ಕೊರೊನಾ ಲೆಕ್ಕಿಸದೆ ಅಗತ್ಯ ವಸ್ತುಗಳ ಖರೀದಿ
ಆರ್ಥಿಕ ಸಂಕಷ್ಟದಲ್ಲೂ ವಸ್ತುಗಳ ಬೆಲೆ ಏರಿಕೆ ಪಟಾಕಿ ಖರೀದಿಗೆ ಸಾರ್ವಜನಿಕರು ನಿರಾಸಕ್ತಿ
Team Udayavani, Nov 4, 2021, 2:39 PM IST
ಅರಸೀಕೆರೆ: ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕಿನಿಂದ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದರು. ಸಾಂಪ್ರದಾಯದಂತೆ ದೀಪಾವಳಿ ಹಬ್ಬವನ್ನು ಆಚರಿಸಲು ನಾಗರಿಕರು ನಗರದ ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳು. ಬಾಳೇಕಂದು, ಮಾವಿನಸೊಪ್ಪು, ತರಕಾರಿ ಇತ್ಯಾದಿ ಅಗತ್ಯ ವಸ್ತುಗಳನ್ನು ಖರೀದಿಸಿದರು.
ತಾಲೂಕಿನ ಜನತೆ ದೀಪಾವಳಿ ಹಬ್ಬದ ಬಲಿಪಾಡ್ಯಮಿ, ಲಕ್ಷ್ಮೀ ಪೂಜೆ ಹಾಗೂ ನರಕ ಚತುದರ್ಶಿ ಹಬ್ಬಗಳನ್ನು ಸಂಭ್ರಮದಲ್ಲಿ ಆಚರಿಸಲು ಅಗತ್ಯ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ಏರಿಕೆಯಾಗಿದ್ದರೂ, ಹಬ್ಬವನ್ನು ಶಾಸ್ತ್ರೋಕ್ತವಾಗಿ ಮಾಡಿ ಮುಗಿಸಬೇಕೆಂದು ನಗರದ ಪ್ರದೇಶದ ಹಾಗೂ ಗ್ರಾಮಾಂತರ ಪ್ರದೇಶದ ಜನರು ಮಾರುಕಟ್ಟೆಯಲ್ಲಿ ಗುಂಪು ಗುಂಪಾಗಿ ಸೇರಿದ್ದರು.ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಮಾಮೂಲಿಗಿಂತ ಮಾರುಕಟ್ಟೆಯಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದ್ದು, ನಗರದ ಸಾರ್ವಜನಿಕ ಗ್ರಂಥಾಲಯ ರಸ್ತೆಯಲ್ಲಿ ಜನರು ಕೊರೊನಾ ಸೋಂಕಿನ ಭೀತಿ ಲೆಕ್ಕಿಸದೆ ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿ ಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.
ಇದನ್ನೂ ಓದಿ:- ಬೆಲೆ ಏರಿಕೆ ನಡುವೆ ಬೆಳಕಿನ ಹಬ್ಬಆಚರಿಸಲು ಜನತೆ ಸಜ್ಜು
ಬೆಲೆ ಏರಿಕೆ ಹೆಚ್ಚಾಗಿಲ್ಲ: ದೀಪಾವಳಿ ಹಬ್ಬದ ಅಗತ್ಯ ವಸ್ತುಗಳಾದ ಸೇವಂತಿಗೆ ಹೂವು ಮಾರಿಗೆ 80ರಿಂದ 100 ರೂ, ಕನಕಾಂಬರ 100ರಿಂದ 120 ರೂ., ಕಾಕಡ 80ರಿಂದ 100 ರೂ., ಬಾಳೆಹಣ್ಣು 1ಕೆ.ಜಿಗೆ 80 ರೂ., ಸೇಬು ಕೆ.ಜಿಗೆ 100ರಿಂದ 120 ರೂ., ಕಿತ್ತಲೆ 60 ರೂ., ಮೊಸಂಬಿ 80 ರೂ., ದಾಳಿಂಬ್ರೆ 100ರಿಂದ 120 ರೂ.ಗಳಾಗಿದ್ದು, ಬಾಳೆಕಂದುಗಳು ಹಾಗೂ ಮಾವಿನಸೊಪ್ಪು ಇತ್ಯಾದಿಗಳ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದರೂ ಹಬ್ಬವನ್ನು ಸಂಭ್ರಮದಿಂದ ಮಾಡಬೇಕೆಂದಿರುವ ಜನರು ತಮ್ಮ ಬಳಿ ಇರುವಷ್ಟು ಹಣದಲ್ಲಿ ಚೌಕಾಸಿ ಮಾಡಿಕೊಂಡು ಅಗತ್ಯ ವಸ್ತುಗಳನ್ನು ಖರೀದಿಸ ತೊಡಗಿದ್ದಾರೆ. ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೇ ಮಾರುಕಟ್ಟೆಯಲ್ಲಿ ಅಷ್ಟು ಪ್ರಮಾಣದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಏರಿಕೆ ಆಗದಿರುವುದು ಜನ ಸಾಮಾನ್ಯರಿಗೆ ಪಾಲಿಗೆ ಒಂದು ರೀತಿಯಲ್ಲಿ ತೃಪ್ತಿ ತಂದಿದೆ.
ಪಟಾಕಿ ವ್ಯಾಪಾರ ಕುಂಠಿತ: ನಗರದ ಹಳೇಯ ಮಾಧ್ಯಮಿಕ ಶಾಲೆಯ ಅವರಣದಲ್ಲಿ ತಾಲೂಕು ಆಡಳಿತ ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಿಸಿರುವ ಕಾರಣ 7 ಅಂಗಡಿಗಳಲ್ಲಿ ಹಸಿರು ಪಟಾಕಿ ಮಾರಾಟ ನಡೆಯುತ್ತಿದ್ದರೂ, ನಾಗರಿಕರು ಕೊರೊನಾ ಹಿನ್ನಲೆಯಲ್ಲಿ ಪಟಾಕಿಗಳನ್ನು ಸಿಡಿಸದೆ ದೀಪಾವಳಿ ಹಬ್ಬ ಆಚರಿಸಲು ಹೆಚ್ಚಿನ ಆಸಕ್ತಿ ವಹಿಸುತ್ತಿರುವ ಕಾರಣ, ಕಳೆದ ವರ್ಷದಿಂದ ನಗರದಲ್ಲಿ ಪಟಾಕಿ ವ್ಯಾಪಾರಕ್ಕೆ ಗ್ರಹಣ ಹಿಡಿದಂತಾಗಿದೆ.
ಲಕ್ಷಾಂತರ ರೂ. ಬಂಡವಾಳ ಹಾಕಿಕೊಂಡಿದ್ದ ಪಟಾಕಿ ವ್ಯಾಪಾರಸ್ಥರಿಗೆ ಹಾಕಿರುವ ಬಂಡವಾಳ ಕೈ ಸೇರದ ಪರಿಸ್ಥಿತಿ ಉಂಟಾಗಿದೆ ಎಂದು ಪಟಾಕಿ ವ್ಯಾಪಾರಸ್ಥರಾದ ವೆಂಕಟೇಶ್ ಹಾಗೂ ದಿನೇಶ್ ಕಳವಳ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು