ತಿಂಗಳು ಸಂಪೂರ್ಣ ಲಾಕ್ ಡೌನ್ ಮಾಡಿ: ರೇವಣ್ಣ
Team Udayavani, May 20, 2021, 8:16 PM IST
ಹಾಸನ: ಕೊರೊನಾ ಸೋಂಕು ನಿಯಂತ್ರಿಸಬೇಕಾದರೆ ಸರ್ಕಾರ ಒಂದು ತಿಂಗಳು ಸಂಪೂರ್ಣ ಲಾಕ್ಡೌನ್ ಮಾಡಬೇಕು ಎಂದು ಜೆಡಿಎಸ್ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ರಾಜ್ಯದಲ್ಲಿಬೆಂಗಳೂರು ಬಿಟ್ಟರೆಅತೀ ಹೆಚ್ಚು ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಿದ್ದು,44.68ಪಾಸಿಟಿವಿಟಿ ದರ ಇದೆ. ಕಳೆದ 15 ದಿನಗಳಲ್ಲಿ 250ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ 10ದಿನಗಳ ಹಿಂದೆಯೇ ಜಿಲ್ಲೆಯಲ್ಲಿ ವಾರದ 4 ದಿನಸಂಪೂರ್ಣ ಲಾಕ್ಡೌನ್ ಜಾರಿ ಮಾಡಬೇಕು ಎಂದು ಶಾಸಕರು ಒತ್ತಾಯ ಮಾಡಿದ್ದೆವು .ಆದರೆ ಅಂದು ಸ್ಪಷ್ಟನಿರ್ಧಾರಕೈಗೊಳ್ಳದೆ ನಿರ್ಲಕ್ಷ್ಯತಾಳಿದ ಜಿಲ್ಲಾಡಳಿತ ಈಗ ವಾರದಲ್ಲಿ 4 ದಿನಸಂಪೂರ್ಣ ಲಾಕ್ಡೌನ್ ನಿರ್ಧಾರ ಮಾಡಿದೆ. ಈಗ ವಾರದಲ್ಲಿ ನಾಲ್ಕು ದಿನಅಲ್ಲ, ತಿಂಗಳು ಸಂಪೂರ್ಣಲಾಕ್ಡೌನ್ಜಾರಿಮಾಡಬೇಕು. ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ರೈತರಿಗೆ ಒಂದುತಿಂಗಳಿಗೆ 5000 ರೂ. ನೀಡಲಿ ಎಂದರು.
ಡೀಸಿಗಳಿಗೆ ಅವಮಾನ: ಪ್ರಧಾನ ಮಂತ್ರಿಯವರು ಮಂಗಳವಾರ ಜಿಲ್ಲಾಧಿಕಾರಿಗಳೊಂದಿಗೆವಿಡಿಯೋ ಸಂವಾದನಡೆಸಲು ಆಹ್ವಾನಿಸಿ ಯಾವ ಜಿಲ್ಲಾಧಿಕಾರಿಯೊಂದಿಗೂ ಮಾತನಾಡಿಲ್ಲ. ಬಿಬಿಎಂಪಿ ಆಯುಕ್ತ ಗೌರವ್ಗುಪ್ತ ಅವರೊಬ್ಬರೊಂದಿಗೆ ಸಂವಾದ ನಡೆಸಿ ಜಿಲ್ಲಾಧಿಕಾರಿಗಳಿಗೆ ಅವಮಾನ ಮಾಡಿದ್ದಾರೆ. ಸೋಂಕು ಹೆಚ್ಚಿರುವ ಒಂದೆರೆಡು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಿಯವರು ಸಂವಾದ ನಡೆಸಿ ಮಾಹಿತಿ ಪಡೆಯಬೇಕಿತ್ತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್ಡಿಡಿ
Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ
Lok Sabha elections: ಬೇಲೂರು; ಕೈ ಒಳಜಗಳ, ಜೆಡಿಎಸ್ಗೆ ಲಾಭ?
Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್ ರೇವಣ್ಣ ಪ್ರಚಾರಕ್ಕೆ ಚಾಲನೆ