ಕಾಂಗ್ರೆಸ್ ಮಹಾ ಅಲೆ ಪ್ರಾರಂಭವಾಗಿದೆ: ಪ್ರಜಾಧ್ವನಿ ಯಾತ್ರೆಯಲ್ಲಿ ಡಿ.ಕೆ. ಶಿವಕುಮಾರ್

ಬನ್ನಿ ಧಮ್ ಇದೆ ತೋರಿಸುತ್ತೇವೆ.... ಸಿಎಂಗೆ ಸವಾಲು

Team Udayavani, Jan 19, 2023, 3:41 PM IST

1-fsadfsadad

ಹಾವೇರಿ: ಜನರ ಧ್ವನಿ, ಭಾವನೆ , ಜನರ ಸಮಸ್ಯೆ, ನೋವು ಎಲ್ಲದರ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ನಿಮಗೆ ಶಕ್ತಿ ಕೊಡೋದೇ ಪ್ರಜಾಧ್ವನಿ ಯಾತ್ರೆ ಯಾತ್ರೆಯ ಉದ್ದೇಶ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಗುರುವಾರ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈಗ ಎಲ್ಲಾ ಕಡೆ ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಹಾವೇರಿ ಕಾರ್ಯಕ್ರಮ ಬಹಳ ಉತ್ತಮವಾಗಿ ನಡೆಯಿತು. ಪ್ರತಿ ದಿನ ಜನರ ಸಾಗರವಾಗಿ ಕಾಂಗ್ರೆಸ್ ಮಹಾ ಅಲೆ ಪ್ರಾರಂಭವಾಗಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಜನ ಪ್ರಾಣ ಕಳೆದುಕೊಂಡರು. ರೈತರ ಆದಾಯ ಡಬಲ್ ಮಾಡಲಿಲ್ಲ. ಅದಕ್ಕೆ ಜನ‌ ನಿಮಗೆ ಓಟ್ ಕೊಡಬೇಕಾ? ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಎಲ್ಲರಿಗೆ ಉದ್ಯೋಗ ಕೊಡಲು ಹೊಸ ಆರ್ಥಿಕ ನೀತಿ ಘೋಷಣೆ ಮಾಡಿ ಬಂದಿದ್ದೇವೆ. ನಮ್ಮ ಬಸವರಾಜ ಬೊಮ್ಮಾಯಿ ಸಾಹೇಬರು ಈ ಭೂಮಿಯವರು. ಬೊಮ್ಮಾಯಿ ಸಾಹೇಬ್ರೇ, ಯಡಿಯೂರಪ್ಪನವರು, ಜಗದೀಶ್ ಶೆಟ್ಟರ್, ಸದಾನಂದಗೌಡ ಸಿಎಂ ಆಗಿದ್ದರು.ಇದರಲ್ಲಿ ನಿಮ್ಮ ಭಾಗಕ್ಕೆ ಕೈಗಾರಿಕೆ ಕೊಡುತ್ತೇವೆ, ಉದ್ಯೋಗ ಕೊಡುತ್ತೇವೆ ಅಂತ ಬಂದಿದ್ದರು. ಪಟ್ಟಿ ಬಿಡುಗಡೆ ಮಾಡಿ ಎಂದರು.

ನಾವು ಸೋಲಾರ್, ವಿಂಡ್ ಮಿಲ್ ಎಲ್ಲಾ ಪ್ರಾರಂಭ ಮಾಡಿದೆವು.ಪಾವಗಡದಲ್ಲಿ 14,000 ಎಕರೆಯಲ್ಲಿ ವಿದ್ಯುತ್ ಉತ್ಪದನೆ ಮಾಡಿದೆವು. ನೀವು ಒಂದು ರೂಪಾಯಿ ಹಣ ಕೊಡಬೇಕಿಲ್ಲ, 200 ಯೂನಿಟ್ ಫ್ರೀ ವಿದ್ಯುತ್ ಕೊಡುತ್ತೇವೆ ಎಂದರು.

