Alur: ಕೆರೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ದಲಿತರಿಗೆ ಸವರ್ಣೀಯರಿಂದ ತಡೆ
Team Udayavani, Feb 28, 2024, 11:17 PM IST
ಆಲೂರು: ಕೆರೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ದಲಿತ ಮಹಿಳೆಯರನ್ನು ತಡೆದ ಸವರ್ಣೀಯ ಮಹಿಳೆಯರ ತಂಡ, ಜಾತಿನಿಂದಿಸಿ ಹಲ್ಲೆ ನಡೆಸಲು ಮುಂದಾದ ಅಮಾನವೀಯ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಂತನಮನೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಫೆ.27ರಂದು ದಲಿತ ಮಹಿಳೆಯರು ಎಂದಿನಂತೆ ಕೆರೆಯಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಸವರ್ಣೀಯ ಮಹಿಳೆಯರಾದ ಗ್ರಾಮದ ಮಣಿಯಮ್ಮ, ಹೊನ್ನಮ್ಮ, ರಾಧಮ್ಮ, ಗೌರಮ್ಮ, ಸುನಂದ, ಕಮಲಮ್ಮ ಮತ್ತಿತರರು ಆಕ್ಷೇಪಿಸಿದ್ದಾರೆ. “ಕೆರೆಯಲ್ಲಿ ದಲಿತರು ಬಟ್ಟೆ ತೊಳೆಯುವಂತಿಲ್ಲ. ಈ ಕರೆ ನಮಗೆ ಮೀಸಲಾಗಿದೆ’ ಎಂದು ಸೋಪಾನ ಕಟ್ಟೆಯ ಮೇಲಿದ್ದ ಬಟ್ಟೆಗಳನ್ನು ಎಸೆದಿದ್ದಾರೆ. ಪ್ರಶ್ನಿಸಿದ ದಲಿತ ಮಹಿಳೆಯರನ್ನು ಜಾತಿನಿಂದಿಸಿ, ಹಲ್ಲೆ ನಡೆಸಲು ಮುಂದಾಗಿದ್ದಾರೆ. ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ. ಬಳಿಕ ದಲಿತ ಮಹಿಳೆಯರು ತಮ್ಮ ಮುಖಂಡರ ಸಹಾಯದಿಂದ ಆಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