ಆಲೂರಿಗೆ ಬಾರದ ಇಂದಿರಾ ಕ್ಯಾಂಟೀನ್
Team Udayavani, Mar 24, 2021, 6:42 PM IST
ಆಲೂರು: ಹಾಸನ ಜಿಲ್ಲೆಯಲ್ಲಿಯೇ ಆಲೂರು ತಾಲೂಕು ಅತಿ ಚಿಕ್ಕ ತಾಲೂಕು ಎಂದು ಎಲ್ಲಾವಿಚಾರದಲ್ಲಿಯೂ ಕಡೆಗಣಿ ಸುತ್ತಾ ಬಂದ ಜನಪ್ರತಿನಿಧಿಗಳು. ಹೀಗೆಯೇ ಎಲ್ಲಾವಿಚಾರದಲ್ಲಿಯೂ ನಿರ್ಲಕ್ಷ್ಯ ತೋರುತ್ತಾ ಬಡವರ ಹಸಿವನ್ನು ನೀಗಿಸಲು ಸಿದ್ದರಾಮಯ್ಯ ಸರಕಾರ ರೂಪಿಸಿದ ಇಂದಿರಾ ಕ್ಯಾಂಟೀನ್ ತರುವಲ್ಲಿಯೂ ಕೂಡ ವಿಫಲರಾಗಿದ್ದು ಇವರ ನಿರ್ಲಕ್ಷ್ಯದಿಂದ ಅದೆಷ್ಟೋ ಬಡವರು ನಿತ್ಯ ಹಸಿವಿನಿಂದ ಬಳಲುವ ಪಟ್ಟಣದಲ್ಲಿ ನಿರ್ಮಾಣವಾಗಿದೆ.
ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳನಡುವೆ ಆಲೂರು ಅಭಿವೃದ್ಧಿ ಗಮನಿಸಿದರೆ ಶೂನ್ಯ. ಇದು ಸಾರ್ವಜನಿಕರ ಮಾತಾಗಿದೆ. ತಾ.ಹಾಸನ ನಗರ ಪಕ್ಕದಲ್ಲಿ ಇರುವುದರಿಂದವು ಅಭಿವೃದ್ಧಿ ಕಂಡಿಲ್ಲ ಎನ್ನುವುದು ಕೂಡಸಾಮಾನ್ಯವಾಗಿ ಬರುವ ಉತ್ತರ. ಆದರೆ ಚಿಕ್ಕತಾಲೂಕು ಎಂದ ಮೇಲೆ ಬಡವರು ನಿರ್ಗತಿಕರು ಇರುವುದಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ ?ಹಸಿವಿನಿಂದ ವಾಪಸ್ಸಾಗುವ ಜನತೆ: ತಾಲೂಕಿನಲ್ಲಿಯೂ ಬಡವರಿದ್ದಾರೆ. ಗ್ರಾಮೀಣ ಪ್ರದೇಶ ದಿಂದ 35 ರಿಂದ 40 ಕಿ.ಲೋ. ಮೀಟ ರ್ನಿಂದತಮ್ಮ ಕೆಲಸ ಕಾರ್ಯಗಳಿಗೆ ಪಟ್ಟ ಣಕ್ಕೆ ನಿತ್ಯಸಾವಿರಾರು ಮಂದಿ ಬಂದು ಹೋಗು ತ್ತಾರೆ. ಕಾಲೇಜಿಗೆ ಬರುವವಿದ್ಯಾ ರ್ಥಿ ಗಳು, ಆಟೋ ಚಾಲಕರು, ರಸ್ತೆಬದಿ ವ್ಯಾಪಾರಿ ಗಳು,ಆಸ್ಪತ್ರೆಗೆ ಬಂದೋಗುವವರು, ಹೀಗೆ ನಿತ್ಯ ಹಲವು ಕೆಲಸಕಾರ್ಯಗಳಿಗೆ ಸಾವಿರಾರೂ ಜನ ಪಟ್ಟಣಕ್ಕೆ ಬರುತ್ತಾರೆ.
ದುಬಾರಿ ಬೆಲೆ: ಖಾಸಗಿ ಹೋಟೆಲ್ ಊಟಕ್ಕೆ ತೆರಳಿದರೆ 80 ರಿಂದ 100 ರೂಪಾಯಿಗಳು ಖರ್ಚಾ ಗುತ್ತದೆ. ದುಡಿದ ಲಾಭವೆಲ್ಲ ಊಟಕ್ಕೆ ಖರ್ಚಾಗುತ್ತದೆ ಎಂದು ಸಾರ್ವಜನಿಕರು ಉಪವಾಸದಲ್ಲಿಕೆಲಸ ಮಾಡಿಕೊಂಡು ಮನೆಗೆ ಖಾಲಿ ಹೊಟ್ಟೆಯಲ್ಲಿ ವಾಪಸ್ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಸಕರೇ ಗಮನಹರಿಸಿ: ಶಾಸಕರು ಆಲೂರು ತಾಲೂಕಿಗೆ ಕೆಲವೊಂದು ಸೌಲಭ್ಯ ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.ಇಂದಿರಾ ಕ್ಯಾಂಟೀನ್ ನಂತಹ ಬಡವರಿಗೆ ಉಪಯುಕ್ತವಾಗುವಯೋಜನೆ ತರುವಲ್ಲಿ ಇವರಿಂದ ಸಾಧ್ಯ ವಾಗದಿದ್ದರೆ ತಾಲೂಕು ಅಭಿವೃದ್ಧಿ ಹೇಗೆ ಸಾಧ್ಯ ಎಂಬುದು ಸ್ಥಳೀಯ ಪ್ರಶ್ನೆಯಾಗಿದೆ.
ಸೌಕರ್ಯಗಳಿಗಾಗಿ ಬೇಡುವ ಸ್ಥಿತಿ ದೂರದೂರಿಂದ ಬಡವರು, ಕೂಲಿ ಕಾರ್ಮಿಕರು, ತಮ್ಮಮ್ಮ ಕೆಲಸ ಕಾರ್ಯಗಳಿಗೆ ಆಲೂರು ಪಟ್ಟಣಕ್ಕೆ ಬರುತ್ತಾರೆ. ಸರಿಯಾದ ಊಟ ಸಿಗದೇ ಅಲೆಯು ವಂತಾಗಿದೆ. ಇಂದಿರಾಕ್ಯಾಂಟೀನ್ ಯಾರ ಹೆಸರಿನಲ್ಲಿ ಇರಲಿಬಡವರ ಹಸಿವು ನೀಗಿದರೆ ಸಾಕು.ಶಾಸಕರು ಈ ಬಗ್ಗೆ ಇವತ್ತಿನವರೆಗೂಸಂಬಂಧಪಟ್ಟ ಅಧಿಕಾರಿಗಳ ಜೊತೆಚರ್ಚಿಸಿಲ್ಲ. ಕೇಂದ್ರ ಹಾಗೂ ರಾಜ್ಯಸರ್ಕಾರದ ಅನುದಾನಗಳಿಗೆ ಗುದ್ದಲಿಪೂಜೆ ಮಾಡುವುದು ಬಿಟ್ಟರೇ ಬಡವರು,ಕೂಲಿಕಾರ್ಮಿಕರು, ದೀನ ದಲಿತರು ತಮ್ಮ ಮೂಲಭೂತ ಸೌಕರ್ಯಗಳಿಗಾಗಿ ಅಂಗಲಾಚಿ ಬೇಡುವಂತಹ ಪರಿಸ್ಥಿತಿನಿರ್ಮಾಣವಾಗಿದೆ ಎಂದು ಬಿಜೆಪಿ ಮುಖಂಡ ಎಚ್.ಬಿ. ಧರ್ಮರಾಜ್ ಹೇಳಿದರು.
ಹಿಂದೆಯೇ ಇಂದಿರಾ ಕ್ಯಾಂಟೀನ್ ಮಂಜೂರಾಗಿ ಹಳೇ ಪೊಲೀಸ್ ಕ್ವಾಟ್ರಸ್ ತೆರವುಗೊಳಿಸಿಇಂದಿರಾ ಕ್ಯಾಂಟೀನ್ ತೆರೆಯಲುತೀರ್ಮಾನಿಸ ಲಾಯಿತ್ತು. ಆದರೆಅದಕ್ಕೆ ಯಾವ ಕಾನೂನುಅಡಚಣೆ ಯಾಯಿತು ಎಂದು ಗೊತ್ತಾಗುತ್ತಿಲ್ಲ. ತಮ್ಮ ಕೆಲಸಕ್ಕಾಗಿದೂರದಿಂದ ಬರುವಜನಸಾಮಾನ್ಯ ರಿಗೆ ಊಟಕ್ಕಾಗಿ ಅಲೆಯುವಂತಾಗಿದೆ. ಇಂದಿರಾ ಕ್ಯಾಂಟೀನ್ ತೆರದರೆ ಕಡಿಮೆಬೆಲೆಯಲ್ಲಿ ಹಸಿವು ನೀಗಿಸಲು ಅನುಕೂಲವಾಗುತ್ತದೆ ಆದ್ದರಿಂದ ಶಾಸಕರು ಜತೆ ಚರ್ಚಿಸಲಾಗುವುದು. –ಕೆ.ಎಸ್.ಮಂಜೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ
ಶೇ.70ರಷ್ಟು ಕೂಲಿ ಕಾರ್ಮಿಕರು ಬಡವರು ಹೆಚ್ಚಿರುವ ಆಲೂರು ಪಟ್ಟಣದಲ್ಲಿ ಇಂದಿರಾಕ್ಯಾಂಟೀನ್ ಅವಶ್ಯಕತೆ ತುಂಬಾ ಇದೆ.ನಾಲ್ಕೈದು ವರ್ಷಗಳ ಹಿಂದೆಯೇ ಇಂದಿರಾಕ್ಯಾಂಟೀನ್ಆಗಬೇಕಿತ್ತು. ಜನಪ್ರತಿನಿಧಿಗಳ ಇಚ್ಛಾ ಶಕ್ತಿಕೊರೆತೆ ಎದ್ದು ಕಾಣುತ್ತಿದೆ. ಆದ್ದರಿಂದ ಈಗಲಾದರೂ ಇಂದಿರಾ ಕ್ಯಾಂಟೀನ್ ಬಗ್ಗೆ ಶಾಸಕರು ಗಮನ ಹರಿಸಬೇಕಿದೆ. –ಲೋಕೇಶ್ ಅಜ್ಜೆನಹಳ್ಳಿ, ಕಾಂಗ್ರೆಸ್ ಮುಖಂಡ
–ಟಿ.ಕೆ.ಕುಮಾರಸ್ವಾಮಿ ಆಲೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್ಡಿಡಿ
Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ
Lok Sabha elections: ಬೇಲೂರು; ಕೈ ಒಳಜಗಳ, ಜೆಡಿಎಸ್ಗೆ ಲಾಭ?
Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್ ರೇವಣ್ಣ ಪ್ರಚಾರಕ್ಕೆ ಚಾಲನೆ
BJP ಸ್ಥಳೀಯ ಮುಖಂಡರ ಅಸಹಕಾರ: ಬಿಎಸ್ವೈ ಬಳಿ ರಕ್ಷಣೆಗೆ ಮೊರೆಯಿಟ್ಟ ಎಚ್.ಡಿ.ರೇವಣ್ಣ
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