ಕಲ್ಪತರು ತಾಲೂಕಿನಲ್ಲೂ ಗಂಗೆಗೆ ಬರೆ

41 ಗ್ರಾಪಂ ಪೈಕಿ 12 ಗ್ರಾಪಂ ವ್ಯಾಪ್ತಿಯಲ್ಲಿ ನೀರಿಗೆ ಸಮಸ್ಯೆ

Team Udayavani, Apr 12, 2021, 1:28 PM IST

ಕಲ್ಪತರು ತಾಲೂಕಿನಲ್ಲೂ ಗಂಗೆಗೆ ಬರೆ

ಚನ್ನರಾಯಪಟ್ಟಣ: ಜಿಲ್ಲೆಯ ಹೇಮಾವತಿ ಎಡದಂಡೆ ನಾಲೆ ತಾಲೂಕಿನ ದಂಡಿಗನಹಳ್ಳಿ, ಕಸಬಾ,ಶ್ರವಣಬೆಳಗೊಳ, ಬಾಗೂರು ಹೋಬಳಿಯ ಹೃದಯಭಾಗದಲ್ಲಿ ಹಾದು ಹೋಗಿದ್ದರೂ ಬೇಸಿಗೆಯಲ್ಲಿ ಕಲ್ಪತರು ನಾಡಿನಲ್ಲಿ ಗಂಗೆಗೆ ಬರವಿದೆ.

ಹಾಸನ ಜಿಲ್ಲೆಯ ಕಲ್ಪತರು ತಾಲೂಕು ಎಂಬಹೆಗ್ಗಳಿಕೆ ಹೊಂದಿದ್ದು ತಾಲೂಕಿನ 41 ಗ್ರಾಪಂಗಳ ಪೈಕಿ12 ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮದಲ್ಲಿ ಕುಡಿವನೀರಿನ ಸಮಸ್ಯೆ ಉಲ್ಬಣವಾಗಿದ್ದು ಮಹಿಳೆಯರುತಮ್ಮ ಮನೆಗೆ ನೀರು ತರಲು ನಿತ್ಯವೂ ಕಿ.ಮೀ. ವರೆಗೆ ಸಂಚಾರ ಮಾಡುವಂತಾಗಿದೆ.

ತಾಲೂಕಿನ ಕಸಬಾ ಹೊರತುಪಡಿಸಿದರೆ ಹಿರೀಸಾವೆ, ಶ್ರವಣಬೆಳಗೊಳ, ನುಗ್ಗೇಹಳ್ಳಿ, ಬಾಗೂರುಹಾಗೂ ದಂಡಿಗನಹಳ್ಳಿ ಹೋಬಳಿ ಕೆಲ ಗ್ರಾಮದಲ್ಲಿಅಂತರ್ಜಲ ಕುಸಿತವಾಗಿದ್ದು ಕೊಳವೆ ಬಾವಿಯಲ್ಲಿನೀರು ಬರುತ್ತಿಲ್ಲ, ಇದರಿಂದ ಹಲವು ಗ್ರಾಮದಲ್ಲಿನೀರಿನ ಸಮಸ್ಯೆ ಉಲ್ಬಣವಾಗಿದೆ. ಮಹಿಳೆಯರು ಖಾಸಗಿ ಕೊಳವೆ ಬಾವಿ ಇರುವೆಡೆಗೆ ತೆರಳಿ ನಿತ್ಯ ಕುಡಿವ ನೀರು ಹೊತ್ತು ತರುವಂತಾಗಿದೆ.

ಖಾಸಗಿ ಬಾವಿ ಬಂದ್‌: ಮಳೆಗಾಲದಲ್ಲಿ ಗ್ರಾಮದಅನೇಕ ರೈತರ ತೋಟದಲ್ಲಿನ ಕೊಳವೆ ಬಾವಿಯಲ್ಲಿನೀರು ದೊರೆಯುತ್ತಿತ್ತು. ಅಂದು ಅಲ್ಲಿಂದ ನೀರುತಂದು ಜೀವನ ನಡೆಸುತ್ತಿದ್ದರು. ಬೇಸಿಗೆಪ್ರಾರಂಭವಾಗುತ್ತಿರುವ ಸಮಯದಲ್ಲಿ ಗ್ರಾಮಸ್ಥರಿಗೆ ನೀರು ನೀಡಲು ಮುಂದಾದರೆ ತಮ್ಮ ತೋಟಕ್ಕೆಹಾಗೂ ಇತರ ಬೆಳೆಗೆ ನೀರಿನ ಸಮಸ್ಯೆ ಉಂಟಾಗುತ್ತದೆ ಎಂದು ಖಾಸಗಿ ಕೊಳವೆ ಬಾವಿ ಮಾಲೀಕರು ಕುಡಿಯುವ ನೀರು ಕೊಡಲು ಮುಂದಾಗುತ್ತಿಲ್ಲ.

ಏತನೀರಾವರಿ ಯೋಜನೆ: ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಕ್ಕ ಮಟ್ಟಿಗೆ ಕಡಿಮೆ ಯಾಗಿದೆ. ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ದಂಡಿಗನಹಳ್ಳಿ ಹೋಬಳಿ ಕಾಚೇನಹಳ್ಳಿಏತನೀರಾವರಿಯಿಂದಾಗಿ ಬಳದರೆ, ಕುದೂರುಹಾಗೂ ದಂಡಿಗನಹಳ್ಳಿ ಹೋಬಳಿಯ ಹತ್ತಾರುಗ್ರಾಮದಲ್ಲಿ ಅಂತರ್ಜಲ ವೃದ್ಧಿಯಾಗಿ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದೆ.

ನುಗ್ಗೇಹಳ್ಳಿ, ಹಿರೀಸಾವೆ, ಜುಟ್ಟನಹಳ್ಳಿ ಯೋಜನೆ:

ಶ್ರವಣಬೆಳಗೊಳ ವಿಧಾನ ಸಭಾ ವ್ಯಾಪ್ತಿಯಲ್ಲಿ ನುಗ್ಗೇಹಳ್ಳಿ ಏತನೀರಾವರಿ ಯೋಜನೆ ಪೂರ್ಣ ಗೊಂಡಿದ್ದು ಪ್ರಾಯೋಗಿಕವಾಗಿ ನೀರು ಕೆರೆಗಳಿಗೆ ನೀರು ತುಂಬಿಸಿರು ವುದರಿಂದ ನುಗ್ಗೇಹಳ್ಳಿ, ಜಂಬೂರು, ಕಲ್ಕೆರೆ ಭಾಗದ ಕೆಲ ಗ್ರಾಮದಲ್ಲಿ ಅಂತರ್ಜಲ ವೃದ್ಧಿಯಾಗಿ ಕೊಳವೆಬಾವಿಗಳಲ್ಲಿ ನೀರು ದೊರೆಯುತ್ತಿದೆ. ಹಿರೀಸಾವೆ- ಜುಟ್ಟನಹಳ್ಳಿ ಯೋಜನೆಯಿಂದ ಬೆಕ್ಕಾ, ಮತಿಗಟ್ಟಜುಟ್ಟನಹಳ್ಳಿ ವ್ಯಾಪ್ತಿಯ ಕೆಲ ಗ್ರಾಮದ ಕೆರೆಗಳಿಗೆನೀರು ತುಂಬಿಸಿರುವುದರಿಂದ ಇಲ್ಲಿಯೂ ಸಮಸ್ಯೆ ಅಷ್ಟಾಗಿ ಕಂಡು ಬಂದಿಲ್ಲ.

ವಾರದಲ್ಲೇ ಕೊಳವೆ ಬಾವಿ ನಿಂತೋಯ್ತು :

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಇರುವುದರಿಂದ ತಾಲೂಕು ಆಡಳಿತಭೇಟಿ ನೀಡಿ ಸಮಸ್ಯೆ ಇರುವ ಗ್ರಾಮವನ್ನುಪತ್ತೆ ಹಚ್ಚಿ ಶಾಸಕ ಸಿ.ಎನ್‌.ಬಾಲಕೃಷ್ಣರಗಮನಕ್ಕೆ ತಂದರೂ ಕೂಡಲೇ ಶಾಸಕರುಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಿ ಪಂಪ್‌ಸೆಟ್‌ ಅಳವಡಿಸಿ ನೀರಿನ ಸಮಸ್ಯೆಬಗೆಹರಿಸಿದ್ದರು. ವಾರದಲ್ಲಿಯೇ ಕೊಳವೆಬಾವಿಯಲ್ಲಿ ನೀರು ಬತ್ತಿಹೋಗಿದ್ದು ತಾಲೂಕಿನಲ್ಲಿ ಅಂರ್ಜಲ ಕುಸಿಯುತ್ತಿದೆ.

