ಟೋಲ್ ವಿನಾಯಿತಿ ನೀಡಿ
•ಕೆಎಸ್ಆರ್ಟಿ ಬಸ್ಗಳಿಂದ ಟೋಲ್ ಸಂಗ್ರಹ ಅವೈಜ್ಞಾನಿಕ
Team Udayavani, May 31, 2019, 2:52 PM IST
ಹಾವೇರಿ: ಗ್ರಾಮೀಣ ಭಾಗದಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಗಳಿಂದ ವಸೂಲಿ ಮಾಡುತ್ತಿರುವ ಟೋಲ್ ಸಂಗ್ರಹ ರದ್ದುಪಡಿಸುವಂತೆ ಒತ್ತಾಯಿಸಿ ಜೆಡಿಎಸ್ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಹಾವೇರಿ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಗಳಿಂದ ವಸೂಲಿ ಮಾಡುತ್ತಿರುವ ಟೋಲ್ ಸಂಗ್ರಹ ರದ್ದು ಪಡಿಸುವಂತೆ ಒತ್ತಾಯಿಸಿ ಜೆಡಿಎಸ್ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಅಶೋಕ ಬೇವಿನಮರ ಮಾತನಾಡಿ, ಹಾವೇರಿ ನಗರದಿಂದ 5 ಕಿಮೀ ಹತ್ತಿರದ ಆಲದಕಟ್ಟಿ ಗ್ರಾಮದ ಬಳಿ ಟೋಲ್ಗೇಟ್ ನಿರ್ಮಿಸಿದ್ದು, ನಿತ್ಯ ಸಂಚರಿಸುವ ಕೆಎಸ್ಆರ್ಟಿ ಬಸ್ಗಳಿಂದ ಟೋಲ್ ಸಂಗ್ರಹಣೆ ಅವೈಜ್ಞಾನಿಕವಾಗಿದೆ. ಹಾವೇರಿ ನಗರದಿಂದ ದೇವಿಹೊಸೂರು ಗ್ರಾಮವು ಸುಮಾರು 8 ಕಿಮೀ ದೂರದಲ್ಲಿದ್ದು, ನಿತ್ಯವು ಹಾವೇರಿ ನಗರದಿಂದ ದೇವಿಹೊಸೂರು ಗ್ರಾಮಕ್ಕೆ ಕೆಎಸ್ಆರ್ಟಿಸಿ ಬಸ್ಗಳು 11 ಟ್ರಿಪ್ ಸಂಚರಿಸುತ್ತವೆ. ಪ್ರತಿ ಟ್ರಿಪ್ಗೆ 105 ರೂ.ಗಳಂತೆ ಒಂದು ದಿನಕ್ಕೆ 11 ಟ್ರೀಪ್ಗ್ಳಿಗೆ 1155 ರೂ.,ಗಳನ್ನು ಕೆಎಸ್ಆರ್ಟಿಸಿಯ ಮೂಲಕ ಟೋಲ್ ಸಂಗ್ರಹವಾಗುತ್ತದೆ. ಇದರಂತೆ ಇತರೆ ಹಳ್ಳಿಗಳಾದ ಕಬ್ಬೂರ, ಹೊಸೂರ ತಾಂಡಾ, ತಿಳವಳ್ಳಿ, ಸಂಗೂರ, ಉಪ್ಪಣಸಿ, ಕೆಲವರಕೊಪ್ಪ, ಕೂಸನೂರು, ಹಿರೇಹುಲ್ಲಾಳ, ಪಿ.ಜಿ. ಸೆಂಟರ್, ತಿಮ್ಮಾಪುರ, ಕುಳೇನೂರ, ಬೆಳಗಾಲಪೇಟೆ, ಬೊಮ್ಮನಹಳ್ಳಿ, ಬೆಂಚಿಹಳ್ಳಿ, ಹಾನಗಲ್ಲ, ಶಿರಸಿ ಮುುಂತಾದ ಮಾರ್ಗದಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಗಳಿಂದ ದಿನಕ್ಕೆ 100ಕ್ಕೂ ಹೆಚ್ಚು ಟ್ರೀಪ್ಗ್ಳಿಂದ ಸುಮಾರು 10 ಸಾವಿರ ಗಿಂತ ಅಕ ಟೋಲ್ ಸಂಗ್ರಹವಾಗುತ್ತದೆ. ಈ ಹಣವನ್ನು ಕೆಎಸ್ಆರ್ಟಿಸಿ ಅಧಿಕಾರಿಗಳು ಪ್ರಯಾಣಿಕರ ಮೇಲೆಯೇ ವಿಸುತ್ತಾರೆ. ಮೊದಲು ದೇವಿಹೊಸೂರ ಗ್ರಾಮಕ್ಕೆ ಪ್ರಯಾಣ 10 ರು., ಇತ್ತು ಈಗ 13 ರೂ. ಗೆ ಏರಿಸಲಾಗಿದೆ ಎಂದರು.
ಹಾವೇರಿ ನಗರಕ್ಕೆ ಸುತ್ತಮುತ್ತಲಿನ ನೂರಾರು ಗ್ರಾಮಗಳಿಂದ ಬರುವ ಪ್ರಯಾಣಿಕರಲ್ಲಿ ವಿದ್ಯಾರ್ಥಿಗಳು, ಬಡ ರೈತವರ್ಗ, ಬಡ ಕೂಲಿಕಾರ್ಮಿಕರು, ಕಟ್ಟಡದ ಕಾರ್ಮಿಕರು, ಇತರೆ ಕ್ಷೇತ್ರಗಳಲ್ಲಿ ದಿನನಿತ್ಯ ದುಡಿಯುವ ಕಾರ್ಮಿಕರು ಇವರಿಂದ ದಿನನಿತ್ಯ ಹೋಗಿ ಬರುವ ಪ್ರಯಾಣದ ದರದಲ್ಲಿ ಹೆಚ್ಚಳವಾಗಿದ್ದರಿಂದ ಹೊರೆಯಾಗುತ್ತಿದೆ. ಕೂಡಲೇ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಗಳಿಗೆ ಟೋಲ್ ಸಂಗ್ರಹದಿಂದ ವಿನಾಯಿತಿ ನೀಡುವಂತೆ ಹಾಗೂ ಪ್ರಯಾಣ ದರ ಇಳಿಕೆ ಮಾಡುಂತೆ ಜಿಲ್ಲಾಕಾರಿಗಳು ಸಂಬಂಧಪಟ್ಟ ಅಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಟೋಲ್ಗೇಟ್ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು. ಪಕ್ಷದ ಮುಖಂಡರಾದ ಎಸ್.ಎಸ್. ಕಳ್ಳಿಮನಿ, ಎಂ.ಬಿ. ಸಾವಜ್ಜಿಯವರ, ಶಿವಕುಮಾರ ಮಠದ, ಎಸ್.ಎಲ್.ಕಾಡದೇವರಮಠ, ಮಹಾಂತೇಶ ಬೇವಿನಹಿಂಡಿ, ಮಲ್ಲಿಕಾರ್ಜುನ ಆರಾಧ್ಯಮಠ, ಪರಶುರಾಮ ಗುಳಪ್ಪನವರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
ಹಾವೇರಿ: ಕಾಂಗ್ರೆಸ್ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ
ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri: ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು