಿದೆ. ಹಾಗೂ ಪಡುವಲಹಿಪ್ಪೆ ವಿದ್ಯುತ್‌ ಉಪಕೇಂದ್ರ ನಿರ್ಮಿ ಸಲು ಸರ್ಕಾರಿ ಜಾಗ ಗುರುತಿಸುವ ಕೆಲಸ ನಡೆಯುತ್ತಿದೆ ಎಂದರು.

ನಷ್ಟದ ಹಂಚಿನಲ್ಲಿ ವಿದ್ಯುತ್‌ ಇಲಾಖೆ: ತಾವು ಸಚಿವ ಪದವಿಯಿಂದ ಹೊರ ಬಂದ ವೇಳೆ ಬೆಂಗಳೂರು ಬೆಸ್ಕಂನಲ್ಲಿ ಐದು ನೂರು ಕೋಟಿ ರೂ. ಹಣವನ್ನುಠೇವಣಿ ಇರಿಸಿ ಹೊರಬಂದೆ, ಆದರೆ ಅದರ ನಂತರಬಂದ ಸರ್ಕಾರದ ಸಚಿವರುಗಳ ಕಾರ್ಯವೈಖರಿಯಿಂದ ಇಂದು ರಾಜ್ಯದ ವಿದ್ಯುತ್‌ ಪ್ರಸರಣ ನಿಗಮ48 ಸಾವಿರ ಕೋಟಿ ರೂ.ನಷ್ಟದಲ್ಲಿದೆ ಎಂಬ ಮಾಹಿತಿ ಸರ್ಕಾರವೇ ನೀಡಿದೆ. ತಾವು ಸಚಿವರಾಗಿದ್ದ ಅವಧಿಯಲ್ಲಿದ್ದ ಅಧಿಕಾರಿಗಳೇ ಇಂದು ಕರ್ತವ್ಯನಿರ್ವಹಿಸುತ್ತಿದ್ದಾರೆ. ಆದರೆ, ನಷ್ಟ ಮಾತ್ರ ತಗ್ಗಿಸಲು ಆಗಿಲ್ಲ ಎಂದು ರಾಜ್ಯ ಸರ್ಕಾರದ ಸಚಿವರ ಕಾರ್ಯವೈಖರಿಯನ್ನು ಟೀಕಿಸಿದರು.

ನಷ್ಟ ಎಲ್ಲಿಂದ ಭರಿಸುತ್ತೆ ?: ಪ್ರಸ್ತುತ ಬರಲಿರುವ ಚುನಾವಣೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯೂನಿಟ್‌ ವಿದ್ಯುತ್‌ ಅನ್ನು ಉಚಿತ ವಾಗಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ. ಇದರಿಂದ ವರ್ಷಕ್ಕೆ 9 ಸಾವಿರ ಕೋಟಿ ಹೊರೆ ಬೀಳಲಿದೆ. ಈಗಾಗಲೇ 48 ಸಾವಿರಕೋಟಿ ನಷ್ಟದಲ್ಲಿರುವ ನಿಗಮ ಈ 9 ಸಾವಿರ ಕೋಟಿ ಸೇರಿದರೆ ಒಟ್ಟು 57 ಸಾವಿರ ಕೋಟಿ ಅಂದಾಜು ನಷ್ಟ ವಾಗುತ್ತದೆ. ಈ ನಷ್ಟ ಭರಿಸಲು ಇರುವ ಆದಾಯದ ಮೂಲಗಳನ್ನು ಆ ಪಕ್ಷ ಬಹಿರಂಗಪಡಿಸದೇ ಬರೀ ಹುಸಿ ಭರವಸೆ ನೀಡಿದೆಎಂದು ಪರೋಕ್ಷವಾಗಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದರು.

ಕಾರ್ಯಕ್ರಮದಲ್ಲಿ ಅಕ್ಷಕ ಅಭಿಯಂತರ ಮಹೇಶ್‌, ಕೆ.ಗೋಕುಲ್‌, ಸಿದ್ದೇಶ್‌, ಸವಿತಾ, ಅನಿತಾ, ದೊಡ್ಡಬ್ಯಾಗತವಳ್ಳಿ ಗ್ರಾಪಂ ಅಧ್ಯಕ್ಷ ಕಿರಣ್‌ಕುಮಾರ್‌ , ಪಡುವಲಹಿಪ್ಪೆ ಗ್ರಾಪಂ ಅಧ್ಯಕ್ಷ ರಾಧ ಸಂಕನಹಳ್ಳಿ ಅಧ್ಯಕ್ಷೆ ಮಣಿ, ಲೋಕೊಪಯೋಗಿ ಇಲಾಖೆಯ ಹೇಮಂತ್‌,ಗುತ್ತಿಗೆದಾರ ಹರೀಶ್‌ ಇದ್ದರು. ಇದೇ ವೇಳೆಕೆಪಿಟಿಸಿಎಲ್‌ ಅಧಿಕಾರಿಗಳನ್ನು ಮಾಜಿ ಸಚಿವ ರೇವಣ್ಣ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಟಾಪ್ ನ್ಯೂಸ್

