ಪ್ರೀತಂಗೌಡ ಕಮೀಷನ್ ಗಿರಾಕಿ: ಆರೋಪ
Team Udayavani, Apr 17, 2023, 3:36 PM IST
ಹಾಸನ: ಶಾಸಕ ಪ್ರೀತಂಗೌಡ ಒಬ್ಬ ಪೇಮೆಂಟ್ ಗಿರಾಕಿ. ಅಭಿವೃದ್ಧಿ ಯೋಜನೆಗಳಲ್ಲಿ ಕಮೀಷನ್ ಪೇಮೆಂಟ್, ಜನರನ್ನು ರ್ಯಾಲಿಗೆ ಕರೆ ತರಲೂ ಪೆಮೇಂಟ್ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಪ್ರೀತಂಗೌಡ ಗಿಮಿಕ್ ಮಾಡುತ್ತಿದ್ದಾರೆ. ಬಿಜೆಪಿ ರ್ಯಾಲಿಗೆ ಸೇರಿದವರು ಬಂದ ಜನ ಅಲ್ಲ ತಂದ ಜನ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಕ್ಷೇತ್ರದ ಹೊರಗಿನಿಂದ ಕರೆತಂದ ಜನರನ್ನು ಸೇರಿಸಿ ನಗೆಪಾಟಲಿಗೆ ಗುರಿಯಾಗಿದ್ದಾರೆ ಎಂದು ದೂರಿದರು.
2018ರ ಗೆಲುವು ಆಕಸ್ಮಿಕ: ಒಂದು ಲಕ್ಷ ಮತ ಗಳಿಸುವುದು ಅಷ್ಟು ಸುಲಭವಲ್ಲ. ಒಂದು ಲಕ್ಷಕ್ಕೆ ಎಷ್ಟು ಸೊನ್ನೆಗಳು ಬರುತ್ತವೆ ಎಂಬುದನ್ನು ಪ್ರೀತಂಗೌಡ ಮೊದಲು ತಿಳಿದುಕೊಳ್ಳಲಿ. ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಎಚ್.ಸಿ.ಶ್ರೀಕಂಠಯ್ಯ ಸೇರಿದಂತೆ ಘಟಾನುಘಟಿ ನಾಯಕರೇ ಸೋತಿದ್ದಾರೆ. ಹಾಗಾಗಿ ಪ್ರೀತಂಗೌಡ ಯಾವ ಲೈಕ್ಕ. ಅವರಿಗೆ 2018 ರ ಚುನಾಣೆಯಲ್ಲಿ ಆಕಸ್ಮಿಕ ಗೆಲುವು ಸಿಕ್ಕಿದೆ ಎಂಬುದನ್ನು ತಿಳಿದುಕೊಂಡು ದುರಹಂಕಾರದ ಮಾತುಗಳನ್ನಾಡು ವುದನ್ನು ಬಿಡಲಿ. ಇಲ್ಲದಿದ್ದರೆ ಮತದಾರರೇ ಬುದ್ಧಿ ಕಲಿಸುವ ಸಂದರ್ಭ ಬಂದಿದೆ ಎಂದರು.
ಸ್ವರೂಪ್ ನನ್ನ ಮಿತ್ರ: ಕಣದಲ್ಲಿ ಶತ್ರು: ಎಚ್.ಪಿ.ಸ್ವರೂಪ್ ವೈಯಕ್ತಿಕವಾಗಿ ಉತ್ತಮ ಸ್ನೇಹಿತ, ಆದರೆ ರಾಜಕೀಯ ವಾಗಿ ಎದುರಾಳಿ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಟಿಕೆಟ್ ಘೋಷಿ ಸಿದ ಮೇಲೆ ಜಾಗೃತರಾಗಿದ್ದಾರೆ. ಕೊರೊನಾ ಸಂಕಷ್ಟಕ್ಕೆ ಸ್ವರೂಪ್ ಸ್ಪಂದಿಸಿರಲಿಲ್ಲ ಎಂದು ಟೀಕಿಸಿದರು.
