ಕಗ್ಗತ್ತಲಲ್ಲಿ ಅರಕಲಗೂಡು ಪ್ರವಾಸಿ ಮಂದಿರ


Team Udayavani, Feb 6, 2023, 4:00 PM IST

tdy-19

ಅರಕಲಗೂಡು: ಪಟ್ಟಣದ ಪ್ರವಾಸಿ ಮಂದಿರ ಹಾಗೂ ತಾಲೂಕಿನ ದೇವಾಲಯಗಳ ತವರುರಾಮನಾಥಪುರದ ಪ್ರವಾಸಿ ಮಂದಿರನಿರ್ವಹಣೆ ಕೊರತೆಯಿಂದಾಗಿ ಬಳಲುತ್ತಿದ್ದುಕಳೆದ ಒಂದು ತಿಂಗಳಿಂದ ವಿದ್ಯುತ್‌ಕಡಿತಗೊಂದಿದ್ದು, ರಾತ್ರಿ ವೇಳೆ ಈ ಪ್ರವಾಸಿಮಂದಿರಗಳಲ್ಲಿ ಕತ್ತಲೆ ಕವಿದಿದೆ.

ತಾಲೂಕು ಕೇಂದ್ರದ ಪ್ರವಾಸಿ ಮಂದಿರದನಿರ್ವಹಣೆ ಹೊಣೆ ಲೋಕೋಪ ಯೋಗಿಇಲಾಖೆ ವಹಿಸಿಕೊಂಡಿದೆ. ಸಾಲದೆಂಬಂತೆಪಟ್ಟಣದ ಲೋಕೋಪಯೋಗಿ ಇಲಾಖೆಕಚೇರಿಗೆ ಹೊಂದಿಕೊಂಡಂತೆ ಇದೆ. ವಿದ್ಯುತ್‌ಸಂಪರ್ಕ ಕೂಡ ಕಡಿತಗೊಂಡಿ ಲ್ಲ. ಅದೇಕೋಪ್ರವಾಸಿ ಮಂದಿರಕ್ಕೆ ಮಾತ್ರ ನಿರ್ವಹಣೆಕೊರ ತೆಯಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ಒಂದು ತಿಂಗಳಿಂದ ವಿದ್ಯುತ್‌ ಇಲ್ಲ: ಹಾಸನ- ಹೊಳೆನರಸೀಪುರ ಮಾರ್ಗದಮುಖ್ಯ ರಸ್ತೆ ಬದಿಯಿರುವ ಪಟ್ಟಣದ ಪ್ರವಾಸಿ ಮಂದಿರ ಕಳೆದ ಒಂದುತಿಂಗಳಿನಿಂದ ವಿದ್ಯುತ್‌ ಇಲ್ಲದೆ ರಾತ್ರಿ ವೇಳೆಕತ್ತಲೆಯಲ್ಲಿ ಮುಳುಗಿದೆ. ಕಾವೇರಿ ನದಿದಂಡೆ ಮೇಲಿರುವ ರಾಮನಾಥಪುರದ ಪ್ರವಾಸಿ ಮಂದಿ ರ ಕೂಡ ಕಳೆದ ಆರುತಿಂಗಳಿನಿಂದ ವಿದ್ಯುತ್‌ ಬಿಲ್‌ ಪಾವತಿಸದೆವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದ್ದುರಾತ್ರಿ ವೇಳೆ ಬೂತದ ಬಂಗಲೆಯಾಗಿ ಮಾರ್ಪಾಡಾಗಿದೆ.

ನಿರ್ವಹಣೆ ಇಲ್ಲ : ವಿದ್ಯುತ್‌ ಸೌಲಭ್ಯ ಇಲ್ಲದ ಕಾರಣ ಪ್ರವಾಸಿ ಮಂದಿರಕ್ಕೆ ಬರುವ ಜನರುಬೇಸರ ವ್ಯಕ್ತಪಡಿಸುತ್ತಿದ್ದು ಹಿಡಿಶಾಪ ಹಾಕುತ್ತಿದ್ದಾರೆ. ಅರಕಲಗೂಡು ಪ್ರವಾಸಿ ಮಂದಿರದಶಾಸಕರ ಕೊಠಡಿಗೆ ಹೊಂದಿಕೊಂಡಂತೆ ಪಕ್ಕದಲ್ಲಿರುವ ಶೌಚಗೃಹ ಪಿಟ್‌ಗುಂಡಿ ಮಳೆಗಾಲದಲ್ಲಿ ಉಕ್ಕಿ ಹರಿಯುತ್ತದೆ. ಕಳೆದ ವರ್ಷ ಮಳೆಗಾಲದಲ್ಲಿ ಶೌಚಗೃಹದ ಪಿಟ್‌ಗುಂಡಿಕಟ್ಟಿಕೊಂಡು ಪ್ರವಾಸಿ ಮಂದಿರಕ್ಕೆ ಕಲುಷಿತನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಪ್ರವಾಸಿಮಂದಿರದ ಸಿಬ್ಬಂದಿ ಶೌಚಗೃಹ ಪಕ್ಕದಲ್ಲಿಚರಂಡಿ ತೋಡಿ ಹೊರ ಕಳಿಸಿ, ಮಂದಿರದಲ್ಲಿಜಲಾವೃತವಾಗಿದ್ದ ಕಲುಷಿತ ನೀರನ್ನು ತೋಡಿ ಹೊರ ಹಾಕುವಷ್ಟರಲ್ಲಿ ಸುಸ್ತು ಹೊಡೆಸಿತ್ತು.

