ಸ್ವಲ್ಪ ಓದು-ಸ್ವಲ್ಪ ಮೋಜು ಅರ್ಥಪೂರ್ಣ ಪರಿಕಲ್ಪನೆ
Team Udayavani, Apr 29, 2019, 3:10 PM IST
ಹಾನಗಲ್ಲ: ಹೇರೂರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಸಂಭ್ರಮ ಕಾರ್ಯಕ್ರಮವನ್ನು ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಂ.ಬೇವಿನಮರದ ಉದ್ಘಾಟಿಸಿದರು.
ಹಾನಗಲ್ಲ: ಬೇಸಿಗೆ ಸಂಭ್ರಮದಿಂದ ಕಳೆಯಲು ಇಲಾಖೆ ‘ಸ್ವಲ್ಪ ಓದು-ಸ್ವಲ್ಪ ಮೋಜು’ ಎನ್ನುವ ವಿನೂತನ ಯೋಜನೆ ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಂ.ಬೇವಿನಮರದ ಸಲಹೆ ನೀಡಿದರು.
ತಾಲೂಕಿನ ಹೇರೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ವಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ನಡೆಯುತ್ತಿರುವ 2019-20ನೇ ಸಾಲಿನ ರಜಾ ಅವಧಿಯ ಸ್ವಲ್ಪ ಓದು ಸ್ವಲ್ಪ ಮೋಜು ಪರಿಕಲ್ಪನೆಯ ಬೇಸಿಗೆ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಮನೆಗಿಂತ ಶಾಲೆಯ ಚಟುವಟಿಕೆಗಳು ಆಕರ್ಷಿಸುವಂತೆ ಪ್ರೇರೇಪಿಸಲು ಮತ್ತು ಮಕ್ಕಳು ರಜಾ ಅವಧಿಯಲ್ಲಿ ಕಲಿತದ್ದನ್ನು ಮರೆತು ಹೋಗುವುದನ್ನು ತಪ್ಪಿಸಲು ಈ ಯೋಜನೆ ಸಹಕಾರಿಯಾಗಿದೆ. ಹೀಗಾಗಿ ಆರು ಮತ್ತು ಏಳನೇ ತರಗತಿಯ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಮಕ್ಕಳು ಬೇಸಿಗೆಯನ್ನು ಸಂಭ್ರಮದಿಂದ ಕಳೆಯಲು ಪ್ರತಿ ವಾರವೂ ಕುಟುಂಬ, ನೀರು, ಆಹಾರ, ಆರೋಗ್ಯ ಮತ್ತು ನೈರ್ಮಲ್ಯ ಹಾಗೂ ಪರಿಸರ ಎನ್ನುವ ಒಂದೊಂದು ವಿಷಯದಂತೆ ಐದು ವಿಷಯಗಳನ್ನು ಮಕ್ಕಳು ಮೋಜಿನೊಂದಿಗೆ ಸ್ವಲ್ಪ ಅಭ್ಯಾಸವನ್ನು ಕಲಿಯುವಂತೆ ಮಾಡುವ ಮೂಲಕ ಶಿಕ್ಷಕರು ಮಕ್ಕಳ ಕಲಿಕೆಯನ್ನು ದೃಢೀಕರಿಸಬೇಕು ಎಂದರು.
ಸಿ.ಆರ್.ಪಿ.ರವೀಂದ್ರ ಕರಡಿ ಇದ್ದರು. ಬೇಸಿಗೆ ಸಂಭ್ರಮ ಶಿಕ್ಷಕಿ ವೀಣಾ ಅಸುಂಡಿ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್