ರಾಷ್ಟ್ರೀಯ ರೈತ ದಿನಾಚರಣೆಗೆ ಅನ್ನದಾತರಿಗೇ ಆಹ್ವಾನವಿಲ್ಲ


Team Udayavani, Dec 24, 2020, 2:46 PM IST

ರಾಷ್ಟ್ರೀಯ ರೈತ ದಿನಾಚರಣೆಗೆ ಅನ್ನದಾತರಿಗೇ ಆಹ್ವಾನವಿಲ್ಲ

ಚನ್ನರಾಯಪಟ್ಟಣ: ಕೃಷಿ ಇಲಾಖೆ ರೈತರನ್ನುಕಡೆಗಣಿಸುತ್ತಿದ್ದು, ಅಧಿಕಾರಿಗಳ ಬೇಜವಾಬ್ದಾರಿ ಯಿಂದ ಬೆರಳೆಣಿಕೆಯಷ್ಟು ಮಂದಿ ಸೇರಿ ರೈತ ದಿನಾಚರಣೆ ಮಾಡುವಂತಾಗಿದೆ ಎಂದು ಸಂಘದ ಜಿಲ್ಲಾ ಸಂಚಾಲಕ ಡೊಡ್ಡೇರಿ ಶ್ರೀಕಂಠಕಳವಳ ವ್ಯಕ್ತ ಪಡಿಸಿದರು.

ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೃಷಿ ಇಲಾಖೆಯಿಂದ ನಡೆದರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿಮಾತನಾಡಿ, ಮಿನಿವಿಧಾನ ಸೌಧ ಮುಂದೆ ಇರುವ ಕೃಷಿ ಇಲಾಖೆ ಕಚೇರಿ ಬಳಿ ಕಾರ್ಯಕ್ರಮ ಮಾಡಿದ್ದರೆ ಸಾವಿರಾರು ರೈತರು ಪಾಲ್ಗೊಳ್ಳುತ್ತಿದ್ದರು. ಎಪಿಎಂಸಿಆವರಣದಲ್ಲಿ ಮಾಡಿದ್ದು ಸರಿಯಲ್ಲ ಎಂದರು.

ಸರಿಯಾಗಿ ಮಾಹಿತಿ ನೀಡಿಲ್ಲ: ರೈತ ದಿನಾಚರಣೆ ಮಾಡುವ ಮೊದಲು ತಾಲೂಕಿನ ರೈತ ಸಂಘಟನೆಗಳ ಸಭೆ ಮಾಡಬೇಕಿತ್ತು. ಸಂಘದ ಪದಾಧಿಕಾರಿಗಳು ರೈತರನ್ನು ಕರೆ ತರುತ್ತಿದ್ದೆವು. ಎತ್ತಿನ ಗಾಡಿ ಮೆರವಣಿಗೆಮೂಲಕ ಅದ್ಧೂರಿಯಾಗಿ ಕಾರ್ಯಕ್ರಮಮಾಡಬಹುದಿತ್ತು. ಅಧಿಕಾರಿಗಳು ಸರಿಯಾಗಿಮಾಹಿತಿ ನೀಡದ ಹಿನ್ನೆಲೆಯಲ್ಲಿ ರೈತರು ಆಗಮಿಸಿಲ್ಲ ಎಂದು ಆರೋಪಿಸಿದರು.

ವರ್ಷಕ್ಕೆ ಒಮ್ಮೆ ನಡೆಯುವ ರೈತ ದಿನಾಚರಣೆಯನ್ನೇ ಸರಿಯಾಗಿ ಮಾಡದಅಧಿಕಾರಿಗಳು, ಇನ್ನು ರೈತರಿಗೆ ಸರ್ಕಾರದ ಯೋಜನೆಯಾವ ರೀತಿ ತಲುಪಿಸುತ್ತಾರೆ ಎಂದು ಪ್ರಶ್ನಿಸಿದಅವರು, ಮುಂದಿನ ದಿನಗಳಲ್ಲಿ ಹೀಗೆ ಬೇಕಾಬಿಟ್ಟಿರೈತ ದಿನಾಚರಣೆ ಮಾಡಿದ್ರೆ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.

ಸಾಲ ಮನ್ನಾ ಬೇಡ: ಪ್ರಗತಿಪರ ರೈತ ತುಳಸಿರಾಜ್‌ ಮಾತನಾಡಿ, ರೈತರು ಸ್ವಾವಲಂಬನೆಯಿಂದ ಬದುಕು ಕಟ್ಟಿಕೊಳ್ಳಬೇಕು, ಸರ್ಕಾರದ ಸಾಲಮನ್ನಾ, ಸಹಾಯಧನ ನೀಡುವುದಷ್ಟೇ ಅಲ್ಲ, ಬೆಳೆದ ಬೆಳೆಗೆಮಾರುಕಟ್ಟೆ ಒದಗಿಸಬೇಕು, ಸರ್ಕಾರ ತಮ್ಮ ಮತಗಳಿಕೆಗಾಗಿ ಯೋಜನೆ ರೂಪಿಸುತ್ತದೆ ಹೊರತು, ಅನ್ನದಾತರಿಗಾಗಿ ಅಲ್ಲ ಎನ್ನುವುದು ಮನಗಂಡುಆಸಕ್ತಿಯಿಂದ ಕೃಷಿ ಮಾಡುವುದು ಒಳಿತು ಎಂದು ಸಲಹೆ ನೀಡಿದರು.

ಸರ್ಕಾರದಿಂದ ರೈತರ ಏಳಿಗೆ ಇಲ್ಲ: ಸಾವಯವ ಕೃಷಿಕ ಓಂಕಾರಮೂರ್ತಿ ಮಾತನಾಡಿ, ಸಮಗ್ರಕೃಷಿಗೆ ರೈತರುಮುಂದಾಗಬೇಕು, ಶ್ರಮ ಮತ್ತು ಶ್ರದ್ಧೆಯಿಂದ ಕೃಷಿ ಕಾರ್ಯಮಾಡಿದರೆ ಯಶಸ್ಸುಗಳಿಸುವುದರೊಂದಿಗೆ ಹಣ ಸಂಪಾದನೆ ಮಾಡಬಹುದಾಗಿದೆ. ಸರ್ಕಾರ ಹಾಗೂ ಸಂಘಗಳು ರೈತರ ಏಳಿಗೆ ಬಯಸುತ್ತಾರೆಹೊರತು, ಏಳಿಗೆಗೆ ಬೇಕಾದ ಸೌಲಭ್ಯ ನೀಡಲು ಮುಂದಾಗುವುದಿಲ್ಲ ಎಂದು ಹೇಳಿದರು.

ರೈತರ ಶೋಷಣೆ ಆಗುತ್ತಿದೆ: ರೈತರು ದೇಶೀಯ ರಾಸು ಸಾಕುವ ಮೂಲಕ ರಾಸುಗಳ ಮೂಲಕ ಕೃಷಿಮಾಡುವುದರಿಂದ ಶೂನ್ಯ ವೆಚ್ಚದಲ್ಲಿ ಕೃಷಿ ಮಾಡಬಹುದು, ಆಧುನಿಕ ಕೃಷಿ ಹೆಸರಿನಲ್ಲಿಯಂತ್ರಗಳ ಬಳಕೆ ಮಾಡುತ್ತಿದ್ದು, ಕೃಷಿಗೆ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. ಇನ್ನು ಹಾಲಿನ ವ್ಯಾಮೋಹಕ್ಕೆ ಬಲಿಯಾಗಿ ವಿದೇಶಿ ತಳಿ ರಾಸುಗಳನ್ನು ಸಾಕಿ,ಅವುಗಳ ಪೋಷಣೆಗೆ ನೀಡುವ ಸಮಯವನ್ನು ಕೃಷಿಗೆ ನೀಡುತ್ತಿಲ್ಲ, ದೇಶೀಯ ರಾಸುಗಳಿಂದ ಕೃಷಿ ಜೊತೆಗೆ ಆರೋಗ್ಯಕರ ಹಾಲು ದೊರೆಯುತ್ತದೆ, ಇನ್ನು ಗೊಬ್ಬರ ಉತ್ಪತ್ತಿಯಾಗುತ್ತದೆ ಎಂದು ಹೇಳಿದರು.

ರೈತ ಸಂಘದ ಮುಖಂಡರಾದ ಎಚ್‌.ಜಿ.ರವಿ,ಮಂಜಣ್ಣ, ಶಿವೇಗೌಡ, ರಾಮಚಂದ್ರ, ಎಚ್‌.ಎನ್‌. ಲವಣ್ಣ, ಕೃಷಿ ಇಲಾಖೆ ಸಹಾಯ ನಿರ್ದೇಶಕ ಗುರುಸಿದ್ದಪ್ಪ ಮೊದಲದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

9

Lok Sabha Election: ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ 

banHassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-uv-fusion

Yugadi: ಯುಗದ ಆರಂಭದ ಮುನ್ನುಡಿ ಈ ಯುಗಾದಿ

1-wqeqwewq

Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.