ಪ್ಲಾಸ್ಟಿಕ್‌ ತ್ಯಾಜ್ಯ ಸೃಷ್ಟಿ: ಭಾರತಕ್ಕೆ ಎರಡನೇ ಸ್ಥಾನ


Team Udayavani, Nov 14, 2022, 4:37 PM IST

tdy-15

ಹಾಸನ: ಪ್ಲಾಸ್ಟಿಕ್‌ ಮಾಲಿನ್ಯವು ಹೆಚ್ಚಿರುವ ಅಗ್ರಗಣ್ಯ 10 ದೇಶಗಳಲ್ಲಿ ಭಾರತ 2ನೇ ಸ್ಥಾನದಲ್ಲಿರುವುದು ಆತಂಕಕಾರಿ ಬೆಳವಣಿಗೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಸಂಚಾಲಕ ಅಹಮದ್‌ ಹಗರೆ ಅವರು ಆತಂಕ ವ್ಯಕ್ತಪಡಿಸಿದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ಹಾಸನದ ಜಯನಗರ ಘಟಕ ಹಾಗೂ ಹಾಸನ ತಾಲೂಕು ಸಮಿತಿಯ ವಿವಿಧ ಸಂಘಟನೆಗಳ ಸಂಯು ಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್‌ ಬಂಧನ – ಪರಿಸರ ಸ್ಪಂದನ ಒಂದು ಪ್ರಾಯೋಗಿಕ ಚಟುವಟಿಕೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತದ ಪರಿಸರ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ 2019-20ರಲ್ಲಿ ಭಾರತದಲ್ಲಿ ಸುಮಾರು 34 ಲಕ್ಷ ಟನ್‌, 2021-22ರ ಅವಧಿಯಲ್ಲಿ ಭಾರತದಲ್ಲಿ 42 ಲಕ್ಷ ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವು ಸೃಷ್ಟಿಯಾಗಿದೆ. ಅಂದರೆ ಪ್ರತಿ ಮನುಷ್ಯ ವಾರ್ಷಿಕವಾಗಿ 3 ಕೆ.ಜಿ. ಪ್ಲಾಸ್ಟಿಕ್‌ ಕಸವನ್ನ ಬೀದಿಗೆಸೆಯುತ್ತಿದ್ದಾನೆ. ಈ ಪ್ಲಾಸಿಕ್‌ ಮೈಕ್ರೋ ಪ್ಲಾಸ್ಟಿಕ್ ಗಳಾಗಿ ಪುನಃ ನೀರಿನ ಮೂಲಕ, ಆಹಾರದ ಮೂಲಕ ಹಾಗೂ ಗಾಳಿಯ ಮೂಲಕ ಮಾನವನೂ ಸೇರಿದಂತೆ ಎಲ್ಲ ಜೀವಿಗಳ ದೇಹ ಸೇರಿ ಗಂಟಲುರಿತ, ಕ್ಯಾನ್ಸರ್‌, ಅಸ್ತಮಾದಂತಹ ರೋಗಗಳು ಉಲ್ಬಣ ಗೊಳ್ಳಲು ಕಾರಣವಾಗಿದೆ ಎಂದು ವಿವರಿಸಿದರು.

ತ್ಯಾಜ್ಯಗಳ ವರ್ಗೀಕರಣ: ಹಾಸನದ ಜಯನಗರ ರಿಂಗ್‌ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ ರಸ್ತೆಯಿಂದ ಬಡಾವಣೆಯ ವಿವಿಧ ಮಾರ್ಗಗಳಲ್ಲಿ ಪ್ಲಾಸ್ಟಿಕ್‌ ಮಾಲಿನ್ಯದ ಅಪಾಯಕಾರಿ ಗುಣಗಳನ್ನ ಜನತೆಗೆ ತಿಳಿ ಹೇಳುವ ಪ್ಲೆಕಾರ್ಡ್‌, ಹಾಡು, ಘೋಷಣೆ ಹಾಕಿ ಪ್ರಮುಖ ಬೀದಿಯಲ್ಲಿ ಜಾಗೃತಿ ಜಾಥಾ ಸಂಚರಿಸಿ ಮನೆಗಳಿಂದ, ಬೀದಿಗಳಿಂದ, ಅಂಡಿಗಳಿಂದ ಪ್ಲಾಸ್ಟಿಕ್‌ ಸಂಗ್ರಹಿಸಿ ಮರುಬಳಕೆ ಅಂದರೇ ನವೀಕರಿಸುವ, ಏಕಬಳಕೆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ವರ್ಗೀಕರಿಸಲಾಯಿತು. 2ಚೀಲ ಮರು ನವೀಕರಿಸಬಲ್ಲ ಪ್ಲಾಸ್ಟಿಕ್‌ ಹಾಗೂ 30ಕ್ಕೂ ಅಧಿಕ ಇಕೋ ಬಾಟಲ್‌ ಬ್ರಿಕ್ಕಿಂಗ್‌ ಮಾಡಲಾಯಿತು.

