ರೆಡಿಯೋ ಕಾಲರ್ ಕಾರ್ಯಾಚರಣೆ ಯಶಸ್ವಿ
Team Udayavani, Jan 28, 2021, 6:22 PM IST
ಸಕಲೇಶಪುರ: ಒಂದು ಕಾಡಾನೆಗೆ ರೆಡಿಯೋ ಕಾಲರ್ ಅಳವಡಿಸುವ ಕೊನೆಯ ಹಂತದ ಕಾರ್ಯಾಚರಣೆ ಸಿಬ್ಬಂದಿ ಹಾಗೂ ಸಾಕಾನೆಗಳನ್ನು ಹೈರಾಣಾಗಿಸಿತು. ಇಂದು ರೆಡಿಯೋ ಕಾಲರ್ ಅಳವಡಿಸಲೇ ಬೇಕು ಎಂಬ ಸವಾಲಿನೊಂದಿಗೆ ಬೆಳಗ್ಗೆಯಿಂದಲೇ ವಿರಾಮವಿಲ್ಲದೆ, ಸತತವಾಗಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಸಂಜೆಯಾದ್ರೂ, ಕಾಡಾನೆ ಕಾಣ ಸಿಲಿಲ್ಲ.
ಒಂದೆಡೆ ಬಿಸಿಲಿನ ಝಳ, ಕಾಡಾನೆಗಳು ಎಲ್ಲಿ ನಮ್ಮ ಮೇಲೆ ದಾಳಿ ಮಾಡುತ್ತವೋ ಎಂಬ ಆತಂಕದ ನಡುವೆಯೇ ಕಾರ್ಯಾಚರಣೆ ನಡೆಸಲಾಯಿತು. ಗುರುವಾರಕ್ಕೆ ಕಾರ್ಯಾಚರಣೆ ಮುಂದೂಡಿದಲ್ಲಿ ಸಾಕಾನೆಗಳಿಗೆ ವಿಶ್ರಾಂತಿ ಇಲ್ಲದಂತಾಗುವುದರಿಂದ ಸಂಜೆ ಮತ್ತಷ್ಟು ಕಠಿಣವಾಗಿ ಕಾರ್ಯಾಚರಣೆ ಮಾಡಲಾಯಿತು.
ಇದನ್ನೂ ಓದಿ:ಕಾಟಿಪಳ್ಳ : ಬೈಕ್ ಸವಾರನಿಗೆ ಚೂರಿ ಇರಿತ ಪ್ರಕರಣ ; ಸುರತ್ಕಲ್ ಪೊಲೀಸರಿಂದ ಮೂವರ ಬಂಧನ
ಅಂತಿಮವಾಗಿ ಲಿಂಗಾಪುರ ಗ್ರಾಮದ ಮಲ್ಲೇಶ್ ಗೌಡರ ಕಾಫಿ ತೋಟದಲ್ಲಿ ಹೆಣ್ಣಾನೆಗೆ ಅರವಳಿಕೆ ಮದ್ದು ನೀಡುವಲ್ಲಿ ಶೂಟರ್ ವೆಂಕಟೇಶ್ ಯಶಸ್ವಿಯಾದರು. ನಂತರ ಕಾಡಾನೆಗೆ ಸಾಕಾನೆಗಳ ಸಹಾಯದಿಂದ ರೇಡಿಯೋ ಕಾಲರ್ ಅಳವಡಿಸಿ ಕಾಡಿಗೆ ಬಿಡಲಾಯಿತು.