ನೂತನ ಅಧ್ಯಕ್ಷರೇ ಸಮಸ್ಯೆಗಳತ್ತ ಗಮನ ಹರಿಸಿ

ಕಸ ಸಂಗ್ರಹ,ಕುಡಿಯುವ ನೀರು, ಮಳಿಗೆಗಳ ಹರಾಜು, ಮಾರುಕಟ್ಟೆ ನಿರ್ಮಾಣ ನನೆಗುದಿಗೆ

Team Udayavani, Nov 11, 2020, 6:39 PM IST

ನೂತನ ಅಧ್ಯಕ್ಷರೇ ಸಮಸ್ಯೆಗಳತ್ತ ಗಮನ ಹರಿಸಿ

ಚನ್ನರಾಯಪಟ್ಟಣ ಪುರಸಭೆಯ 23 ವಾರ್ಡ್‌ಗೆ ಪೂರೈಕೆ ಆಗದ 3ನೇ ಹಂತದ ಕುಡಿಯುವ ನೀರಿನ ಯೋಜನೆ.

ಚನ್ನರಾಯಪಟ್ಟಣ: ಎರಡು ವರ್ಷದ ನಂತರಪುರಸಭೆ ಆಡಳಿತ ಮಂಡಳಿ ರಚನೆ ಆಗಿದ್ದು, ನೂತನ ಅಧ್ಯಕ್ಷ ಎಚ್‌.ಎನ್‌.ನವೀನ್‌ ಮುಂದೆ ಸಮಸ್ಯೆಗಳ ಸರಮಾಲೆಯೇ ಇದೆ. ಇದನ್ನು ಎಷ್ಟರ ಮಟ್ಟಿಗೆ ಬಗೆ ಹರಿಸುತ್ತಾರೆ ಎನ್ನುವುದೇ ಈಗಿನ ಪ್ರಶ್ನೆ.

ಮೊದಲಿಗೆ ಪುರಸಭೆ ವ್ಯಾಪ್ತಿಯ ಇ ಖಾತೆಯಿಂದ ನಗರವಾಸಿಗರ ಜೋಬಿಗೆ ಕತ್ತರಿ ಬೀಳುತ್ತಿದೆ, ಹಲವುವಾರ್ಡ್‌ನಲ್ಲಿನ ಮೂಲ ನಿವಾಸಿಗಳ ಮನೆಗಳು ಇ ಖಾತೆಯಾಗಿಲ್ಲ, ಅವರು ದುಬಾರಿ ಹಣ ನೀಡಿ ಖಾತೆ ಮಾಡಿಸಿಕೊಳ್ಳುವುದು ಕಷ್ಟದ ಕೆಲಸವಾಗಿದೆ. ನಿವೇಶನಹೊಂದಿರುವವರು ಬ್ಯಾಂಕ್‌ನಲ್ಲಿ ಸಾಲ ಪಡೆಯಲುಇ ಖಾತೆ ಮಾಡಿಸುತ್ತಿದ್ದಾರೆ. ಉಳಿದವರು ಹಾಗೆ ಮನೆ ಕಟ್ಟುತ್ತಿದ್ದಾರೆ.

ತಲೆ ನೋವಾಗುವ ಖಾತೆ: ಮೂರು ದಶಕದ ಹಿಂದೆ ಪುರಸಭೆ ವ್ಯಾಪ್ತಿಗೆ ಸೇರಿದ ಜನಿವಾರ ಗ್ರಾಪಂ ವ್ಯಾಪ್ತಿಯ ಗೂರಮಾರನಹಳ್ಳಿ, ಡಿ.ಕಾಳೇನಹಳ್ಳಿಗ್ರಾಪಂ ವ್ಯಾಪ್ತಿಯ ಗೂರನಹಳ್ಳಿಯ ನಿವೇಶನಗಳ ಇ ಖಾತೆ ಮಾಡಿಕೊಡಲು ಪುರಸಭೆ ಅಧಿಕಾರಿಗಳು ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಇದೆ. ಅಧಿಕಾರಿಗಳು ಆಯಾ ಗ್ರಾಪಂನಿಂದ ಕಡತ ತರಿಸಿಕೊಂಡು ಸಮೂಹಿಕವಾಗಿ ಇ ಖಾತೆ ಮಾಡಬೇಕಿತ್ತು. ಆದರೆ, ಈ ಕೆಲಸ ಮಾಡುತ್ತಿಲ್ಲ. ಈ ಸಮಸ್ಯೆ ಅಧ್ಯಕ್ಷರು ಯಾವ ರೀತಿ ಬಗೆಹರಿಸುತ್ತಾರೆಕಾದು ನೋಡಬೇಕು.