ಅಲ್ಲದೆ ಸಿಬ್ಬಂದಿ ವಾಸವಿರುವ ಮನೆ ಪಕ್ಕ, ಅಂದರೆ ಬೆಸ್ತರ ಬೀದಿ ಕಡೆಯ ಕಾಂಪೌಂಡ್‌ಬಿದ್ದುಹೋಗಿ ವರ್ಷಗಳೇ ಕಳೆದಿವೆ ಇದನ್ನುಸರಿಪಡಿಸುವ ಕೆಲಸವನ್ನು ಲೋಕೋ ಪ ಯೋಗಿಇಲಾ ಖೆ ಎಂಜಿನಿಯರ್‌ ಮುಂದಾಗಿಲ್ಲ.ಭೂತದ ಬಂಗಲೆಂತಾಗಿದೆ: ದಕ್ಷಿಣ ಕಾಶಿರಾಮನಾಥಪುರದಲ್ಲಿ ಕಳೆದೆರಡು ತಿಂಗಳಿನಿಂದ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿದೇವಸ್ಥಾನದ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಶ್ರೀ ಕ್ಷೇತ್ರಕ್ಕೆ ಪ್ರವಾಸಿಗರುಆಗಮಿಸುತ್ತಿದ್ದಾರೆ. ದೇವಸ್ಥಾನಕ್ಕೆ ಹೊರಜಿಲ್ಲೆಗಳಿಂದ ಬರುವ ಗಣ್ಯರು ಪ್ರವಾಸಿ ಮಂದಿ ರದಲ್ಲಿ ಉಳಿದುಕೊಳ್ಳುತ್ತಾರೆ. ಆದರೆ, ರಾತ್ರಿ ವೇಳೆ ಕರೆಂಟ್‌ ಇಲ್ಲದ ಕಾರಣಮಂದಿರದತ್ತ ಸುಳಿಯುತ್ತಿಲ್ಲ. ನದಿ ದಂಡೆಮೇಲಿರುವ ಕಾರಣ ಭಯಪಡುವಂತಾಗಿದ್ದು ಪ್ರವಾಸಿ ಮಂದಿರ ಭೂತದ ಬಂಗಲೆಂತಾಗಿದೆ.

ಸರ್ಕಾರ ಸಾರ್ವಜನಿಕರ ತೆರಿಗೆ ಹಣದಿಂದ ಕೋಟಿಗಟ್ಟಲೆ ಅನುದಾನ ವ್ಯಯಿಸಿನಿರ್ಮಿಸಿರುವ ಪ್ರವಾಸಿ ಮಂದಿರಗಳುಪ್ರವಾಸಿಗರ ಪಾಲಿಗೆ ನಿರುಪಯುಕ್ತವಾಗುತ್ತಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳುಹಾಗೂ ಶಾಸಕರು ಇತ್ತ ಗಮನ ಹರಿಸಿವಿದ್ಯುತ್‌ ಬಿಲ್‌ ಪಾವತಿಸಿ ಕರೆಂಟ್‌ ಸಂಪರ್ಕಕೊಡಿಸಲು ಮನಸ್ಸು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸರ್ಕಾರಿ ಕಚೇರಿಗಳಿಗೆ ಹಾಗೂ ಸರ್ಕಾರಿ ಕಟ್ಟಡಕ್ಕೆ ವಿದ್ಯುತ್‌ ಕೊಡಿಸಲಾಗದ ಶಾಸಕರು ಯಾಕಿರ ಬೇಕು? ಇನ್ನು ಶಾಸಕರು ಸಾರ್ವಜನಿಕರ ಕೆಲಸ ಹೇಗೆ ಮಾಡಿಸುತ್ತಾರೆ. ಪ್ರವಾಸಿ ಮಂದಿರಕ್ಕೆ ತೆರಳಿದರೆವಿದ್ಯುತ್‌ ಇಲ್ಲ, ಅಲ್ಲಿಯ ಸಿಬ್ಬಂದಿ ಅಸಹಾಯಕತೆತೋಡಿಕೊಳ್ಳುತ್ತಾರೆ. ತಾಲೂಕಿನ ಸ್ಥಿತಿ ಎಲ್ಲಿಗೆ ಬಂದಿದೆ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎ. ಮಂಜು, ಮಾಜಿ ಸಚಿವ

ಅರಕಲಗೂಡು ಪ್ರವಾಸಿ ಮಂದಿರದ ವಿದ್ಯುತ್‌ ಬಿಲ್‌ ಆಗಾಗ ಪಾವತಿಸಲಾಗುತ್ತಿತ್ತು. ಕಳೆದಮೂರು ತಿಂಗಳಿಂದ ವಿದ್ಯುತ್‌ ಬಿಲ್‌ ಪಾವತಿಸಿಲ್ಲ, 35ಸಾವಿರ ರೂ. ಬಾಕಿ ಇದೆ. ರಾಮನಾಥಪುರ ಪ್ರವಾಸಿಮಂದಿರದ ವಿದ್ಯುತ್‌ ಬಿಲ್‌ 15 ಸಾವಿರ ರೂ. ಬಾಕಿಇದೆ. ಸರ್ಕಾರ ಅನುದಾನ ನೀಡದ ಕಾರಣ ವಿದ್ಯುತ್‌ ಬಿಲ್‌ ಪಾವತಿಸಲು ಸಾಧ್ಯವಾಗಿಲ್ಲ. ಗಣೇಶ್‌, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಅರಕಲಗೂಡು.

ವಿಜಯ್‌ ಕುಮಾರ್‌

ಟಾಪ್ ನ್ಯೂಸ್

U T KHADER

ರಾಹುಲ್ ಗಾಂಧಿ ಅನರ್ಹ ಪ್ರಕರಣ ಸಂಸದೀಯ ನಿಯಮ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ:ಯು.ಟಿ.ಖಾದರ್

Yatindra

ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ: ಡಾ.ಯತೀಂದ್ರ

1-sad-sad-d

64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ

swamiji ticket

ಬೆಂಗಳೂರಿನಲ್ಲಿ ನೇಕಾರರಿಗೆ ಟಿಕೆಟ್‌ನೀಡಲು ಸ್ವಾಮೀಜಿಗಳಿಂದ ಒತ್ತಾಯ

Dark-circle

ಮುಖದ ಅಂದ ಕೆಡಿಸುವ “ಡಾರ್ಕ್ ಸರ್ಕಲ್ಸ್” ನಿವಾರಣೆಗೆ ಈ ಮನೆಮದ್ದು ಬಳಸಿ…

Kharge (2)

ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ

bel defence

ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಮಹತ್ವದ ಒಪ್ಪಂದ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ರವಣ ಬೆಳಗೊಳದ ಕೀರ್ತಿ ಮುಗಿಲೆತ್ತರಕ್ಕೇರಿಸಿದ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಶ್ರವಣ ಬೆಳಗೊಳದ ಕೀರ್ತಿ ಮುಗಿಲೆತ್ತರಕ್ಕೇರಿಸಿದ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಶ್ರವಣಬೆಳಗೊಳದ ಜೈನ ಮಠಕ್ಕೆ ಆಗಮಶಾಸ್ತ್ರಿ ಇಂದ್ರಜೈನ್‌ ಉತ್ತರಾಧಿಕಾರಿ

1-cc

ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

tdy-15

ಪ್ರತಿ ಮನೆಗೆ ಪ್ರಧಾನಿ ಮೋದಿ ಅಭಿವೃದ್ದಿ ಕಾರ್ಯ ತಿಳಿಸುತ್ತೇವೆ  

ಸಂಭಾಷಣೆ ಯಾವುದೇ ರೀತಿಯಲ್ಲಿ ಎಡಿಟ್‌ ಮಾಡಿಲ್ಲ: ರೇವಣ್ಣ

ಸಂಭಾಷಣೆ ಯಾವುದೇ ರೀತಿಯಲ್ಲಿ ಎಡಿಟ್‌ ಮಾಡಿಲ್ಲ: ರೇವಣ್ಣ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

U T KHADER

ರಾಹುಲ್ ಗಾಂಧಿ ಅನರ್ಹ ಪ್ರಕರಣ ಸಂಸದೀಯ ನಿಯಮ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ:ಯು.ಟಿ.ಖಾದರ್

Yatindra

ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ: ಡಾ.ಯತೀಂದ್ರ

1-sad-sad-d

64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ

swamiji ticket

ಬೆಂಗಳೂರಿನಲ್ಲಿ ನೇಕಾರರಿಗೆ ಟಿಕೆಟ್‌ನೀಡಲು ಸ್ವಾಮೀಜಿಗಳಿಂದ ಒತ್ತಾಯ

Dark-circle

ಮುಖದ ಅಂದ ಕೆಡಿಸುವ “ಡಾರ್ಕ್ ಸರ್ಕಲ್ಸ್” ನಿವಾರಣೆಗೆ ಈ ಮನೆಮದ್ದು ಬಳಸಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.