ಬಸವಣ್ಣನ ಆಣೆ, ಕುವೆಂಪು ಆಣೆ, ಕನಕದಾಸರ ಆಣೆ, ಶರೀಪರ ಆಣೆ 200 ಯುನಿಟ್ ಕರೆಂಟ್ ನಿಮ್ಮ ಮನೆಗೆ ಕೊಟ್ಟೇ ಕೊಡುತ್ತೇವೆ ಎಂದ ಅವರು, ಎಲ್ಲಿಂದ ತರ್ತಾರೆ ಕರೆಂಟ್ ಅಂತ ಸಚಿವ ಅಶೋಕ್ ಕೇಳ್ತಾರೆ, ಹಾಸ್ಪಿಟಲ್ ಬಿಲ್ ಕೊಡ್ತೇವೆ ಅಂತ ಕೋವಿಡ್ ಟೈಂ ನಲ್ಲಿ ಈ ಸರ್ಕಾರ ಹೇಳಿತ್ತು. ಅಂಥ ಸಂದರ್ಭದಲ್ಲಿಯೂ ಬೊಮ್ಮಾಯಿಯವರ ಕಣ್ಣು ತೆರೆಯಲಿಲ್ಲ. ನಾವು ಪ್ರತಿ ಮನೆ ಯಜಮಾನಿಗೆ 2000 ಕೊಡುತ್ತೇವೆ ಅಂತ ಘೋಷಣೆ ಮಾಡಿದ್ದೇವೆ.ಈಗ ಬೊಮ್ಮಾಯಿ‌ ನಾವು ಕೊಡುತ್ತೇವೆ ಅನ್ನುತ್ತಿದ್ದಾರೆ. ನಿಮ್ಮ ಚೇರ್ ಖಾಲಿ ಆಗುತ್ತಿರುವ ಬಜೆಟ್ ನಲ್ಲಿ ಕೊಡುತ್ತೀರಾ? ಎರಡು ತಿಂಗಳಾದ ಮೇಲೆ ನೀವು ಮಾಜಿ ಮುಖ್ಯಮಂತ್ರಿ ಎಂದರು.

ಪ್ರೈಮ್ ಮಿನಿಸ್ಟರ್ ಬಂದಿದ್ದಾರೆ. ಬಹಳ ಸಂತೋಷ. 40% ಕೆಂಪಣ್ಣ ಆರೋಪಕ್ಕೆ ಪ್ರಧಾನಿ ಉತ್ತರ ಕೊಡಲಿ.ಸರ್ಟಿಫಿಕೇಟ್ ಕೊಡ್ತಾರಂತೆ.ಸರ್ಟಿಫಿಕೇಟ್ ಆದರೂ ಕೊಡಲಿ, ಏನಾದರೂ ಕೊಡಲಿ ಎಂದು ಕಿಡಿ ಕಾರಿದರು.

ಬರಿ ಲಂಚ ಲಂಚ ಲಂಚ, ಈಶ್ವರಪ್ಪ ಲಂಚ ತಗೊಂಡು ಕಾಂಟ್ರಾಕ್ಟರ್ ಸಂತೋಷ್ ಪಾಟೀಲ್ ಸತ್ತರಲ್ಲವೆ,ಆಗ ವಿಧಾನಸೌಧದಲ್ಲಿ ಮಲಗಿದ್ದೆವು. ಆಗ ನಾನು ಗೋಡೆ ಬಾರಿಸಿದೆ.ನಾನು ಗೋಡೆಯನ್ನು ಹೊಡೆದರೆ ಕಾಸು ಕಾಸು ಕಾಸು ಅನ್ನುತ್ತಿತ್ತು. ಈಗ ಕಚೇರಿಗಳಲ್ಲಿ ಕಾಸಿಲ್ಲದೇ ಕೆಲಸ ಆಗುತ್ತೇನ್ರಿ? ಧಮ್ ಇದೆಯಾ… ಧಂ ಇದೆಯಾ…. ಅಂತ ಕೇಳುತ್ತಿದ್ದಾರೆ. ಬನ್ನಿ ಧಮ್ ಇದೆ. ತೋರಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಅವರಿಗೆ ಸವಾಲು ಹಾಕಿದರು.

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.