ಬಸವಣ್ಣ ದೇವರ ಮಹಾ ರಥೋತ್ಸವಕ್ಕೆ ಚಾಲನೆ
Team Udayavani, Feb 24, 2020, 3:26 PM IST
ಬಂಕಾಪುರ: ಪಟ್ಟಣದ ಕೊಟ್ಟಗೇರಿಯ ಶ್ರೀ ಬಂಗಾರ ಬಸವಣ್ಣ ದೇವರ 35ನೇ ವರ್ಷದ ಜಾತ್ರೋತ್ಸವ ಅಂಗವಾಗಿ ನಡೆದ ಬಂಗಾರ ಬಸವಣ್ಣ ದೇವರ ಮಹಾ ರಥೋತ್ಸವಕ್ಕೆ ಅರಳೆಲೆ ಮಠದ ಶ್ರೀ ರೇವಣಸಿದ್ಧೇಶ್ವರ ಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಶ್ರೀ ಬಂಗಾರ ಬಸವಣ್ಣ ದೇವರ ರಥೋತ್ಸವ ಭಕ್ತ ಜನಸಾಗರದ ಮಧ್ಯ ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿ ಬಂದಿತು. ಭಕ್ತರು ರಥೋತ್ಸವಕ್ಕೆ ಹೂವಿನಮಾಲೆ, ಹಣ್ಣು, ಕಾಯಿ, ಉತ್ತತ್ತಿ ಸಮರ್ಪಿಸಿ ತಮ್ಮ ಭಕ್ತಿ ನಮನ ಸಲ್ಲಿಸಿದರು. ತನ್ನಿಮಿತ್ಯ ಪ್ರಾಥ:ಕಾಲ ಶ್ರೀಬಂಗಾರ ಬಸವಣ್ಣ ದೇವರಿಗೆ ಭಕ್ತ ಮಹೋದಯರಿಂದ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮುತ್ತೆ$çದಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಗಂಗಾಧರ ಬಡ್ಡಿ, ಜಿಪಂ ಮಾಜಿ ಸದಸ್ಯ ಎಸ್.ಬಿ. ಗಚ್ಚಿನಮಠ, ದೇವಸ್ಥಾನದ ಶಾಸ್ತ್ರೀಜಿ ರಾಚಯ್ಯ ಆದವಾನಿಮಠ, ಬಸಪ್ಪ ಸೊಪ್ಪಿನ, ಈರಣ್ಣ ಅಂಗಡಿ, ಶಿವಾನಂದ ಎಲಿಗಾರ, ಮಲ್ಲೇಶಪ್ಪ ಬಡ್ಡಿ, ಸತೀಷ ವನಹಳ್ಳಿ, ಮಲ್ಲೇಶಪ್ಪ ಬಂಗಿ, ಈರಪ್ಪ ಕೋಣನತಂಬಗಿ, ಚನ್ನವೀರಪ್ಪ ಎಲಿಗಾರ, ಫಕ್ಕೀರೇಶ ಸಣ್ಣಮನಿ, ಗದಿಗಯ್ಯ ಹುಣಸಿಕಟ್ಟಿಮಠ ಸೇರಿದಂತೆ ಬಿಸನಳ್ಳಿ ಕಾಶಿ ಪೀಠದ ವೇದ ಪಾಠಶಾಲೆಯ ಮಕ್ಕಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು