New year: ಹೊಸ ವರ್ಷಾಚರಣೆಗೆ ಮಲೆನಾಡಿಗೆ ಪ್ರವಾಸಿಗರ ಲಗ್ಗೆ


Team Udayavani, Dec 30, 2023, 3:31 PM IST

tdy-11

ಸಕಲೇಶಪುರ: ಕ್ರಿಸ್‌ಮಸ್‌ ರಜೆ ಹಾಗೂ ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಹೊರ ಊರುಗಳಿಂದ ಪ್ರವಾಸಿಗರು ತಾಲೂಕಿಗೆ ಕಳೆದೊಂದು ವಾರದಿಂದ ನಿರಂತರವಾಗಿ ಬರುತ್ತಿದ್ದು, ತಾಲೂಕಿನ ಪ್ರವಾಸೋದ್ಯಮ ಸ್ಥಳಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ.

ಕೋವಿಡ್‌ ಹೊಸ ತಳಿಯ ಆತಂಕದ ನಡುವೆಯೂ ಹೋಂಸ್ಟೇ ಮತ್ತು ರೆಸಾರ್ಟ್‌ಗಳಿಗೆ ಹೊರ ಊರುಗಳಿಂದ ಪ್ರಕೃತಿ ಸೌಂದರ್ಯ ಸವಿಯಲು ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಟ್ರಾಫಿಕ್‌ ಕಿರಿಕಿರಿ: ಬೆಂಗಳೂರು ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75 ಪಟ್ಟಣದ ಮೂಲಕ ಹಾದು ಹೋಗಿದ್ದು, ಪ್ರವಾಸಿಗರು ತಾಲೂಕಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಕಳೆದೊಂದು ವಾರದಿಂದ ಆಗಮಿಸುತ್ತಿರು ವುದರಿಂದ ಪಟ್ಟಣದಲ್ಲಿ ಟ್ರಾಫಿಕ್‌ ಕಿರಿಕಿರಿ ವಿಪರೀತವಾ ಗಿದ್ದು, ಪಟ್ಟಣ ವ್ಯಾಪ್ತಿಯಲ್ಲಿರುವ ಜನ ಒಂದು ಬದಿಯಿಂದ ಇನ್ನೊಂದು ಬದಿಗೆ ರಸ್ತೆ ಕ್ರಾಸ್‌ ಮಾಡಲು ಹರಸಾಹಸ ಮಾಡಬೇಕಾಗಿದೆ. ಸ್ಥಳೀಯರು ಒಂದೆರೆಡು ಕಿ.ಮೀ ದೂರ ಹೋಗಲು ತೊಂದರೆಯಾಗುತ್ತಿದೆ.

ಪ್ರವಾಸಿ ಸ್ಥಳಗಳಲ್ಲಿ ಟ್ರಾಫಿಕ್‌ ಜಾಂ: ಪ್ರವಾಸಿ ಸ್ಥಳಗಳಿಗೆ ವಿಪರೀತ ಜನ ಬರುತ್ತಿರುವುದರಿಂದ ವಾಹನಗಳ ನಿಲುಗಡೆ ಮಾಡಲು ಪ್ರವಾಸಿಗರು ಹರಸಾಹಸ ಮಾಡಬೇಕಾಗಿದೆ. ಎಲ್ಲಿ ಬೇಕೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಹಲವು ಕಡೆ ವಾಹನ ದಟ್ಟಣೆ ಆಗುತ್ತಿರುವುದು ಸ್ಥಳೀಯರ ಪರದಾಟಕ್ಕೆ ಕಾರಣವಾಗಿದೆ.

ವಿವಿಧ ಪ್ರವಾಸೋದ್ಯಮ ಸ್ಥಳಗಳು ಫ‌ುಲ್‌ ರಶ್‌:  ತಾಲೂಕಿನ ಪ್ರಮುಖ ಪ್ರವಾಸೋದ್ಯಮ ಸ್ಥಳಗಳಾದ ಮಂಜ್ರಾಬಾದ್‌ ಕೋಟೆ, ಬಿಸ್ಲೆ ಘಾಟ್‌, ಮೂಕನಮನೆ ಜಲಪಾತ, ಮಗಜಹಳ್ಳಿ ಜಲಪಾತ, ಹೊಸಹಳ್ಳಿ ಗುಡ್ಡ, ಬೆಟ್ಟದ ಭೈರವೇಶ್ವರ ದೇವಸ್ಥಾನ ಸೇರಿದಂತೆ ಇನ್ನು ಹಲವು ಸ್ಥಳಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ವಿಪರೀತ ಬಿಸಿಲು ಇರುವುದರಿಂದ ಪ್ರವಾಸಿ ಗರು ಜಲಪಾತಗಳಲ್ಲಿ ಆಟವಾಡಲು ಇಷ್ಟಪಡುತ್ತಿದ್ದು, ಅಲ್ಲಿ ಅಪಾರ ಪ್ರವಾಸಿಗರನ್ನು ಕಾಣಬಹುದಾಗಿದೆ.

ಮದ್ಯ ಅಂಗಡಿ, ಬೇಕರಿ, ಹೋಟೆಲ್‌ ರಶ್‌:  ಪ್ರವಾಸಿಗ ರಿಂದ ತಾಲೂಕಿನ ಮಧ್ಯದ ಅಂಗಡಿಗಳಿಗೆ, ಬೇಕರಿ ಹಾಗೂ ಹೋಟೆಲ್‌ಗ‌ಳು, ಮಾಂಸದ ಅಂಗಡಿಗಳಿಗೆ ಉತ್ತಮ ವ್ಯಾಪಾರ ವಹಿವಾಟು ಕಳೆದೊಂದು ವಾರದಿಂದ ನಡೆಯುತ್ತಿದ್ದು ಇದರಿಂದ ತಾಲೂಕಿನ ಆರ್ಥಿಕತೆ ಚೇತರಿಸಿಕೊಳ್ಳಲು ಸಹಕಾರಿಯಾಗಿದೆ.

ಪೋಲಿಸರಿಗೆ ತಲೆ ನೋವು: ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಕೆಲವು ಪುಂಡ ಪೋಕರಿಗಳು ಆಗಮಿಸಿ ಮೋಜು ಮಸ್ತಿಗಾಗಿ ಅತಿಯಾದ ಮದ್ಯ ಸೇವನೆ ಮಾಡಿ ದಾಂಧಲೆ ನಡೆಸುವುದರಿಂದ ಇಂತಹವರ ಮೇಲೆ ಕಣ್ಣಿಡ ಬೇಕಾದ ಅನಿವಾರ್ಯತೆಗೆ ಪೊಲೀಸರು ಸಿಲುಕಿದ್ದಾರೆ.

ಹಿಂದೂ ಸಂಘಟನೆ ಎಚ್ಚರಿಕೆ:

ಹೊಸ ವರ್ಷಾಚರಣೆ ಹೆಸರಿನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುವುದು ಕಂಡು ಬಂದಲ್ಲಿ ಅಂತಹ ರೆಸಾರ್ಟ್‌ ಮತ್ತು ಹೋಂ ಸ್ಟೇಗಳ ಮೇಲೆ ದಾಳಿ ನಡೆಸುವುದಾಗಿ ಕೆಲವು ಹಿಂದೂ ಸಂಘಟನೆಗಳು ಎಚ್ಚರಿಸಿವೆ. ಆದರೆ, ರೆಸಾರ್ಟ್‌ ಮತ್ತು ಹೋಂ ಸ್ಟೇಗಳ ಮಾಲೀಕರು ಇದಕ್ಕೆ ತಲೆಕೆಡಿಸಿಕೊಳ್ಳದೇ ಹೊಸ ವರ್ಷ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಹೋಂ ಸ್ಟೇ, ರೆಸಾರ್ಟ್‌ ಭರ್ತಿ :

ಕಳೆದೊಂದು ವಾರದಿಂದ ತಾಲೂಕಿನ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳು ಉತ್ತಮ ವ್ಯವಹಾರ ಕಂಡಿವೆ. ಬಹುತೇಕ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳು ಭರ್ತಿಯಾಗಿದ್ದು, ಎಲ್ಲಿ ನೋಡಿದರಲ್ಲಿ ಪ್ರವಾಸಿಗರು ಕಂಡು ಬರುತ್ತಿದ್ದಾರೆ. ಇದರಿಂದ ರೆಸಾರ್ಟ್‌ ಮತ್ತು ಹೋಂ ಸ್ಟೇ ಮಾಲಿಕರು ಖುಷಿಯಾಗಿದ್ದಾರೆ.

ಕ್ಲಬ್‌ಗಳಲ್ಲೂ ಸಿದ್ಧತೆ :

ಕ್ರಿಸ್‌ಮಸ್‌ ಹಬ್ಬ ಮುಗಿದು ವಾರ ಕಳೆದಿಲ್ಲ, ಇದೀಗ ತಾಲೂಕಿನ ರೆಸಾರ್ಟ್‌ ಮತ್ತು ಹೋಂ ಸ್ಟೇಗಳು ಮಾತ್ರವಲ್ಲದೇ ಹಲವು ಕ್ಲಬ್‌ಗಳಲ್ಲಿ ಹೊಸ ವರ್ಷಾಚರಣೆ ಮಾಡಲು ಸಿದ್ಧತೆ  ನಡೆಸಲಾಗಿದೆ. ಪ್ರವಾಸಿಗರ ಸಂಖ್ಯೆ ಆಧಾರದಲ್ಲಿ ಎಲ್ಲಾ ಹೋಂ ಸ್ಟೇ, ರೆಸಾರ್ಟ್‌ ಹಾಗೂ ಕ್ಲಬ್‌ಗಳಲ್ಲಿ ಸಿದ್ಧತೆ ಮಾಡಲಾಗಿದೆ.

ಹೊಸ ವರ್ಷಾಚರಣೆಗೆ ಹೊರ ಊರುಗಳಿಂದ ಹಲವಾರು ಪ್ರವಾಸಿಗರು ಬರುವುದರಿಂದ ತಾಲೂಕಿನ ಆರ್ಥಿಕತೆ ಚೇತೋಹಾರಿಗೆ ಸಹಾಯವಾಗುತ್ತದೆ. ಆಚರಣೆ ಹೆಸರಿನಲ್ಲಿ ಬರುವವರು ಉತ್ತಮವಾಗಿ ವರ್ತಿಸಬೇಕು. ಯಾರಾದರೂ ಗೊಂದಲ ಸೃಷ್ಟಿ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆಗೆ ಆದೇಶಿಸಲಾಗಿದೆ.-ಸಿಮೆಂಟ್‌ ಮಂಜು,ಶಾಸಕರು, ಸಕಲೇಶಪುರ ಕ್ಷೇತ್ರ 

ಹೊಸ ವರ್ಷಾಚರಣೆಗೆ ವಿವಿಧೆಡೆಯಿಂದ ಸಾವಿರಾರು ಪ್ರವಾಸಿಗರು ತಾಲೂಕಿನ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಿಗೆ ಆಗಮಿಸುತ್ತಿದ್ದಾರೆ. ಬಹುತೇಕ ಎಲ್ಲಾ ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ಸಿದ್ಧತೆ ನಡೆದಿದೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ತಾಲೂಕಿನಲ್ಲಿ ಮತ್ತಷ್ಟು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಬೇಕು.  -ಹುರುಡಿ ಪ್ರಶಾಂತ್‌, ರೆಸಾರ್ಟ್‌ ಮಾಲೀಕರು 

-ಸುಧೀರ್‌ ಎಸ್‌.ಎಲ್‌.

Ad

ಟಾಪ್ ನ್ಯೂಸ್

RCB overtakes CSK to become the most valuable team in IPL

RCB: ಸಿಎಸ್‌ಕೆಯನ್ನು ಹಿಂದಿಕ್ಕಿ ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡವಾದ ಆರ್‌ ಸಿಬಿ

BJP Karnataka: We are not bigger than the party….: Kumar Bangarappa

BJP Karnataka: ಪಕ್ಷಕ್ಕಿಂತ ದೊಡ್ಡವರು ನಾವಲ್ಲ….: ಕುಮಾರ ಬಂಗಾರಪ್ಪ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

10-

Madikeri: ಹಸು, ಎಮ್ಮೆಗಳ ಕಳ್ಳತನ : ನಾಲ್ವರು ಆರೋಪಿಗಳ ಬಂಧನ

Mangaluru: ಮಳಿಗೆಯಿಂದ 3.30 ಲಕ್ಷ ರೂ. ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Mangaluru: ಮಳಿಗೆಯಿಂದ 3.30 ಲಕ್ಷ ರೂ. ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

13 IAS officers including D.Kannada CEO transferred

IAS Transfer: ದ.ಕನ್ನಡ ಜಿಲ್ಲಾ ಸಿಇಒ ಸೇರಿ 13 ಐಎಎಸ್‌ ಅಧಿಕಾರಿಗಳ ವರ್ಗಾವಣೆ

9-train

ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿಗೆ ಪ್ರಯತ್ನ; ಸೋಮಣ್ಣ ನೇತೃತ್ವದ ಸಭೆಯಲ್ಲಿ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R.Ashok

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಶ್ನೆಯೇ ಇಲ್ಲ: ಆರ್‌.ಅಶೋಕ್‌

KNrajanna

ಹಾಸನದಲ್ಲಿ ಎಚ್‌.ಡಿ.ದೇವೇಗೌಡ, ರೇವಣ್ಣರನ್ನು ಹಾಡಿ ಹೊಗಳಿದ ಸಚಿವ ಕೆ.ಎನ್‌.ರಾಜಣ್ಣ!

Hassan: ಹೃದಯಾಘಾತದಿಂದ ಮೃತಪಟ್ಟವರ ಮನೆಗೆ ವೈದ್ಯರ ತಂಡ ಭೇಟಿ

Hassan: ಹೃದಯಾಘಾತದಿಂದ ಮೃತಪಟ್ಟವರ ಮನೆಗೆ ವೈದ್ಯರ ತಂಡ ಭೇಟಿ

heart attack

Hassan; ಎಲ್ಲ ಸಾವುಗಳಿಗೆ ಹೃದಯಾಘಾತವೇ ಕಾರಣವಲ್ಲ: ಹಾಸನ ಡಿಎಚ್‌ಒ

three more passed away of heart attacks in Hassan

Hassan: ಮುಂದುವರಿದ ಸಾವಿನ ಸರಣಿ.. ಹೃದಯಾಘಾತಕ್ಕೆ ಮತ್ತೆ ಮೂವರು ಬಲಿ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

RCB overtakes CSK to become the most valuable team in IPL

RCB: ಸಿಎಸ್‌ಕೆಯನ್ನು ಹಿಂದಿಕ್ಕಿ ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡವಾದ ಆರ್‌ ಸಿಬಿ

hun-Arrest

ರಸ್ತೆಯಲ್ಲಿ ವ್ಹೀಲಿಂಗ್‌, ಲಾಂಗ್‌ ಹಿಡಿದು ರೀಲ್ಸ್‌: ಯುವಕ ಬಂಧನ

BJP Karnataka: We are not bigger than the party….: Kumar Bangarappa

BJP Karnataka: ಪಕ್ಷಕ್ಕಿಂತ ದೊಡ್ಡವರು ನಾವಲ್ಲ….: ಕುಮಾರ ಬಂಗಾರಪ್ಪ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

22

Mangaluru: ಕೆಲಸಕ್ಕೆ ಹೋದವರು ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.