ಟಿಕೆಟ್ ನೀಡಿದ ವರಿಷ್ಠರಿಗೆ ಋಣಿ: ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದವರನ್ನು ವಿಶ್ವಾಸ ದಿಂದ ತೆಗೆದುಕೊಂಡು ಪಕ್ಷದ ಮುಖಂಡರಲ್ಲಿರುವ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತೇನೆ. ನನ್ನನ್ನು ನಂಬಿ ಟಿಕೆಟ್ ಕೊಟ್ಟಿರುವ ಪಕ್ಷದ ಮುಖಂಡರಿಗೆ ಋಣಿಯಾಗಿರುತ್ತೇನೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ದಂಡೇ ಇದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುತ್ತೇನೆ ಎಂದು ಹೇಳಿದರು. ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸುತ್ತೇನೆ. ಬುಧವಾರ ಅಥವಾ ಗುರುವಾರ ಕನಿಷ್ಠ 20 ಸಾವಿರ ಕಾರ್ಯಕರ್ತರ ಜತೆ ಉಮೆದುವಾರಿಕೆ ಸಲ್ಲಿಸುತ್ತೇನೆ.
ಅಭಿವೃದ್ಧಿಗೆ ಶ್ರಮಿಸುವೆ: ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ತನ್ನದೆ ಕೆಲಸ ಮಾಡಿದೆ. ಒಬ್ಬ ಯುವಕನ ಕೈಹಿಡಿಯಬೇಕು ಎನ್ನುವ ಕಾರಣಕ್ಕೆ ಜನತೆ ಆಶೀರ್ವದಿಸುವರು ಎಂಬ ವಿಶ್ವಾಸವಿದೆ ಎಂದರು. ಹಾಸನ ನಗರದ ಹಸಿರೀಕರಣ, ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸುವುದು, ಮೂಲ ಸೌಕರ್ಯ, ನಿರುದ್ಯೋಗಿಗಳಿಗೆ ಉದ್ಯೋಗ ಹಾಗೂ ಐಟಿಬಿಟಿ ಕಂಪನಿಗಳನ್ನು ತರಲು ಪ್ರಯತ್ನಿಸುತ್ತೇನೆ ಎಂದು ಬನವಾಸೆ ರಂಗಸ್ವಾಮಿ ಆವರು ಹೇಳಿದರು.
ಜನತೆಯ ಆಶೀರ್ವಾದ ಹಾಗೂ ಕಾರ್ಯಕರ್ತರ ಸಹಕಾರದಿಂದ ಕಾಂಗ್ರೆಸ್ ಗುರುತಿಸಿ ಟಿಕೆಟ್ ಘೋಷಿಸಿದೆ. ಇದಕ್ಕೆ ಕಾರಣರಾದ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಹಾಸನ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಕಯ್ಯೂಂ, ಜಿಲ್ಲಾ ಕಾಂಗ್ರೆಸ್ ಎಸ್ಸಿ, ಎಸ್ಟಿ ವಿಭಾಗದ ಅಧ್ಯಕ್ಷ ಮಲ್ಲಿಗೆವಾಳು ದೇವಪ್ಪ, ಹಾಸನ ನಗರಸಭೆ ಮಾಜಿ ಸದಸ್ಯ ಹೊಸಕೊಪ್ಪಲು ರವಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
400 ಕೋಟಿ ಲೂಟಿ: ಗಂಭೀರ ಆರೋಪ : ಹಾಸನ ನಗರದಲ್ಲಿ ಕೇವಲ ಬಾರ್ಗಳನ್ನು ತೆರೆದಿದ್ದೇ ಶಾಸಕರ ಸಾಧನೆಯಾಗಿದೆ. ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಹೊಸ ಬಡಾವಣೆ ನಿರ್ಮಾಣದಲ್ಲಿ 400 ಕೋಟಿ ಲೂಟಿ ಆಗಿದೆ. ಸಿಎ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿ ದಂಧೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆಯದ ಭ್ರಷ್ಟಾಚಾರ ಹಾಸನದಲ್ಲಿ ನಡೆದಿವೆ. ಧರ್ಮ, ಧರ್ಮ ಜಾತಿಗಳ ನಡುವೆ ವೈಷಮ್ಯವನ್ನು ಪ್ರೀತಂಗೌಡ ಸೃಷ್ಟಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