ಕೊನೆ ಉಸಿರಿರುವವರೆಗೂ ಬಿಜೆಪಿ ಬಿಡಲ್ಲ: ಮಾಲೀಕಯ್ಯ ಗುತ್ತೇದಾರ

ಕೊನೆಯ ಉಸಿರಿರುವರೆಗೂ ಬಿಜೆಪಿ ಬಿಡಲ್ಲ: ಮಾಲೀಕಯ್ಯ ಗುತ್ತೇದಾರ

ʼಕಾಂತಾರ-2ʼ ಬಗ್ಗೆ ಬಿಗ್ ಅಪ್ಡೇಟ್‌ ಕೊಟ್ಟು ʼಬೇವು ಬೆಲ್ಲʼದ ರುಚಿಯನ್ನು ಹೆಚ್ಚಿಸಿದ ಹೊಂಬಾಳೆ

ʼಕಾಂತಾರ-2ʼ ಬಗ್ಗೆ ಬಿಗ್ ಅಪ್ಡೇಟ್‌ ಕೊಟ್ಟು ʼಬೇವು ಬೆಲ್ಲʼದ ರುಚಿಯನ್ನು ಹೆಚ್ಚಿಸಿದ ಹೊಂಬಾಳೆ

ಸೋನು ನಿಗಮ್‌ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR

ಸೋನು ನಿಗಮ್‌ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR

Vachanananda Swamiji spoke about getting reservation to Panchmasali community

ನಾಳೆ ರಾಜ್ಯ ಸರಕಾರದಿಂದ ಪಂಚಮಸಾಲಿ ಸಮುದಾಯಕ್ಕೆ ಕೊಡುಗೆ: ವಚನಾನಂದ ಸ್ವಾಮೀಜಿ ವಿಶ್ವಾಸ

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

1-manipal-station

ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಆರೋಪ; ಐವರು ವಿದ್ಯಾರ್ಥಿಗಳು ವಶಕ್ಕೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-cc

ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

tdy-15

ಪ್ರತಿ ಮನೆಗೆ ಪ್ರಧಾನಿ ಮೋದಿ ಅಭಿವೃದ್ದಿ ಕಾರ್ಯ ತಿಳಿಸುತ್ತೇವೆ  

ಸಂಭಾಷಣೆ ಯಾವುದೇ ರೀತಿಯಲ್ಲಿ ಎಡಿಟ್‌ ಮಾಡಿಲ್ಲ: ರೇವಣ್ಣ

ಸಂಭಾಷಣೆ ಯಾವುದೇ ರೀತಿಯಲ್ಲಿ ಎಡಿಟ್‌ ಮಾಡಿಲ್ಲ: ರೇವಣ್ಣ

ಎಲ್ಲರಿಂದಲೂ ಸಮ್ಮತಿ ಸಿಕ್ಕಿದರೆ ಮಾತ್ರ ಸ್ಪರ್ಧೆ: ರಾಜೇಗೌಡ

ಎಲ್ಲರಿಂದಲೂ ಸಮ್ಮತಿ ಸಿಕ್ಕಿದರೆ ಮಾತ್ರ ಹಾಸನ ಕ್ಷೇತ್ರದಲ್ಲಿ ಸ್ಪರ್ಧೆ: ರಾಜೇಗೌಡ

ದೇವೇಗೌಡರು ನನ್ನ ರಾಜಕೀಯ ಗುರು: ಎ.ಮಂಜು

ದೇವೇಗೌಡರು ನನ್ನ ರಾಜಕೀಯ ಗುರು: ಎ.ಮಂಜು

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

1-adsadsad

ಬನವಾಸಿ ನೂತನ ಮಹಾಸ್ಯಂದನ ರಥೋತ್ಸವ ಮುಂದಕ್ಕೆ; ಕಾರಣವೇನು?

1-a-wewq3

ಚಿಕ್ಕಮಗಳೂರು: ಸರಕಾರಿ ಬಸ್ ಢಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರ ಮೃತ್ಯು

ಕೊನೆ ಉಸಿರಿರುವವರೆಗೂ ಬಿಜೆಪಿ ಬಿಡಲ್ಲ: ಮಾಲೀಕಯ್ಯ ಗುತ್ತೇದಾರ

ಕೊನೆಯ ಉಸಿರಿರುವರೆಗೂ ಬಿಜೆಪಿ ಬಿಡಲ್ಲ: ಮಾಲೀಕಯ್ಯ ಗುತ್ತೇದಾರ

ʼಕಾಂತಾರ-2ʼ ಬಗ್ಗೆ ಬಿಗ್ ಅಪ್ಡೇಟ್‌ ಕೊಟ್ಟು ʼಬೇವು ಬೆಲ್ಲʼದ ರುಚಿಯನ್ನು ಹೆಚ್ಚಿಸಿದ ಹೊಂಬಾಳೆ

ʼಕಾಂತಾರ-2ʼ ಬಗ್ಗೆ ಬಿಗ್ ಅಪ್ಡೇಟ್‌ ಕೊಟ್ಟು ʼಬೇವು ಬೆಲ್ಲʼದ ರುಚಿಯನ್ನು ಹೆಚ್ಚಿಸಿದ ಹೊಂಬಾಳೆ

ಸೋನು ನಿಗಮ್‌ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR

ಸೋನು ನಿಗಮ್‌ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.