ಈ ಕ್ರಿಯೆಯಲ್ಲಿ ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ಎಸ್‌.ಎಸ್‌.ಪಾಷಾ, ಖಜಾಂಚಿ ಗಿರಿಜಾಂಬಿಕ, ಸ್ನೇಹ ಸಂಪದ ಮಹಿಳಾ ಸಮಿತಿ ಅಧ್ಯಕ್ಷೆ ಮಮತಾ, ಶಿವು, ರೋಟರಿ ಮಿಡ್‌ಟೌನ್‌ನ ರಮಾಕಾಂತ್‌, ಇನ್ನರ್‌ವ್ಹೀಲ್‌ ಕ್ಲಬ್‌ನ ಅಧ್ಯಕ್ಕೆ ಭವ್ಯ, ಜಾನಕಿ, ಬಿಜಿಎಸ್‌ ಜಿಲ್ಲಾಧ್ಯಕ್ಷ ಕಾಂತರಾಜು, ಕಾರ್ಯದರ್ಶಿ ಜಯಪ್ರಕಾಶ, ತಾಲೂಕು ಅಧ್ಯಕ್ಷೆ ರಾಧಾ, ತಾಲೂಕು ಕಾರ್ಯದರ್ಶಿ ವನಜಾಕ್ಷಿ, ಲಯನ್ಸ್‌ ಕ್ಲಬ್‌ನ ನಾಗೇಶ್‌, ಕಲಾವಿದ ದೇಸಾಯಿ, ಸ್ಕೌಟ್‌ ಅಂಡ್‌ ಗೈಡ್ಸ್‌ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

BCCI Central Contracts

ಕೇಂದ್ರ ಗುತ್ತಿಗೆ ಪ್ರಕಟಿಸಿದ ಬಿಸಿಸಿಐ: ಜಡೇಜಾಗೆ ಬೋನಸ್, ರಾಹುಲ್ ಗೆ ಭಾರೀ ಹಿನ್ನಡೆ

“ನೀವು ಯಾರನ್ನಾದರೂ ಡೇಟ್‌ ಮಾಡಿ”.. ಸಮಂತಾಗೆ ಅಭಿಮಾನಿಯ ಮನವಿ; ನಟಿಯ ಪ್ರತಿಕ್ರಿಯೆ ವೈರಲ್

“ನೀವು ಯಾರನ್ನಾದರೂ ಡೇಟ್‌ ಮಾಡಿ”.. ಸಮಂತಾಗೆ ಅಭಿಮಾನಿಯ ಮನವಿ; ನಟಿಯ ಪ್ರತಿಕ್ರಿಯೆ ವೈರಲ್

2-chikmagaluru

ಚಿಕ್ಕಮಗಳೂರು: ಕಾರಿನಲ್ಲಿ ಮದ್ಯದ ಬಾಟಲ್, ಸಿ.ಟಿ.ರವಿ ಕ್ಯಾಲೆಂಡರ್‌, ಲಾಂಗ್ ಪತ್ತೆ

4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!

4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!

TDY-1

ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್‌ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ

Malayalam-actor-innocent

ಮಲಯಾಳಂ ಖ್ಯಾತ ನಟ ಇನೋಸೆಂಟ್ ನಿಧನ: ದುಃಖದಲ್ಲಿ ಮಾಲಿವುಡ್ ಚಿತ್ರರಂಗ

bjp cong election fight

ವಿಧಾನ-ಕದನ 2023: ಪ್ರಚಾರಕ್ಕೆ ಎಲ್ಲಿದೆ ದಿನಾಂಕದ ಭಾರ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

ಮುಸ್ಲಿಮರ ಮೀಸಲಾತಿ ರದ್ದು : ಚುನಾವಣೆ ಗಿಮಿಕ್‌

ಶ್ರವಣ ಬೆಳಗೊಳದ ಕೀರ್ತಿ ಮುಗಿಲೆತ್ತರಕ್ಕೇರಿಸಿದ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಶ್ರವಣ ಬೆಳಗೊಳದ ಕೀರ್ತಿ ಮುಗಿಲೆತ್ತರಕ್ಕೇರಿಸಿದ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಶ್ರವಣಬೆಳಗೊಳದ ಜೈನ ಮಠಕ್ಕೆ ಆಗಮಶಾಸ್ತ್ರಿ ಇಂದ್ರಜೈನ್‌ ಉತ್ತರಾಧಿಕಾರಿ

1-cc

ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

tdy-15

ಪ್ರತಿ ಮನೆಗೆ ಪ್ರಧಾನಿ ಮೋದಿ ಅಭಿವೃದ್ದಿ ಕಾರ್ಯ ತಿಳಿಸುತ್ತೇವೆ  

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

BCCI Central Contracts

ಕೇಂದ್ರ ಗುತ್ತಿಗೆ ಪ್ರಕಟಿಸಿದ ಬಿಸಿಸಿಐ: ಜಡೇಜಾಗೆ ಬೋನಸ್, ರಾಹುಲ್ ಗೆ ಭಾರೀ ಹಿನ್ನಡೆ

“ನೀವು ಯಾರನ್ನಾದರೂ ಡೇಟ್‌ ಮಾಡಿ”.. ಸಮಂತಾಗೆ ಅಭಿಮಾನಿಯ ಮನವಿ; ನಟಿಯ ಪ್ರತಿಕ್ರಿಯೆ ವೈರಲ್

“ನೀವು ಯಾರನ್ನಾದರೂ ಡೇಟ್‌ ಮಾಡಿ”.. ಸಮಂತಾಗೆ ಅಭಿಮಾನಿಯ ಮನವಿ; ನಟಿಯ ಪ್ರತಿಕ್ರಿಯೆ ವೈರಲ್

2-chikmagaluru

ಚಿಕ್ಕಮಗಳೂರು: ಕಾರಿನಲ್ಲಿ ಮದ್ಯದ ಬಾಟಲ್, ಸಿ.ಟಿ.ರವಿ ಕ್ಯಾಲೆಂಡರ್‌, ಲಾಂಗ್ ಪತ್ತೆ

4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!

4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!

TDY-1

ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್‌ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.