ಪುರಸಭೆ ವ್ಯಾಪ್ತಿ ತರಬೇಕಿದೆ: ಮೈಸೂರು ರಸ್ತೆ, ಗದ್ದೆ ಬಯಲು ಪ್ರದೇಶ, ಡಿ.ಕಾಳೇನಹಳ್ಳಿ ರಸ್ತೆಯಲ್ಲಿನೂರಾರು ವಾಣಿಜ್ಯ ಮಳಿಗೆಗಳು,ಕಲ್ಯಾಣ ಮಂಟಪ, ಸಿನಿಮಾ ಥಿಯೇಟರ್‌ಗಳು ಪುರಸಭೆಯಿಂದ ವಿದ್ಯುತ್‌, ನೀರು, ಯುಜಿಡಿ ಇತರೆ ಸೌಲಭ್ಯಪಡೆಯುತ್ತಿವೆ. ಆದರೆ, ತೆರಿಗೆ ಮಾತ್ರ ಗ್ರಾಪಂಗೆನೀಡುತ್ತಿದ್ದಾರೆ. ಇದರಿಂದ ಕೋಟ್ಯಂತರ ರೂ.ಆದಾಯ ಪುರಸಭೆಕೈತಪ್ಪುತ್ತಿದೆ. ಇದನ್ನು ಸರಿಪಡಿಸುವಹೊಣೆ ನೂತನ ಅಧ್ಯಕ್ಷರ ಮೇಲಿದೆ.

ಮಳಿಗೆ ಹರಾಜು ಯಾವಾಗ.?: ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆಹೊಂದಿಕೊಂಡಿರುವ ಪುರಸಭೆಗೆ ಸೇರಿದ ನೂರಾರು ವಾಣಿಜ್ಯ ಮಳಿಗೆಗಳು ಹರಾಜು ಮಾಡದೇ, ನಾಲ್ಕುವರ್ಷದಿಂದ ಕೆಲವು ಪಾಳು ಬಿದ್ದಿವೆ. ಇನ್ನು ಕೆಲವುಅಕ್ರಮವಾಗಿ ಪ್ರಭಾವಿಗಳು ವ್ಯವಹರಿಸುತ್ತಿದ್ದಾರೆ, ಇವುಗಳನ್ನು ಹರಾಜು ಮಾಡಿದರೆ ಮಾಸಿಕ ಲಕ್ಷಾಂತರ ರೂ. ಆದಾಯ ಪುರಸಭೆಗೆ ಬರಲಿದೆ.

ವಾಣಿಜ್ಯ ಸಂಕೀರ್ಣ ತೆರವು ಮಾಡಿ: ರಾಷ್ಟ್ರೀಯ ಹೆದ್ದಾರಿ ಮುತ್ತುತ್ತರಾಯ ದೇವಾಲಯ ಮುಂಭಾಗದ ಕುವೆಂಪು ವಾಣಿಜ್ಯ ಮಳಿಗೆ ತೆರವು ಮಾಡಲು ಈಗಾಗಲೇ 5 ವರ್ಷದ ಹಿಂದೆ ಟೆಂಡರ್‌ ಪ್ರಕ್ರಿಯೆ ಮುಕ್ತಾಯವಾಗಿದ್ದರೂ ಅವುಗಳ ತೆರವು ಮಾಡಲಾಗಿಲ್ಲ, ವಿದ್ಯುತ್‌ ಸಂಪರ್ಕ ಕಡಿತಮಾಡಿದ್ದರೂ ವಾಣಿಜ್ಯ ಮಳಿಗೆಯಲ್ಲಿ ಅಕ್ರಮವಾಗಿ ಸೇರಿಕೊಂಡಿರುವವರು ಈವರೆಗೂ ಖಾಲಿ ಮಾಡಿಲ್ಲ.ಈ ಬಗ್ಗೆ ಅಧ್ಯಕ್ಷರು ಗಮನ ಹರಿಸಬೇಕಾಗಿದೆ.

ಭುವನೇಶ್ವರಿ ಮಾರುಕಟ್ಟೆ ನಿರ್ಮಿಸಿ: ಪುರಸಭೆ ಕಚೇರಿ ಮುಂಭಾಗದಲ್ಲಿನ ಭುವನೇಶ್ವರಿ ಮಾರುಕಟ್ಟೆಯಲ್ಲಿ ನೂರಕ್ಕೂ ಹೆಚ್ಚು ಮಳಿಗೆ ಇದ್ದು, ನಗರೋತ್ಥಾನ ಯೋಜನೆಯಲ್ಲಿ ನೂತನ ಮಳಿಗೆನಿರ್ಮಾಣ ಮಾಡುವ ಉದ್ದೇಶದಿಂದ ವರ್ತಕರನ್ನು ಖಾಲಿ ಮಾಡಿಸಿ, ಕಟ್ಟಡ ತೆರವು ಮಾಡಿ ವರ್ಷ ಕಳೆದರೂ, ಈ ಬಗ್ಗೆ ಪುರಸಭೆ ಗಮನ ಹರಿಸುತ್ತಿಲ್ಲ. ಇಲ್ಲಿ ಅಂಗಡಿ ಮಳಿಗೆ ಹೊಂದಿದ್ದ ವರ್ತಕರು ಬೀದಿ ಪಾಲಾಗಿದ್ದಾರೆ.

ಉದ್ಘಾಟಿಸಿ 3 ವರ್ಷವಾದ್ರೂ ನೀರು ಪೂರೈಸಿಲ್ಲಮೂರನೇ ಹಂತದ ಕುಡಿಯುವ ನೀರಿನ ಯೋಜನೆ ಉದ್ಘಾಟನೆಗೊಂಡು ಮೂರು ವರ್ಷ ಕಳೆದರೂ ಪುರಸಭೆಯ 23 ವಾರ್ಡ್‌ಗೆ ನೀರು ಸರಬರಾಜು ಮಾಡಿಲ್ಲ, ಇನ್ನು ಕಸದ ಸಮಸ್ಯೆ ಹೇಳತೀರದಾಗಿದೆ. ಮನೆ ಕಸ ಸರಿಯಾಗಿ ಸಂಗ್ರಹ ಮಾಡುತ್ತಿಲ್ಲ. ವಾರ್ಡ್‌ನಲ್ಲಿ, ರಸ್ತೆ ಬದಿ, ಕಸ ಶೇಖರಣೆಯಾಗಿ ರೋಗ ಭೀತಿ ಕಾಡುತ್ತಿದೆ. ಒಳಚರಂಡಿ ನೀರು ಗದ್ದೆರಾಮೇಶ್ವರ ದೇವಾಲಯದ ಸಮೀಪ ಶೇಖರಣೆ ಆಗುತ್ತಿದ್ದು, ವೈಜ್ಞಾನಿಕವಾಗಿ ಶುದ್ಧೀಕರಣ ಮಾಡಲಾಗುತ್ತಿಲ್ಲ. ಈ ಬಗ್ಗೆ ನೂತನ ಅಧ್ಯಕ್ಷರ ಮುಂದೆ ನೂರಾರು ಸಮಸ್ಯೆಗಳ ಸರಮಾಲೆ ಇದ್ದು, ಇವುಗಳನ್ನು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದು ಪಟ್ಟಣದ ಸಾರ್ವಜನಿಕರ ಪ್ರಶ್ನೆಯಾಗಿದೆ.

ಪಟ್ಟಣದಲ್ಲಿ ಸಾಕಷ್ಟು ಸಮಸ್ಯೆಗಳು ಇರುವುದು ಕಣ್ಣ ಮುಂದಿದೆ. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗೆ ಮೂಲ ಕಾರಣ ತಿಳಿದು ಬಗೆ ಹರಿಸಲಾಗುವುದು, ಅಂಗಡಿ ಮಳಿಗೆ ಹರಾಜು ಸೂಸೂತ್ರವಾಗಿ ಮಾಡಲಾಗುವುದು, ಪ್ರತಿ ತಿಂಗಳು ಮಳಿಗೆಬಾಡಿಗೆ ವಸೂಲಿಗೆ ಪ್ರಾಮುಖ್ಯತೆ ನೀಡಲಾಗುವುದು, ದೀಪಾವಳಿ ಹಬ್ಬದ ನಂತರ ಹಂತವಾಗಿ ಸಮಸ್ಯೆಗಳ ಬಗೆಹರಿಸಲು ಮುಂದಾಗುತ್ತೇನೆ. ಎಚ್‌.ಎನ್‌.ನವೀನ್‌, ಪುರಸಭೆ ನೂತನ ಅಧ್ಯಕ್ಷ

 

ಶಾಮಸುಂದರ್ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

9

Lok Sabha Election: ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ 

banHassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.