ಸಮಸ್ಯೆ ಇರುವ ಗ್ರಾಮಗಳು : ಹಿರೀಸಾವೆ ಗ್ರಾಪಂ ವ್ಯಾಪ್ತಿಯ ಕಲ್ಲಹಳ್ಳಿ ಹಾಗೂ ಹಿರೀಸಾವೆಹೋಬಳಿ ಕೇಂದ್ರ, ಬಾಳಗಂಚಿ ಗ್ರಾಪಂ ವ್ಯಾಪ್ತಿಯ ತಿಮ್ಮಾಪುರ,ಬ್ಯಾಡರಹಳ್ಳಿ, ಕಾವಲು ಹೊಸೂರು. ದಮ್ಮನಿಂಗಲ ಗ್ರಾಪಂನಮಜ್ಜನಹಳ್ಳಿ, ಮತ್ತಿಗಟ್ಟ ಗ್ರಾಪಂನ ಕಮರವಹಳ್ಳಿ, ಜೋಳಂಬಳ್ಳಿ,ಕಬ್ಟಾಳು ಗ್ರಾಪಂನ ಡಿಂಕ ಕೊಪ್ಪಲು, ಗೌಡಗಡರೆ ಗ್ರಾಪಂನಬಡಕನಹಳ್ಳಿ, ದಿಡಗ ಗ್ರಾಪಂ ಕೇಂದ್ರದಲ್ಲಿಯೂ ನೀರಿನ ಸಮಸ್ಯೆಇದೆ. ಸಂತೆಶಿವರ ಗ್ರಾಪಂನ ಯಾಚನಘಟ್ಟ, ಕಲ್ಕೆರೆ ಗ್ರಾಪಂನೆಟ್ಟೆಕೆರೆ, ತಗಡೂರು ಗ್ರಾಪಂನ ಕಲ್ಲುಮಲ್ಲೇನಹಳ್ಳಿ ಇನ್ನುಮಟ್ಟನವಿಲೆ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿಯೂಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಬಾಗೂರುಹೋಬಳಿ ಕೇಂದ್ರ ಗಡಿಯಲ್ಲಿನ ಕೆಲ ಗ್ರಾಮದಲ್ಲಿ ಮುಂದಿನ ತಿಂಗಳಲ್ಲಿ ಸಮಸ್ಯೆ ಉಂಟಾಗುವ ಲಕ್ಷಣಗಳು ಕಾಣುತ್ತಿವೆ.

ಸಮಸ್ಯೆ ಇರುವ ಕಡೆ ಕೊಳವೆ ಬಾವಿ ಕೊರಿಸಲಾಗಿದೆ. ಎಲ್ಲಿ ಕೊಳವೆ ಬಾವಿ ಕೊರೆಸಿದರೂ ನೀರು ಬರುತ್ತಿಲ್ಲ. ಆ ಭಾಗದಲ್ಲಿಖಾಸಗಿ ಕೊಳವೆ ಬಾವಿಯಿಂದ ಜನರಿಗೆ ನೀರುಕೊಡಿಸುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ.ಕೆಲ ಕಡೆಯಲ್ಲಿ ಟ್ಯಾಂಕರ್‌ ಮೂಲಕ ನೀರುಸರಬರಾಜು ಮಾಡಲಾಗುತ್ತಿದೆ. ಸುನಿಲ್‌ಕುಮಾರ್‌, ತಾಪಂ ಇಒ

ಪ್ರತಿ ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗುತ್ತದೆ. ಯಾರಾದರೂ ತೋಟಕ್ಕೆ ನೀರು ಬಿಟ್ಟುಕೊಂಡಾಗ ಅಲ್ಲಿಗೆ ತೆರಳಿ ನೀರು ಪಡೆಯುತ್ತೇವೆ. ಆದಷ್ಟು ಬೇಗ ತೋಟಿ ಏತನೀರಾವರಿ ಯೋಜನೆ ಮುಗಿಸಿದರೆ ಶಾಶ್ವತವಾಗಿ ಸಮಸ್ಯೆ ಬಗೆಹರಿಯಲಿದೆ. ಶಾರದಮ್ಮ, ದಿಡಗ ನಿವಾಸಿ

 

ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

9

Lok Sabha Election: ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ 

banHassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.